NEET; ಗೋಧ್ರಾದಲ್ಲೇ ಪರೀಕ್ಷೆ ಬರೆಯುವಂತೆ ಅಭ್ಯರ್ಥಿಗಳಿಗೆ ಸೂಚನೆ?
Team Udayavani, Jun 30, 2024, 6:20 AM IST
ಹೊಸದಿಲ್ಲಿ: ನೀಟ್ ಪರೀಕ್ಷೆ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ಶನಿವಾರ ಗುಜರಾತ್ನ 7 ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದೆ.
ಆನಂದ್, ಖೇಡಾ, ಅಹ್ಮದಾಬಾದ್, ಗೋಧ್ರಾ ಸೇರಿಬೇರೆ ಬೇರೆ ಜಿಲ್ಲೆಗಳಲ್ಲಿ ಶಂಕಿತರ ನಿವಾಸಗಳ ಮೇಲೆ ದಾಳಿ ನಡೆದಿದೆ. ಇದೊಂದು ಅಂತಾರಾಜ್ಯ ಜಾಲವಾಗಿದ್ದು, ಗುಜರಾತ್, ರಾಜಸ್ಥಾನ, ಬಿಹಾರ, ದಿಲ್ಲಿ, ಝಾರ್ಖಂಡ್ ಸೇರಿ ಹಲವು ರಾಜ್ಯಗಳಿಗೆ ವ್ಯಾಪಿಸಿರುವ ಅನುಮಾನವಿದೆ. ಆರೋಪಿಗಳು ಗೋಧ್ರಾದಿಂದಲೇ ಪರೀಕ್ಷೆ ಬರೆಯುವಂತೆ ನೀಟ್ ಅಭ್ಯರ್ಥಿಗಳಿಗೆ ನಿರ್ದೇಶಿದ್ದರು ಎಂಬ ಶಂಕೆಯನ್ನು ಸಿಬಿಐ ಮೂಲಗಳು ವ್ಯಕ್ತಪಡಿಸಿವೆ. ಅರ್ಜಿಗಳಲ್ಲಿ ಗೋಧ್ರಾವನ್ನೇ ತಮ್ಮ ಕೇಂದ್ರ ಎಂದು ಭರ್ತಿ ಮಾಡುವಂತೆ ಬೇರೆ ಬೇರೆ ರಾಜ್ಯಗಳ ಅಭ್ಯರ್ಥಿಗಳಿಗೆ ಆರೋಪಿಗಳು ಸೂಚಿಸಿದ್ದರು. ಅಲ್ಲದೆ ಪರೀಕ್ಷೆ ಬರೆಯುವ ಮಾಧ್ಯಮವನ್ನು “ಗುಜರಾತಿ’ ಎಂದು ಉಲ್ಲೇಖಿಸುವಂತೆಯೂ ಸೂಚಿಸಲಾಗಿತ್ತು.
ಆರೋಪಿಗಳ ಸೂಚನೆಯಂತೆಯೇ, ಅಭ್ಯರ್ಥಿಗಳು ತಮ್ಮ ಖಾಯಂ ವಿಳಾಸವನ್ನು “ಗುಜರಾತ್ನ ಪಂಚಮಹಲ್/ವಡೋದರಾ’ ಎಂದು ಉಲ್ಲೇಖೀಸಿದ್ದರು ಎಂದು ಹೇಳಲಾಗಿದೆ. ಸಿಬಿಐ ಈಗಾಗಲೇ ಪ್ರಕರಣ ಸಂಬಂಧ 6 ಎಫ್ಐಆರ್ಗಳನ್ನು ದಾಖಲಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು
Horoscope: ಅಕಸ್ಮಾತ್ ಧನಾಗಮ ಯೋಗ ನಿಮ್ಮದಾಗಲಿದೆ
Government ಹೊಸ ಅಪರಾಧ ಸಂಹಿತೆಗೆ ರಾಜ್ಯದಲ್ಲಿ ತಿದ್ದುಪಡಿ
CM DCM ಹೇಳಿಕೆ ನಿಲ್ಲಿಸದಿದ್ದರೆ ಶೋಕಾಸ್ ನೋಟಿಸ್: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಚ್ಚರಿಕೆ
Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.