65000 ಅಡಿ ಎತ್ತರದಲ್ಲಿ 90 ದಿನ ಹಾರಾಡುವ ಡ್ರೋನ್!
ಮಾನವರಹಿತ ಡ್ರೋನ್ ದಾಳಿಯು ಯಶಸ್ವಿಯಾಯಿತೋ, ಇಲ್ಲವೋ ಎಂಬುದನ್ನು ದೃಢಪಡಿಸಲು ನೆರ
Team Udayavani, Feb 5, 2021, 11:14 AM IST
ನವದೆಹಲಿ: ಮುಂದಿನ ಮೂರದಿಂದ ಐದು ವರ್ಷಗಳಲ್ಲೇ ಭಾರತದ ಸಶಸ್ತ್ರ ಪಡೆಗಳಿಗೆ ಸ್ವದೇಶಿ ನಿರ್ಮಿತ ಡ್ರೋನ್ “ಇನ್ಫಿನಿಟಿ’ ಸೇರ್ಪಡೆಯಾಗಲಿದ್ದು, ದೇಶದ ಮಾನವರಹಿತ ಡ್ರೋನ್ ಯುದ್ಧತಂತ್ರದಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. ಹಾಗೂ ಬೆಂಗಳೂರು ಮೂಲದ ಸ್ಟಾರ್ಟಪ್ ನ್ಯೂಸ್ಪೇಸ್ ಸಹಭಾಗಿತ್ವದಲ್ಲಿ ಈ ಡ್ರೋನ್ ಅಭಿವೃದ್ಧಿಗೊಳ್ಳುತ್ತಿದೆ. ಸೌರಚಾಲಿತ ಡ್ರೋನ್ ಇದಾಗಿರಲಿದ್ದು, ಮುಂದಿನ ತಲೆಮಾರಿನ ಯುದ್ಧ
ತಂತ್ರಕ್ಕೆ ಹೊಂದುವಂತೆ ಇದನ್ನು ತಯಾರಿಸಲಾಗಿದೆ.
ಅತ್ಯಾಧುನಿಕ ಸಿಂಥೆಟಿಕ್ ಅಪರ್ಚರ್ ರೇಡಾರ್ ಸೇರಿದಂತೆ ವಿವಿಧ ಬಗೆಯ ಸೆನ್ಸರ್ಗಳನ್ನು ಒಳಗೊಂಡ ಇನ್ಫಿನಿಟಿ ಡ್ರೋನ್, ಶತ್ರುಗಳ ನೆಲದೊಳಗಿನ ಆಳವಾದ ಟಾರ್ಗೆಟ್ಗಳನ್ನು ಟ್ರ್ಯಾಕ್ ಮಾಡಿ, ಭಾರತದ ಇತರೆ ಡ್ರೋನ್ ವ್ಯವಸ್ಥೆಗಳು ಕೈಗೊಳ್ಳುವ ದಾಳಿಗಳಿಗೆ ಸಹಾಯ ಮಾಡುತ್ತದೆ. ಸದ್ಯ ಭಾರತದಲ್ಲಿ ಸ್ವದೇಶಿ ಕಾಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಂ(ಸಿಎಟಿಎಸ್)ನ ಭಾಗವಾಗಿರುವ ವಾರಿಯರ್ ಲೋಯಲ್ ವಿಂಗ್ಮ್ಯಾನ್, ಆಲ್ಫಾ-ಎಸ್ ಸ್ವಾರ್ಮ್ ಡ್ರೋನ್ಗಳು, ಹಂಟರ್ ಕ್ರೂಸ್ ಕ್ಷಿಪಣಿಗಳು ದಾಳಿ ಯೋಜನೆಗಳನ್ನು ಕೈಗೊಳ್ಳುತ್ತವೆ.
ವಿಡಿಯೋ ನೇರ ಪ್ರಸಾರ: ದಾಳಿ ಡ್ರೋನ್ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ಮೇಲ್ವಿಚಾರಣಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯವನ್ನು ಇನ್ಫಿನಿಟಿ ಹೊಂದಿದ್ದು, ಇದರಿಂದಾಗಿ ಮಾನವರಹಿತ ಡ್ರೋನ್ ದಾಳಿಯು ಯಶಸ್ವಿಯಾಯಿತೋ, ಇಲ್ಲವೋ ಎಂಬುದನ್ನು ದೃಢಪಡಿಸಲು ನೆರವಾಗಲಿದೆ.
2019ರಲ್ಲಿ ಪಾಕಿಸ್ತಾನದ ಬಾಲಕೋಟ್ನ ಉಗ್ರ ಶಿಬಿರಗಳ ಮೇಲೆ ನಮ್ಮ ವಾಯುಪಡೆಯು ದಾಳಿ ನಡೆಸಿದಾಗ, ನಮ್ಮಲ್ಲಿ ಇಂಥದ್ದೊಂದು ತಂತ್ರಜ್ಞಾನ ಇರಲಿಲ್ಲ. ಹೀಗಾಗಿ, ದಾಳಿಯ ವಿಡಿಯೋ ದೊರೆತಿರಲಿಲ್ಲ ಹಾಗೂ ಅದರ ಯಶಸ್ಸಿನ ಕುರಿತು ಪ್ರಶ್ನೆಗಳನ್ನೂ ಎದುರಿಸಬೇಕಾಯಿತು.
ವೈಶಿಷ್ಟ್ಯಗಳೇನು?
● ಇದು ಸೌರ ಚಾಲಿತ ಡ್ರೋನ್, 90 ದಿನಗಳ ಕಾಲ 65,000ಕ್ಕೂ ಹೆಚ್ಚು ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ
● ಅತ್ಯಾಧುನಿಕ ಸಿಂಥೆಟಿಕ್ ಅಪರ್ಚರ್ ರೇಡಾರ್ ಹೊಂದಿದೆ, ಹಲವು ಬಗೆಯ ಸೆನ್ಸರ್ಗಳುಳ್ಳ ಡ್ರೋನ್
● ದಾಳಿ ಡ್ರೋನ್ಗಳ ನೇರ ವಿಡಿಯೋ ಪ್ರಸಾರವನ್ನು ಭೂಮಿಯಲ್ಲಿರುವ ನಿಗಾ ಕೇಂದ್ರಕ್ಕೆ ರವಾನಿಸುವ ಸಾಮರ್ಥ್ಯ
● ವಿಪತ್ತು ನಿರ್ವಹಣೆ, ಸ್ಮಾರ್ಟ್ ಸಿಟಿ, ಕರಾವಳಿ ರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೂ ಇವುಗಳ ಬಳಕೆ ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್ ಡೆಲಿವರಿ ಯುವಕ ಆತ್ಮಹತ್ಯೆ
Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ
Chennai: ರಸ್ತೆ ಬದಿ ಪತ್ತೆಯಾದ ಸೂಟ್ಕೇಸ್ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…
Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.