![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ
ನಾಂದೇಡ್ನ ಇಬ್ಬರು ಸರಕಾರಿ ಶಿಕ್ಷಕರನ್ನು ವಶಕ್ಕೆ ಪಡೆದ ಮಹಾ ಎಟಿಎಸ್
Team Udayavani, Jun 24, 2024, 1:46 AM IST
![Exam](https://www.udayavani.com/wp-content/uploads/2024/06/Exam-8-620x349.jpg)
ಹೊಸದಿಲ್ಲಿ: ನೀಟ್ ಯುಜಿ ಪರೀಕ್ಷೆ ಅಕ್ರಮವು ಬಿಹಾರ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲೂ ನಡೆದಿದ್ದು, ಉಗ್ರ ನಿಗ್ರಹ ದಳ (ಎಟಿಎಸ್)ವು ರವಿವಾರ ನಾಂದೇಡ್ನ ಇಬ್ಬರು ಶಿಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಇದರೊಂದಿಗೆ ನೀಟ್ ಅಕ್ರಮವು ಹಲವು ರಾಜ್ಯಗಳಲ್ಲಿ ವ್ಯಾಪಿಸಿರಬಹುದು ಎಂಬ ಸಂದೇಹ ಬಲವಾಗಿದೆ.
ನಾಂದೇಡ್ನ ಸಂಜಯ್ ತುಕಾರಾಮ್ ಜಾಧವ್ ಮತ್ತು ಜಲೀಲ್ ಉಮರ್ಖಾನ್ ಪಠಾಣ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಸಿಬಿಐಯಿಂದ ಎಫ್ಐಆರ್ ದಾಖಲು
ನೀಟ್ ಯುಜಿ ಅಕ್ರಮ ಕುರಿತು ತನಿಖೆ ಆರಂಭಿಸಿರುವ ಸಿಬಿಐಯು ರವಿವಾರ ಎಫ್ಐಆರ್ ದಾಖಲಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ಇತರ ರಾಜ್ಯಗಳಲ್ಲೂ ಸಿಬಿಐ ತನಿಖೆ ನಡೆಸಲಿದೆ. ಹೆಚ್ಚಿನ ತನಿಖೆಗಾಗಿ ಸಿಬಿಐ ತಂಡಗಳು ಬಿಹಾರ ಮತ್ತು ಗುಜರಾತ್ಗೂ ಭೇಟಿ ನೀಡಲಿದೆ.
ನೀಟ್ ಹಗರಣ ದಲ್ಲಿ ಮೋದಿ ಸರ ಕಾರದ ಉನ್ನತ ಅಧಿಕಾರಿಗಳ ಮನೆ ಬಾಗಿಲಿಗೆ ಹಣ ಬಂದು ನಿಲ್ಲುತ್ತದೆ. ಸಮಸ್ಯೆಗೆ ಅಧಿಕಾರಿ ಗಳನ್ನು ಹೊಣೆಗಾರರನ್ನಾಗಿಸುವುದರ ಬದಲು ಅಧಿಕಾರದಲ್ಲಿರುವ ದೊಡ್ಡ ವರೇ ಹೊಣೆ ಹೊರಲಿ. -ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.