![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 25, 2020, 9:26 PM IST
– ರಾಜ್ಯದ ಒಂಭತ್ತು ಮಂದಿಗೆ ಪದ್ಮ ಗೌರವ
– ಕ್ರೀಡೆಯಲ್ಲಿ ಎಂ.ಪಿ.ಗಣೇಶ್ಗೆ ಪದ್ಮಶ್ರೀ
– ಈ ಬಾರಿಯೂ ಎಲೆಮರೆಯ ಕಾಯಿಗಳಿಗೆ ಪ್ರಶಸ್ತಿ
– ಮೇರಿ ಕೋಂಗೆ ಪದ್ಮವಿಭೂಷಣ, ಸಿಂಧುಗೆ ಪದ್ಮಭೂಷಣ
– ಜೇಟ್ಲಿ , ಸುಷ್ಮಾ, ಜಾರ್ಜ್ ಫರ್ನಾಂಡೀಸ್ಗೂ ಮರಣೋತ್ತರ ಪದ್ಮ ಗೌರವ
ನವದೆಹಲಿ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಸೇರಿದಂತೆ ರಾಜ್ಯದ ಒಂಭತ್ತು ಮಂದಿಗೆ ಪದ್ಮ ಗೌರವ ಸಂದಿದೆ.
ಗಣರಾಜ್ಯೋತ್ಸವ ಮುನ್ನಾದಿನವಾದ ಶನಿವಾರ ರಾತ್ರಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಏಳು ಮಂದಿಗೆ ಪದ್ಮವಿಭೂಷಣ, 16 ಮಂದಿಗೆ ಪದ್ಮಭೂಷಣ ಮತ್ತು 118 ಮಂದಿಗೆ ಪದ್ಮಶ್ರೀ ಗೌರವ ನೀಡಲಾಗಿದೆ. ಇದರಲ್ಲಿ 34 ಮಂದಿ ಮಹಿಳೆಯರು ಮತ್ತು 18 ಮಂದಿ ವಿದೇಶಿಯರು ಸೇರಿದ್ದಾರೆ. ಅಷ್ಟೇ ಅಲ್ಲ, 12 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ ಕರ್ನಾಟಕದ ಎಂಟು ಮಂದಿಗೆ ಪದ್ಮಶ್ರೀ ಗೌರವ ದೊರೆತಿದೆ. ಅದರಲ್ಲೂ ಸಮಾಜ ಸೇವೆ ವಿಭಾಗದಲ್ಲಿ ತುಳಸಿಗೌಡ ಮತ್ತು ಹರೇಕಲಾ ಹಾಜಬ್ಬ ಅವರಿಗೆ ಪ್ರಶಸ್ತಿ ನೀಡುವ ಮೂಲಕ ತೆರೆ ಮರೆಯ ಕಾಯಿಯಂತಿದ್ದವರನ್ನೂ ಗುರುತಿಸಲಾಗಿದೆ.
ಕರ್ನಾಟಕಕ್ಕೆ 8 ಗೌರವ
ಪದ್ಮವಿಭೂಷಣ
1. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು, ಪೇಜಾವರ ಮಠ, ಉಡುಪಿ-
ಪದ್ಮಶ್ರೀ
2. ಎಂ.ಪಿ.ಗಣೇಶ್, ಕ್ರೀಡೆ
3. ಡಾ. ಬೆಂಗಳೂರು ಗಂಗಾಧರ – ವೈದ್ಯಕೀಯ
4. ಭರತ್ ಗೋಯೆಂಕಾ, ವ್ಯಾಪಾರ ಮತ್ತು ಉದ್ಯಮ
5. ತುಳಸಿಗೌಡ, ಸಮಾಜ ಸೇವೆ
6. ಹರೇಕಲಾ ಹಾಜಬ್ಬ, ಸಮಾಜಸೇವೆ
7. ಕೆ.ವಿ.ಸಂಪತ್ಕುಮಾರ್ ಮತ್ತು ವಿದುಶಿ ಜಯಲಕ್ಷ್ಮೀ ಕೆ.ಎಸ್. – ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮ
8. ವಿಜಯ ಸಂಕೇಶ್ವರ, ವ್ಯಾಪಾರ ಮತ್ತು ಉದ್ಯಮ
ಜೇಟ್ಲಿ, ಸುಷ್ಮಾಗೆ ಮರಣೋತ್ತರ ಪ್ರಶಸ್ತಿ
ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಎಂದು ಕರೆಸಿಕೊಂಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ಈ ಬಾರಿ ಏಳು ಮಂದಿಗೆ ನೀಡಲಾಗಿದೆ. ಇದರಲ್ಲಿ ಜಾರ್ಜ್ ಫರ್ನಾಂಡೀಸ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಪೇಜಾವರ ಶ್ರೀಗಳಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಉಳಿದಂತೆ ಬಾಕ್ಸಿಂಗ್ ತಾರೆ ಮೇರಿ ಕೋಂ, ಮಾರಿಷಸ್ನ ಅನಿರುದ್ಧ್ ಜಗನ್ನಾಥ್, ಉತ್ತರ ಪ್ರದೇಶದ ಚನೌ°ಲಾಲ್ ಮಿಶ್ರಾಗೂ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ. ಇನ್ನು ಮನೋಹರ್ ಪರಿಕ್ಕರ್ ಅವರಿಗೂ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.