![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jun 29, 2022, 7:49 PM IST
ಪಣಜಿ: ಮಹಾರಾಷ್ಟ್ರ ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಮತ್ತು ಇತರ ಬಂಡಾಯ ಶಾಸಕರು ಗೋವಾಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಶಿವಸೈನಿಕರು ಗೋವಾಕ್ಕೆ ಆಗಮಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗೋವಾ ಮಹಾರಾಷ್ಟ್ರ ಗಡಿ ಭಾಗ ಪತ್ರಾದೇವಿಯಲ್ಲಿ ಹೆಚ್ಚಿನ ಪೋಲಿಸ್ ಭಧ್ರತೆ ಕಲ್ಪಿಸಲಾಗಿದೆ.
ಮಹಾರಾಷ್ಟ್ರದಿಂದ ಗೋವಾಕ್ಕೆ ಆಗಮಿಸುವ ಎಲ್ಲ ವಾಹನಗಳ ಖಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ಗೋವಾಕ್ಕೆ ಶಿವಸೇನೆ ಕಾರ್ಯಕರ್ತರು ಆಗಮಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಗೋವಾ ಪೆಡ್ನೆ ಪೋಲಿಸ್ ಉಪ ಅಧೀಕ್ಷಕ ಸಿದ್ದಾಂತ ಶಿರೋಡಕರ್ ಮಾರ್ಗದರ್ಶನದಲ್ಲಿ ಪೆಡ್ನೆ ಪೋಲಿಸ್ ಇನ್ಸಪೆಕ್ಟರ್ ವಿಕ್ರಮ ನಾಯ್ಕ ಮತ್ತು ಮೋಪಾ ವಿಮಾನ ನಿಲ್ದಾಣ ಪೋಲಿಸ್ ಇನ್ಸಪೆಕ್ಟರ್ ಮಹೇಶ್ ಕೇರಕರ್ ರವರ ನೇತೃತ್ವದಲ್ಲಿ ಅಧಿಕ ಭದ್ರತೆ ಕಲ್ಪಿಸಲಾಗಿದೆ.
ಮಹಾರಾಷ್ಟ್ರ ಬಂಡಾಯ ಶಾಸಕರು ತಂಗಿರುವ ತಾಜ್ ಹೋಟೆಲ್ಗೆ ಮಹಾರಾಷ್ಟ್ರದ ಶಿವಸೈನಿಕರು ಆಗಮಿಸಿ ಗೊಂದಲ ಸೃಷ್ಠಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗೋವಾ ಮಹಾರಾಷ್ಟ್ರ ಗಡಿ ಭಾಗ ಮತ್ತು ತಾಜ್ ಹೋಟೆಲ್ ಪರಿಸರದಲ್ಲಿ ಅಧಿಕ ಪೋಲಿಸ್ ಭಧ್ರತೆ ಕಲ್ಪಿಸಲಾಗಿದೆ.
ಇದನ್ನೂ ಓದಿ : ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.