Goa; ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆ ತೆರವಿಗೆ ಆದೇಶ
Team Udayavani, Jun 20, 2023, 4:22 PM IST
ಪಣಜಿ: ಗೋವಾದ ಕಲಂಗುಟ್ನ ಪೊಲೀಸ್ ಠಾಣೆಯ ಬಳಿ ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು 10 ದಿನಗಳಲ್ಲಿ ತೆಗೆದುಹಾಕುವಂತೆ ಕಲಂಗುಟ್ ಪಂಚಾಯತ್ ಸಂಬಂಧಿಸಿದ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ ಆದೇಶಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಏನೆಂದರೆ, ಕಲಂಗುಟ್-ಸಾಳಗಾಂವ್ ರಸ್ತೆಯಲ್ಲಿರುವ ಕಲಂಗುಟ್ ಪೊಲೀಸ್ ಠಾಣೆಯ ಜಂಕ್ಷನ್ನಲ್ಲಿ ಶಿವಸ್ವರಾಜ್ಯ ಕಲಂಗುಟ್ ಸಂಘಟನೆಯ ವತಿಯಿಂದ ಛತ್ರಪತಿ ಶುವಾಜಿ ಮಹಾರಾಜರ ಕುದುರೆ ಸವಾರಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಕಲಂಗುಟ್ ಪಂಚಾಯತ್ ಶಿವ ಸ್ವರಾಜ್ಯ-ಕಲಂಗುಟ್ ಸಂಘಟನೆಗೆ 10 ದಿನಗಳಲ್ಲಿ ಈ ಪ್ರತಿಮೆಯನ್ನು ತೆಗೆದುಹಾಕುವಂತೆ ಆದೇಶವನ್ನು ನೀಡಿದೆ.
ಪ್ರತಿಮೆ ಸ್ಥಾಪನೆಗೆ ಪೂರ್ವಾನುಮತಿ ಪಡೆದಿಲ್ಲ. ಪ್ರತಿಮೆ ಅಕ್ರಮವಾಗಿದೆ ಎಂದು ಕಲಂಗುಟ್ ಪಂಚಾಯತ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
10 ದಿನದೊಳಗೆ ಪ್ರತಿಮೆ ತೆರವು ಮಾಡದಿದ್ದಲ್ಲಿ ಅಗತ್ಯ ಕ್ರಮ ಜರುಗಿಸಿ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಕಲಂಗುಟ್ ಪಂಚಾಯತಿ ಹೊರಡಿಸಿರುವ ಆದೇಶದಲ್ಲಿ ಪಂಚಾಯಿತಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.