![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jan 8, 2022, 7:40 AM IST
ಹೊಸದಿಲ್ಲಿ: ಕುತ್ಸಿತ ಚೀನಕ್ಕೆ ಭಾರತದ ವಿರುದ್ಧ ಪದೇ ಪದೆ ಕುಟುಕುವುದು ಅಭ್ಯಾಸ. ಅಲ್ಲಿನ ಸರಕಾರಿ ಮಾಧ್ಯಮಗಳಲ್ಲಿ ಪ್ರಕಟ ಗೊಂಡಿದ್ದ ಮಾಹಿತಿ ಪ್ರಕಾರ ಭಾರತದ ಜತೆಗೆ ಹೊಂದಿಕೊಂಡಿರುವ ಗಡಿ ಪ್ರದೇಶಗಳಲ್ಲಿ ಯಂತ್ರಮಾನವ ಯೋಧರನ್ನು (ರೋಬೋಟಿಕ್ ಸೋಲ್ಜರ್) ನಿಯೋಜಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಆದರೆ, ದೇಶದ ವೀರ ಯೋಧರು ಅದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಲಡಾಖ್ಗೆ ಹೊಂದಿಕೊಂಡಂತೆ ಇರುವ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್ಎಸಿ) ನಿಖರವಾಗಿ ತಪಾಸಣೆ ಮಾಡಿದ ಬಳಿಕ ಯಂತ್ರಮಾನವ ಯೋಧರನ್ನು ನಿಯೋಜನೆ ಮಾಡಿರುವ ಅಂಶ ಖಚಿತಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
2020ರಲ್ಲಿ ಗಾಲ್ವನ್ ಗಲಾಟೆಯ ಬಳಿಕ ಎರಡೂ ದೇಶಗಳ ಯೋಧರಿಗೆ ಮೈನಸ್ 20 ಡಿಗ್ರಿ ಸೆಲ್ಸಿಯಸ್ನಲ್ಲಿ ಕಾವಲು ಕಾಯುವ ಸ್ಥಿತಿ ಉಂಟಾಗಿದೆ. ಎಲ್ಎಸಿಯಲ್ಲಿ ಚೀನ ಯೋಧರು, ದೇಶದ ವಿರುದ್ಧ ಚಿತಾವಣೆ ಮಾಡುತ್ತಿದ್ದರೂ ಅಗತ್ಯ ಬಿದ್ದರೆ, ಅವರಿಗೆ ಸಹಾಯ ಮತ್ತು ನೆರವಿನ ಹಸ್ತವನ್ನು ನೀಡುವ ಬಗ್ಗೆ ಭಾರತೀಯ ಯೋಧರು ಮಾತನಾಡಿದ್ದಾರೆ.
ಇದನ್ನೂ ಓದಿ:ಪಾಕ್ ಸುಪ್ರೀಂಕೋರ್ಟ್ಗೆ ಮೊದಲ ಮಹಿಳಾ ಜಡ್ಜ್
12ರಂದು ಮಾತುಕತೆ?: ಈ ನಡುವೆ, ಭಾರತ ಮತ್ತು ಚೀನ ನಡುವೆ ಗಡಿ ತಕರಾರು ಬಗೆಹರಿಸುವ ನಿಟ್ಟಿನಲ್ಲಿ ಜ.12ರಂದು ಕಮಾಂಡರ್ಗಳ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆ ಇದೆ. ಇದು 14ನೇ ಸುತ್ತಿನ ಮಾತುಕತೆಯಾಗಲಿದ್ದು, ಇದುವರೆಗೆ ಬಗೆಹರಿಯದ ವಿಚಾರಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುತ್ತದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.