ಸುಖೋಯ್ ಬಗ್ಗೆ ಮಾಹಿತಿ ಇಲ್ಲ; ಶಾಂತಿ ಕದಡಬೇಡಿ: ಭಾರತಕ್ಕೆ ಚೀನ
Team Udayavani, May 24, 2017, 4:21 PM IST
ಬೀಜಿಂಗ್ : ನಿನ್ನೆ ಮಂಳವಾರ ತನ್ನ ಎಂದಿನ ಅಭ್ಯಾಸ ಹಾರಾಟದಲ್ಲಿ ಭಾರತ-ಚೀನ ಗಡಿಗೆ ಸಮೀಪದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯು ಪಡೆಯು ಸುಖೋಯ್-30 ಯುದ್ಧ ವಿಮಾನದ ಬಗ್ಗೆ ತನಗೇನೂ ಮಾಹಿತಿ ಇಲ್ಲ ಎಂದು ಚೀನ ಹೇಳಿದೆ. ಮಾತ್ರವಲ್ಲದೆ, ಭಾರತ ಈ ಪ್ರದೇಶದಲ್ಲಿನ ಶಾಂತಿ ಮತ್ತು ಸುಭದ್ರತೆಗೆ ಧಕ್ಕೆ ಉಂಟುಮಾಡಬಾರದು ಎಂದೂ ಅದು ಹೇಳಿದೆ.
ಇಬ್ಬರು ಪೈಲಟ್ಗಳನ್ನು ಒಳಗೊಂಡಿದ್ದ ಸುಖೋಯ್ ಯುದ್ಧ ವಿಮಾನವು ನಿನ್ನೆ ಮಂಗಳವಾರ ಅಸ್ಸಾಂನ ತೇಜಪುರ ವಾಯುನೆಲೆಯಿಂದ ಗಗನಕ್ಕೇರಿದ ಬಳಿಕ ನಿಗೂಢವಾಗಿ ನಾಪತ್ತೆಯಾಗಿತ್ತು.
ನಾಪತ್ತೆಯಾಗಿರುವ ಯುದ್ಧ ವಿಮಾನವನ್ನು ಪತ್ತೆ ಹಚ್ಚಲು ಚೀನವು ಭಾರತಕ್ಕೆ ನೆರವಾಗುವುದೇ ಎಂಬ ಪ್ರಶ್ನೆಗೆ ಚೀನ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಅವರು “ಭಾರತ ಈಶಾನ್ಯ ಗಡಿ ಭಾಗದಲ್ಲಿನ ಶಾಂತಿಯನ್ನು ಕದಡಬಾರದು’ ಎಂದು ಹೇಳಿದರು.
“ವಿಮಾನ ನಾಪತ್ತೆಗೆ ಸಂಬಂಧಿಸಿದಂತೆ ನಮಗೆ ಈ ಕ್ಷಣದಲ್ಲಿ ಯಾವುದೇ ಮಾಹಿತಿ ಇಲ್ಲ’ ಎಂದವರು ಹೇಳಿದರು.
ಚೀನವು ಭಾರತದ ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್ ಎಂದು ಹೇಳುತ್ತಿದ್ದು ಈ ವರ್ಷ ಎಪ್ರಿಲ್ನಲ್ಲಿ ಟಿಬೆಟ್ ಧರ್ಮಗುರು ದಲಾಯಿ ಲಾಮಾ ಅವರು ಅರುಣಾಚಲಕ್ಕೆ ಭೇಟಿ ನೀಡಿರುವುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ಬಾಂಧವ್ಯ ಕದಡಿದೆ.
ಭಾರತದ ಈಶಾನ್ಯ ರಾಜ್ಯಗಳ ಮುಂಚೂಣಿ ವಾಯು ನೆಲೆಗಳಲ್ಲಿ ಸುಖೋಯ್ 30 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿರುವುದು ಕೂಡ ಚೀನಕ್ಕೆ ಅಸಮಾಧಾನ ಉಂಟು ಮಾಡಿದೆ.
ನಾಪತ್ತೆಯಾಗಿರುವ ಯುದ್ಧ ವಿಮಾನಕ್ಕಾಗಿ ಭಾರತೀಯ ವಾಯು ಪಡೆ ಇನ್ನೂ ತೀವ್ರವಾದ ಹುಡುಕಾಟದಲ್ಲಿ ತೊಡಗಿದೆ. ಅಸ್ಸಾಂನ ಎಲ್ಲ ಜಿಲ್ಲಾಧಿಕಾರಿಗಳಿಗೆ ವಿಮಾನದ ಅವಶೇಷಗಳು ಪತ್ತೆಯಾದಲ್ಲಿ ತತ್ಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.