ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತನ ಕೊಲೆ
Team Udayavani, Jan 20, 2018, 10:28 AM IST
ಕಣ್ಣೂರು: ಎಡ ಮತ್ತು ಬಲಪಂಥೀಯ ಗುಂಪುಗಳ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಕೇರಳದ ಕಣ್ಣೂರಿನ ಪೆರವೂರಿನಲ್ಲಿ ಎಬಿವಿಪಿ ಕಾರ್ಯಕರ್ತರೊಬ್ಬನನ್ನು ಮುಸುಕುಧಾರಿಗಳು ಹತ್ಯೆ ಮಾಡಿದ್ದಾರೆ. ಸಾವಿಗೀಡಾದ ದುರ್ದೈವಿಯನ್ನು ಶ್ಯಾಮ್ ಪ್ರಸಾದ್(24) ಎಂದು ಗುರುತಿಸಲಾಗಿದೆ.
ಈತ ಸರಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಶುಕ್ರವಾರ ಸಂಜೆ 5.30ರ ವೇಳೆಗೆ ಹತ್ಯೆ ಮಾಡಲಾಗಿದೆ. ಕೊಮ್ಮಾರಿ ಎಂಬಲ್ಲಿ ಈತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಮೂವರು ಮುಸುಕುಧಾರಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.