OM; ದೇವಸ್ಥಾನಗಳ ಪರಿಸರದಲ್ಲಿನ ಅಂಗಡಿಗಳಿಗೆ ಓಂ ಪ್ರಮಾಣಪತ್ರ: ರಾಜಾ ಸಿಂಗ್

ಉಗುಳು ಜಿಹಾದ್, ಗೋವಿನ ಚರ್ಮದ ತುಪ್ಪದ ಪ್ರಸಾದ ನೀಡಲಾಗುತ್ತಿದೆ...

Team Udayavani, Jun 29, 2024, 8:18 PM IST

1-wwewewq

ಪಣಜಿ: ದೇಶದಾದ್ಯಂತ ದೇವಸ್ಥಾನಗಳ ಪರಿಸರದಲ್ಲಿನ ಹಿಂದು ಅಂಗಡಿಕಾರರು ಓಂ ಪ್ರಮಾಣಪತ್ರವನ್ನು ಅವಶ್ಯ ಪಡೆಯಬೇಕು, ಎಂದು ನಾನು ವಿನಂತಿಸುತ್ತೇನೆ, ಎಂಬ ಕರೆಯನ್ನು ತೆಲಂಗಾಣಾ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿಕೆ ನೀಡಿದ್ದಾರೆ.

ಗೋವಾದ ಪೊಂಡಾದ ಶ್ರೀ ರಾಮನಾಥಿಯಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ’ ಇಂದು ಎಲ್ಲೆಡೆಯ ಚಿತ್ರವನ್ನು ನೋಡಿದರೆ ಥೂಕ ಜಿಹಾದ್,(ಉಗುಳು ಜಿಹಾದ್) ಆಕಳ ಚರ್ಮದಿಂದ ತಯಾರಿಸಿದ ತುಪ್ಪದಿಂದ ಹಿಡಿದು ಪದಾರ್ಥಗಳು, ಖವಾ, ಪೇಢೆ ಇವುಗಳನ್ನು ಪ್ರಸಾದವೆಂದು ಬಹಿರಂಗವಾಗಿ ವಿತರಿಸಲಾಗುತ್ತಿದೆ. ಭಕ್ತರು ಭಕ್ತಿಭಾವದಿಂದ ದೇವರಿಗೆ ಅದನ್ನು ಅರ್ಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ದೊಡ್ಡ ಪೆಟ್ಟಾಗಿದೆ. ಇಂದು ಅನೇಕ ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಯೇತರ ಅಂಗಡಿಕಾರರ ಪ್ರಸಾದದ, ಪೂಜಾಸಾಹಿತ್ಯಗಳ ಅಂಗಡಿಗಳು ಇರುತ್ತವೆ. ಅವರ ಬಳಿ ಇರುವ ಪ್ರಸಾದ ಮತ್ತು ಸಾಹಿತ್ಯಗಳೂ ಶುದ್ಧ ಮತ್ತು ಪವಿತ್ರ ಇರುತ್ತವೆ ಎಂದು ಹೇಳಲು ಬರುವುದಿಲ್ಲ. ಹೊರ ಊರಿನಿಂದ ಬಂದ ಭಕ್ತರಿಗೆ ಶುದ್ಧ ಪ್ರಸಾದ ಎಲ್ಲಿ ಸಿಗುತ್ತದೆ, ಎಂದು ಗೊತ್ತಿರುವುದಿಲ್ಲ. ಆದುದರಿಂದ ಸದ್ಯ ಕೇವಲ ಹಿಂದು ಅಂಗಡಿಕಾರರಿಗೆ ಪ್ರಸಾದ ಶುದ್ಧಿಗಾಗಿ ಓಂ ಪ್ರಮಾಣಪತ್ರವನ್ನು ವಿತರಿಸಲು ಆರಂಭಿಸಲಾಗಿದೆ. ಹಿಂದು ಅಂಗಡಿಕಾರರಿಗೆ ಓಂ ಪ್ರಮಾಣಪತ್ರವನ್ನು ಉಚಿತವಾಗಿ ನೀಡಲಾಗುತ್ತದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಶಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣಭೂಮಿ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ಮೊಕದ್ದಮೆಗಳನ್ನು ಹೋರಾಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂಧೆ ಮತ್ತು ಗೋಮಂತಕ ದೇವಸ್ಥಾನ ಮಹಾಸಂಘದ ರಾಜ್ಯ ಸಂಸದರು ಜಯೇಶ ಥಳಿ ಇವರು ಉಪಸ್ಥಿತರಿದ್ದರು.

ರಮೇಶ ಶಿಂಧೆ ಮಾತನಾಡಿ, ಮುಸಲ್ಮಾನರ ಒತ್ತಡದಿಂದಾಗಿ ದೇಶದಲ್ಲಿ ಹಲಾಲ್ ಸರ್ಟಿಫಿಕೆಟ್ ಅನ್ನು ಎಲ್ಲ ಉತ್ಪಾದನೆಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಿಂದೂಗಳಿಗೂ ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಪಡೆದುಕೊಳ್ಳಬೇಕಾಗುತ್ತಿದೆ. ತಮಿಳುನಾಡಿನ ದೇವಸ್ಥಾನಗಳಲ್ಲಿ ಹಲಾಲ್ ಪ್ರಮಾಣಿತ ಪದಾರ್ಥಗಳನ್ನು ಮಾರಲಾಗುತ್ತಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ. ದೇವರಿಗೆ ಅರ್ಪಿಸುವ ಪ್ರಸಾದವು ಶುದ್ಧ ಮತ್ತು ಸಾತ್ತ್ವಿಕವಾಗಿರಬೇಕು, ಇದು ಧರ್ಮಾಚರಣೆಯನ್ನು ಮಾಡುವ ಹಿಂದೂಗಳ ಹಕ್ಕಾಗಿದೆ. ಹಿಂದೂಗಳಿಗೆ ಶುದ್ಧ ಮತ್ತು ಉತ್ತಮ ಮಟ್ಟದ ಪ್ರಸಾದ ದೊರೆಯಲು ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ರಣಜೀತ ಸಾವರಕರ ಇವರ ಓಂ ಪ್ರತಿಷ್ಠಾನದ ವತಿಯಿಂದ ಓಂ ಪ್ರಮಾಣಪತ್ರ (ಸರ್ಟಿಫಿಕೆಟ್) ಬಿಡುಗಡೆಯಾಗಿದೆ.ಮಹಾರಾಷ್ಟ್ರದಲ್ಲಿ ತ್ರ್ಯಂಬಕೇಶ್ವರದಲ್ಲಿನ ದೇವಸ್ಥಾನಗಳ ಪರಿಸರದಲ್ಲಿ 100 ಪ್ರಸಾದ ಮಾರಾಟಗಾರರಿಗೆ ಓಂ ಸರ್ಟಿಫಿಕೆಟ್ ನೀಡಲಾಗಿದೆ. ಹಾಗೆಯೇ ಈ ಪ್ರಮಾಣಪತ್ರವನ್ನು ದೇಶದಾದ್ಯಂತದ ದೇವಸ್ಥಾನಗಳ ಪರಿಸರದಲ್ಲಿ ಅಂಗಡಿಕಾರರಿಗೆ ಅಳವಡಿಸಲು ಪ್ರಯತ್ನಿಸಲಾಗುವುದು ಎಂದರು.

ವಕ್ಫ್ ಬೋರ್ಡನ್ನು ವಿಸರ್ಜಿಸಿ !
ನ್ಯಾಯವಾದಿ ವಿಷ್ಣು ಜೈನ್ ಮಾತನಾಡಿ, ಹಿಂದೂಗಳ ಅನೇಕ ಪ್ರಾಚೀನ ದೇವಸ್ಥಾನಗಳು ಭಾರತೀಯ ಪುರಾತತ್ತ್ವ ಇಲಾಖೆ ನಿಯಂತ್ರಣದಲ್ಲಿವೆ; ಆದರೆ ಪುರಾತತ್ತ್ವ ಇಲಾಖೆಯ ದುರ್ಲಕ್ಷದಿಂದಾಗಿ ಈ ದೇವಸ್ಥಾನಗಳು ಜೀರ್ಣಗೊಂಡಿವೆ. ಆ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಕೊನೆಯ ಹಂತದಲ್ಲಿವೆ. ವಾಸ್ತವದಲ್ಲಿ ಈ ದೇವಸ್ಥಾನಗಳು ಹಿಂದೂಗಳು ಅಮೂಲ್ಯ ಸಂಪತ್ತು ಆಗಿರುವುದರಿಂದ ಕೇಂದ್ರ ಸರಕಾರವು ಅವುಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರವನ್ನು ಮಾಡಬೇಕು, ಎಂದು ನಮ್ಮ ಬೇಡಿಕೆ ಇದೆ ಎಂದರು.

ದೇಶದ ವಿಭಜನೆಯಾದ ನಂತರ ಭಾರತದ ಅನೇಕ ಮುಸಲ್ಮಾನರು ತಮ್ಮ ಸಾವಿರಾರು ಎಕರೆ ಭೂಮಿ ಮತ್ತು ಸಂಪತ್ತು ಬಿಟ್ಟು ಪಾಕಿಸ್ಥಾನಕ್ಕೆ ಹೋದರು. ಅವರ ಈ ಸಂಪತ್ತನ್ನು ಇವ್ಹ್ಯಕ್ಯು ಪ್ರಾಪರ್ಟಿ ಆಕ್ಟ್, 1950 ಕ್ಕನುಸಾರ ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು; ಆದರೆ ಆಗಿನ ಕಾಂಗ್ರೆಸ್ ಸರಕಾರವು ಈ ಎಲ್ಲ ಸಂಪತ್ತನ್ನು ವಕ್ಫ್ ಗೆ ನೀಡಿ ಅವರ ವಕ್ರ್ಪ ಬೊರ್ಡ್ ಸ್ಥಾಪಿಸಿತು. ಆದುದರಿಂದ ಅವರ ಈ ಕೃತಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ವಾಸ್ತವದಲ್ಲಿ ಆ ಭೂತಿ ಪಾಕಿಸ್ತಾನದಲ್ಲಿ ತಮ್ಮ ಸಂಪತ್ತನ್ನು ಬಿಟ್ಟು ಬಂದ ಹಿಂದೂಗಳಿಗೆ ನೀಡುವುದು ಆವಶ್ಯಕವಾಗಿತ್ತು. ಆದರೆ ಈಗ ವಕ್ಫ್ ಬೊರ್ಡ್ ಪ್ರಸ್ತುತ ಭೂಮತಿಯನ್ನು ಸರಕಾರ ಮತ್ತು ಖಾಸಗಿ ಜನರಿಗೆ ಬಾಡಿಗೆಯ ಕರಾರಿನ ಮೇಲೆ ನೀಡಿ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ, ಇದು ತಪ್ಪಾಗಿದೆ. ಸರಕಾರದ ಜಾಗವನ್ನು ಪಡೆದು ಅದೇ ಜಾಗಕ್ಕಾಗಿ ಸರಕಾರದಿಂದ ಬಾಡಿಗೆ ಪಡೆಯುವುದು ಇದು ಕಾನೂನು ಬಾಹಿರವಾಗಿದೆ. ಆದುದರಿಮದ ಈ ವಕ್ಫ್ ಬೋರ್ಡ್ ವಿಸರ್ಜಿಸಬೇಕು ಎಂದರು.

ಈ ಸಮಯದಲ್ಲಿ ಗೋಮಂತಕ ಮಂದಿರ ಮಹಾಸಂಘದ ಜಯೇಶ ಥಳಿ ಮಾತನಾಡಿ,’ ನಾವು ಮಂದಿರ ಮಹಾಸಂಘದ ವತಿಯಿಂದ ಗೋವಾದ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಫಾಸ್ಟಫುಡ್ ಮತ್ತು ಪ್ಲಾಸ್ಟಿಕ್ ಚೀಲಗಳ ವಿರುದ್ಧ ಅಭಿಯಾನವನ್ನು ನಡೆಸಿದ್ದೇವೆ. ಅದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ. ಈಗ ನಾವು ಗೋವಾದಲ್ಲಿನ ಎಲ್ಲ ಮಂದಿರಗಳ ಪರಿಸರದಲ್ಲಿ ಹಿಂದು ಅಂಗಡಿಕಾರರಿಗೆ ಓಂ ಸರ್ಟಿಫಿಕೆಟ್ ಆರಂಭಿಸುವ ಬಗ್ಗೆ ಹೇಳಲಿದ್ದೇವೆ. ಇದರಿಂದ ಬರುವ ಭಕ್ತರಿಗೆ ಶುದ್ಧ ಸಾತ್ತ್ವಿಕ ಪ್ರಸಾದ ದೊರಕುಲಿದೆ ಎಂದರು.

ಟಾಪ್ ನ್ಯೂಸ್

North Indian ರಾಜ್ಯಗಳ ಜನರ ವಲಸೆ ತಡೆಗಟ್ಟಿ: ಕರವೇ

North Indian ರಾಜ್ಯಗಳ ಜನರ ವಲಸೆ ತಡೆಗಟ್ಟಿ: ಕರವೇ

Sadananda Gowda ಪಕ್ಷದ ವಿರುದ್ಧ ಮಾತನಾಡುವವರಿಗೆ ಬಿಜೆಪಿಯಲ್ಲಿ ಮಣೆ

Sadananda Gowda ಪಕ್ಷದ ವಿರುದ್ಧ ಮಾತನಾಡುವವರಿಗೆ ಬಿಜೆಪಿಯಲ್ಲಿ ಮಣೆ

Hassan ಕಾರು ಪಲ್ಟಿಯಾಗಿ ಮಹಿಳೆ ಸಾವು; ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ

Hassan ಕಾರು ಪಲ್ಟಿಯಾಗಿ ಮಹಿಳೆ ಸಾವು; ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ

1-weewwqewqewqewqe

Vijayapura: ಸೇನಾ ಹವಾಲ್ದಾರ್ ರಾಜು ಕರ್ಜಗಿ ನಿಧನ

ತಿಂಗಳಲ್ಲಿ 2,300ಕ್ಕೂ ಅಧಿಕ ಡೆಂಗ್ಯೂ ಪ್ರಕರಣ

Dengue Cases ತಿಂಗಳಲ್ಲಿ 2,300ಕ್ಕೂ ಅಧಿಕ ಡೆಂಗ್ಯೂ ಪ್ರಕರಣ

Road Mishap ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

Road Mishap ಕಾರುಗಳ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಂಭೀರ ಗಾಯ

Deshpande

Guarantee Schemes: ಸಿರಿವಂತರು ಉಚಿತ ಯೋಜನೆ ಬಳಸುವುದು ಸೂಕ್ತವಲ್ಲ-ಆರ್‌.ವಿ.ದೇಶಪಾಂಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah

3 new criminal laws; ತಮಿಳು ಸೇರಿ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ: ಶಾ

police crime

New criminal law ಅಡಿಯಲ್ಲಿ ಕನ್ನಡಿಗನ ವಿರುದ್ಧ ಮೊದಲ ಕೇಸ್ ದಾಖಲಿಸಿದ ಕೇರಳ ಪೊಲೀಸ್

1-INDI-M

Stop ‘misusing’; ಸಂಸತ್ ಆವರಣದಲ್ಲಿ ವಿಪಕ್ಷ ಸಂಸದರಿಂದ ಪ್ರತಿಭಟನೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

Defamation Case: 24 ವರ್ಷದ ಹಿಂದಿನ ಪ್ರಕರಣ- ಮೇಧಾ ಪಾಟ್ಕರ್‌ ಗೆ 5 ತಿಂಗಳ ಜೈಲುಶಿಕ್ಷೆ

1-rahul

Parliament; ಹಿಂದೂಗಳು ಎಂದು ಹೇಳಿಕೊಳ್ಳುವವರು… ರಾಹುಲ್ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

North Indian ರಾಜ್ಯಗಳ ಜನರ ವಲಸೆ ತಡೆಗಟ್ಟಿ: ಕರವೇ

North Indian ರಾಜ್ಯಗಳ ಜನರ ವಲಸೆ ತಡೆಗಟ್ಟಿ: ಕರವೇ

1-wqewqewq

Bharamasagara;ಕಳ್ಳತನಕ್ಕೆ ಬಂದು ಆಟೋ ಮತ್ತು ಬೈಕ್ ಬಿಟ್ಟು ಪರಾರಿ

Sadananda Gowda ಪಕ್ಷದ ವಿರುದ್ಧ ಮಾತನಾಡುವವರಿಗೆ ಬಿಜೆಪಿಯಲ್ಲಿ ಮಣೆ

Sadananda Gowda ಪಕ್ಷದ ವಿರುದ್ಧ ಮಾತನಾಡುವವರಿಗೆ ಬಿಜೆಪಿಯಲ್ಲಿ ಮಣೆ

Hassan ಕಾರು ಪಲ್ಟಿಯಾಗಿ ಮಹಿಳೆ ಸಾವು; ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ

Hassan ಕಾರು ಪಲ್ಟಿಯಾಗಿ ಮಹಿಳೆ ಸಾವು; ರಾಜ್ಯದ ಮೊದಲ ಬಿಎನ್‌ಎಸ್‌ ಪ್ರಕರಣ

1-weewwqewqewqewqe

Vijayapura: ಸೇನಾ ಹವಾಲ್ದಾರ್ ರಾಜು ಕರ್ಜಗಿ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.