![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 1, 2019, 10:12 PM IST
ಮುಂಬಯಿ : ನೋಟುಗಳ ವಿನ್ಯಾಸ, ವೈಶಿಷ್ಟ್ಯ ಗಾತ್ರಗಳನ್ನು ಪದೇ ಪದೇ ಬದಲಾಯಿಸುತ್ತಿರುವುದೇಕೆ ಮತ್ತು ಇದರ ಹಿಂದಿರುವ ನಿಜವಾದ ಕಾರಣಗಳೇನು ಎಂದು ಬಾಂಬೆ ಹೈಕೋರ್ಟ್ ರಿಸರ್ವ್ ಬ್ಯಾಂಕ್ (ಆರ್ಬಿಐ) ಗೆ ಪ್ರಶ್ನೆ ಮಾಡಿದೆ.
ರಾಷ್ಟ್ರೀಯ ಅಂಧರ ಸಮಿತಿ (ಎನ್.ಎ.ಬಿ.) ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾ. ಪ್ರದೀಪ್ ನಂದ್ರಜೋಗ್ ಮತ್ತು ನ್ಯಾ. ಎನ್.ಎಂ. ಜಾಮ್ದಾರ್ ಅವರಿದ್ದ ವಿಭಾಗೀಯ ಪೀಠ ಆರ್.ಬಿ.ಐ.ಗೆ ಹೀಗೆ ಪ್ರಶ್ನೆಯನ್ನು ಕೇಳಿದೆ.
ಎನ್.ಎ.ಬಿ. ತನ್ನ ಅರ್ಜಿಯಲ್ಲಿ, ಆರ್.ಬಿ.ಐ. ಪದೇ ಪದೇ ನೋಟುಗಳ ವಿನ್ಯಾಸಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ಅಂಧರಿಗೆ ಸಮಸ್ಯೆಯಾಗುತ್ತದೆ. ಜತೆಗೆ ನೋಟುಗಳನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು. ವಿಚಾರಣೆ ವೇಳೆ ಬೇರೆ ಯಾವುದೇ ದೇಶ ಹೀಗೆ ಕರೆನ್ಸಿಗಳ ವಿನ್ಯಾಸಗಳನ್ನು ಆಗಾಗ್ಗೆ ಬದಲಾಯಿಸುವುದಿಲ್ಲ ಎಂದೂ ನ್ಯಾಯಪೀಠ ಹೇಳಿತು. ಜತೆಗೆ ವಿನ್ಯಾಸ ಬದಲಾವಣೆ ಹಿಂದಿನ ಕಾರಣದ ಬಗ್ಗೆ ಆರು ವಾರಗಳ ಒಳಗೆ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಲವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚಿಸಿತು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.