![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Mar 15, 2020, 10:55 AM IST
ನವದೆಹಲಿ: ಕೊರೊನಾ ತನ್ನ ಕಬಂಧಬಾಹುವವನ್ನು ಚಾಚುತ್ತಿರುವ ಹಿನ್ನಲೆಯಲ್ಲಿ 131 ವಿದ್ಯಾರ್ಥಿಗಳು ಸೇರಿದಂತೆ 234 ಜನರನ್ನು ವಿಶೇಷ ಏರ್ ಇಂಡಿಯಾ ವಿಮಾನ ಮೂಲಕ ಇಟಲಿಯಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ಕೊರೊನಾ ವೈರಸ್ ಕಂಟಕದಿಂದ ಇಟಲಿ ಎಲ್ಲಾ ವಿದೇಶಗಳಿಗೆ ವಿಮಾನ ಸೇವೆಗಳನ್ನು ರದ್ದುಗೊಳಿಸಿತ್ತು.
ಇಟಲಿಯಿಂದ ಬಂದ ವಿದ್ಯಾರ್ಥಿಗಳು ಸೇರಿದಂತೆ ಇತರ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, ಇವರನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಪರೀಕ್ಷಿಸಲಾಗುತ್ತದೆ.
ಸುರಕ್ಷಿತವಾಗಿ ಭಾರತಿಯರನ್ನು ಕರೆತರಲು ಕಾರಣಕರ್ತರಾದ ಇರಾನ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಧನ್ಯವಾದ ಅರ್ಪಿಸಿದ್ದಾರೆ.ಕೊರೊನಾ ವೈರಸ್ ಮಹಾಮಾರಿಯಿಂದ ಈಗಾಗಲೇ ಇರಾನ್ ನಲ್ಲಿ 611 ಜನರು ಮೃತಪಟ್ಟಿದ್ದು, 12 ಸಾವಿರಕ್ಕೂ ಹೆಚ್ಚು ಜನರಿಗಗೆ ಸೋಂಕು ತಗುಲಿದೆ. ಶನಿವಾರ ಒಂದೇ ದಿನ ಈ ವೈರಸ್ ಗೆ 97 ಜನರು ಬಲಿಯಾಗಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಕೂಡ ಏರ್ ಇಂಡಿಯಾ ವಿಮಾನ ಹಲವು ಭಾರತೀಯರನ್ನು ಇರಾನ್ ನಿಂದ ಸುರಕ್ಷಿತವಾಗಿ ಕರೆತಂದಿತ್ತು.
You seem to have an Ad Blocker on.
To continue reading, please turn it off or whitelist Udayavani.