![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 23, 2018, 10:10 AM IST
ಪಣಜಿ: ಪ್ಯಾನ್ಕ್ರಿಯಾಟಿಕ್ ತೊಂದರೆಯಿಂದ ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಗುರುವಾರ ಬಿಡುಗಡೆ ಹೊಂದಿದ್ದಾರೆ. ಕೂಡಲೇ ಅವರು ಪಣಜಿಯಲ್ಲಿನ ತಮ್ಮ ನಿವಾಸಕ್ಕೆ ಬಂದಿಳಿದು, ಅಲ್ಲಿಂದ ಅನಂತರ ನೇರವಾಗಿ ಗೋವಾ ವಿಧಾನಸಭೆಗೆ ತೆರಳಿ ಬಜೆಟ್ ಮಂಡಿಸಿದ್ದಾರೆ. ಆದರೆ ತೀವ್ರ ಅನಾರೋಗ್ಯದ ಕಾರಣ ಬರೀ 5 ನಿಮಿಷವಷ್ಟೇ ಮಂಡನೆ ನಡೆಯಿತು. ಈ ಕಾರಣ ಮಧ್ಯಾಹ್ನ 3 ಗಂಟೆಗೆ ಶುರುವಾದ ಅಧಿವೇಶನ 3.30ಕ್ಕೆ ಮುಕ್ತಾಯವಾಯಿತು.
ವಿಧಾನಸಭೆಗೆ ಆಗಮಿಸಿದ ವೇಳೆ ಪಾರೀಕರ್ ತಮ್ಮ ಎಂದಿನ ಲವಲವಿಕೆಯನ್ನು ತೋರ್ಪಡಿಸಿಕೊಂಡರು. ಆದರೂ ಅನಾರೋಗ್ಯ ಪ್ರಕಟವಾಗುತ್ತಿತ್ತು. ವಿಧಾನಸಭೆಗೆ ತೆರಳಿದ ಕೂಡಲೇ ಸಚಿವ ಸಂಪುಟ ಸಭೆ ನಡೆಸಿ ಬಜೆಟ್ ಮಂಡಿಸಲು ನಿರ್ಧರಿಸಿದರು. ಅವರ ಅನಾರೋಗ್ಯದ ಕಾರಣ ಇದು ಪೂರ್ಣ ಪ್ರಮಾಣದ ಬಜೆಟ್ ಆಗಲಿಲ್ಲ. ಖರ್ಚುವೆಚ್ಚಗಳ ಬಜೆಟ್ ಮಂಡನೆಯಷ್ಟೇ ನಡೆಯಿತು. ಈ ವಿತ್ತೀಯ ವರ್ಷಾಂತ್ಯಕ್ಕೆ ಬೇಡಿಕೆ ಪೂರೈಸಲು ಮತ್ತೂಮ್ಮೆ ಅನುದಾನ ಪ್ರಕಟಿಸುವುದಾಗಿ ತಿಳಿಸಿದರು.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.