ಪಾಕ್‌ನಲ್ಲಿ ಹೊಸ ಹಿಂದು ವಿವಾಹ ಕಾಯಿದೆ; ಬಲವಂತದ ಮದುವೆಗೆ ಕೊನೆ?


Team Udayavani, Apr 12, 2017, 5:00 PM IST

Pak Hindu Marriage Act-700.jpg

ಇಸ್ಲಾಮಾಬಾದ್‌ : ಕಳೆದ ಮಾರ್ಚ್‌ 19ರಂದು ಪಾಕಿಸ್ಥಾನದಲ್ಲಿ  ಜಾರಿಗೆ ಬಂದಿರುವ ಹಿಂದೂ ಮ್ಯಾರೇಜ್‌ ಆ್ಯಕ್ಟ್ 2017 ಇದರ ಪರಿಣಾಮವಾಗಿ ಪಾಕಿಸ್ಥಾನದಲ್ಲಿನ ಹಿಂದು ಅಲ್ಪಸಂಖ್ಯಾಕ ಮಹಿಳೆಯರ ಅಪಹರಣ, ಬಹುಪತ್ನಿತ್ವಕ್ಕಾಗಿ ಇತರ ಧರ್ಮಗಳಿಗೆ ಅವರ ಮತಾಂತರ ಹಾಗೂ ಬಲವಂತದ ಮದುವೆ ಮುಂತಾದ ಅನಿಷ್ಟಗಳು ಕೊನೆಗೊಳ್ಳಬಹುದೆಂಬ ನಿರೀಕ್ಷೆಯನ್ನು ಹುಟ್ಟಿಸಿದೆ. 

ಪಾಕ್‌ ಸಂಸತ್ತು ಅನುಮೋದಿಸಿರುವ ಈ ಹೊಸ ಕಾನೂನು ಹಿಂದುಗಳಿಗೆ ತಮ್ಮ ವಿವಾಹವನ್ನು 1947ರ ಬಳಿಕ ಇದೇ ಮೊದಲ ಬಾರಿಗೆ ನೋಂದಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತದೆ. 

ಹೊಸ ಮೈಲಿಗಲ್ಲು ಕಾನೂನು ಎಂದೇ ಬಣ್ಣಿಸಲ್ಪಟ್ಟಿರುವ ಹಾಗೂ ಪಾಕಿಸ್ಥಾನದ ನ್ಯಾಶನಲ್‌ ಅಸೆಂಬ್ಲಿಯಿಂದ ಸರ್ವಾನುಮತದಿಂದ ಅನುಮೋದಿಸಲ್ಪಟ್ಟಿರುವ ಈ ಹೊಸ ಕಾನೂನು ದೇಶದಲ್ಲಿನ ಅಲ್ಪ ಸಂಖ್ಯಾಕ ಹಿಂದು ಸಮುದಾಯದವರ ಮದುವೆಗಳನ್ನು ಕಾನೂನುಸಮ್ಮತವಾಗಿ ನಿಯಂತ್ರಿಸುವ ಉದ್ದೇಶ ಹೊಂದಿದೆ. 

ಈ ಕಾನೂನು ಸುದೀರ್ಘ‌ ಚರ್ಚೆಯ ಬಳಿಕ ನ್ಯಾಶನಲ್‌ ಅಸೆಂಬ್ಲಿಯಿಂದ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ  ಪಾಸಾಗಿತ್ತು. ಆದರೆ ಬಳಿಕ ಸೆನೆಟ್‌ನಲ್ಲಿ  ಆ ಕುರಿತ ಮಸೂದೆಯು ಮಾರ್ಪಾಡಿಗೆ ಒಳಪಟ್ಟ ಕಾರಣ ಪುನಃ ಅದನ್ನು ರಾಷ್ಟ್ರೀಯ ಅಸೆಂಬ್ಲಿ ಪಾಸು ಮಾಡಬೇಕಾಯಿತು. ಅನಂತರ ಅದು ಈ ವರ್ಷ ಫೆಬ್ರವರಿಯಲ್ಲಿ ಕಾಯಿದೆಯಾಗಿ ಅದಕ್ಕೆ ಅನುಮೋದನೆ ನೀಡಲಾಯಿತು. 

ಪಾಕಿಸ್ಥಾನದ ಈ ಐತಿಹಾಸಿಕ ಹಿಂದು ವಿವಾಹ ಕಾಯಿದೆಯು ಅಲ್ಪ ಸಂಖ್ಯಾಕ ಹಿಂದೂ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದು ವಿಶೇಷವಾಗಿ ಹಿಂದುಗಳ ವಿವಾಹಕ್ಕೆ ಕಾನೂನು ಸಮ್ಮತಿ ಸಿಗುವಂತೆ ಮಾಡಿರುವುದು ಗಮನಾರ್ಹ. 

1947ರಲ್ಲಿ ಭಾರತ ವಿಭಜನೆಯಾಗಿ ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ಥಾನ ರಾಷ್ಟ್ರ ಉದಯಿಸಿದ ಬಳಿಕ ಪಾಕಿಸ್ಥಾನದಲ್ಲಿನ 3 ಕೋಟಿ ಹಿಂದು ಅಲ್ಪಸಂಖ್ಯಾಕರ ವಿವಾಹಗಳಿಗೆ ಅಧಿಕೃತ ಕಾನೂನು ಮಾನ್ಯತೆ ಇಲ್ಲದೇ ಅವರು ಕಾನೂನಿನ ಯಾವುದೇ ರಕ್ಷಣೆಯನ್ನು ಪಡೆಯುವುದು ಅಸಾಧ್ಯವಾಗಿತ್ತು. ಇದೀಗ ಈ ಹೊಸ ಕಾನೂನಿಂದ ಆ ಕೊರತೆ ತುಂಬಿದಂತಾಗಿದೆ.  

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

NDA-Meet

NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್‌ಡಿಎ ಬದ್ಧ: ಪ್ರಧಾನಿ ಮೋದಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.