Pension crisis; ಹುತಾತ್ಮ ಯೋಧನ ಪಿಂಚಣಿ ಹೆತ್ತವರು, ಪತ್ನಿಗೆ ಹಂಚಿಕೆ?
ಬಿಕ್ಕಟ್ಟು ತಪ್ಪಿಸಲು ಕೇಂದ್ರ ಪರಿಶೀಲನೆ
Team Udayavani, Aug 11, 2024, 6:45 AM IST
ಹೊಸದಿಲ್ಲಿ: ಹುತಾತ್ಮ ಯೋಧರ ಪಿಂಚಣಿಯನ್ನು ಇನ್ನು ಮುಂದೆ ಅವರ ಪತ್ನಿ ಮತ್ತು ಹೆತ್ತವರಿಗೆ ವಿಭಜಿಸಿ ನೀಡುವ ನಿಯಮವನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಲಿದೆ.ಹೀಗೆಂದು ರಕ್ಷಣ ಖಾತೆಯ ಸಹಾ ಯಕ ಸಚಿವ ಸಂಜಯ್ ಸೇಠ್ ಶುಕ್ರ ವಾರ ಲೋಕಸಭೆಗೆ ತಿಳಿಸಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಪಿಂಚಣಿ ಹಂಚಿಕೆ ವಿಷಯದಲ್ಲಿ ಉಂಟಾಗುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಡಲು ಸರಕಾರ ಮುಂದಾಗಿದೆ.
ಹುತಾತ್ಮ ಯೋಧರ ಪಿಂಚಣಿ ಮೊತ್ತವನ್ನು ವಿಭಜಿಸಿ ನೀಡುವ ಬಗ್ಗೆ ನಿಯಮದಲ್ಲಿ ತಿದ್ದುಪಡಿ ತರಬೇಕು ಎಂದು ಯೋಧರ ಕುಟುಂಬಗಳಿಂದ ಕೋರಿಕೆಗಳು ಬಂದಿವೆಯೇ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಉತ್ತರಿಸಿದ ಸಚಿವ ಸಂಜಯ್ ಸೇs…, “ಪಿಂಚಣಿಯನ್ನು ಪತ್ನಿ ಮತ್ತು ಹೆತ್ತವರಿಗೆ ವಿಭಜಿಸಿ ನೀಡುವ ಕುರಿತ ಪ್ರಸ್ತಾವನೆಗಳು ಬಂದಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದಿದ್ದಾರೆ. ಭಾರತೀಯ ಸೇನೆ ಕೂಡ ಈ ನಿಯಮ ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಹುತಾತ್ಮ ಯೋಧರ ಪಿಂಚಣಿ ಮತ್ತು ಇತರ ಸೌಲಭ್ಯಗಳು ಪತ್ನಿಗೆ ಮಾತ್ರ ಸಿಗುವುದರ ಬಗ್ಗೆ ಹೆತ್ತವರು ತಕರಾರು ಎತ್ತಿರುವ, ಇದೇ ಕಾರಣಕ್ಕೆ ಕುಟುಂಬಗಳಲ್ಲಿ ವೈಮನಸ್ಸು ಉಂಟಾಗಿರುವ ಅನೇಕ ಘಟನೆಗಳು ನಡೆದಿವೆ. ಕಳೆದ ವರ್ಷ ಸಿಯಾಚಿನ್ನಲ್ಲಿ ಹುತಾತ್ಮರಾದ ಕ್ಯಾಣ ಅಂಶುಮಾನ್ ಸಿಂಗ್ ಅವರ ಪಿಂಚಣಿ, ಇತರ ವಿತ್ತೀಯ ಸವಲತ್ತುಗಳನ್ನು ಹಂಚಿಕೊಳ್ಳುವ ವಿಚಾರವಾಗಿ ಪತ್ನಿ ಮತ್ತು ಹೆತ್ತವರ ನಡುವೆ ಉಂಟಾಗಿದ್ದ ಜಗಳ ಭಾರೀ ಸುದ್ದಿಯಾಗಿತ್ತು.
ಈಗಿರುವ ನಿಯಮವೇನು?
ಪ್ರಸ್ತುತ ನಿಯಮ ಪ್ರಕಾರ ಹುತಾತ್ಮ ಯೋಧನ ಕೌಂಟುಂಬಿಕ ಪಿಂಚಣಿ ಮೊತ್ತವನ್ನು ಪತ್ನಿಗೆ ಮಾತ್ರ ನೀಡಲಾಗುತ್ತದೆ. ಆ ಯೋಧ ಅವಿವಾಹಿತನಾಗಿದ್ದರೆ ಮಾತ್ರ ಪಿಂಚಣಿ ಮೊತ್ತ ಹೆತ್ತವರಿಗೆ ಸಿಗುತ್ತದೆ. ಇನ್ನು ಗ್ರಾಚುಯಿಟಿ, ವಿಮೆ, ಭವಿಷ್ಯ ನಿಧಿ ಇತ್ಯಾದಿ ಹುತಾತ್ಮನ ನಾಮಿನಿಗೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
West Bengal: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!
ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು
Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ
Bajpe ಬಸ್ ನಿಲ್ದಾಣ ಕಟ್ಟಡ ಪೂರ್ಣ; 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ
Jammu and Kashmir:ಕಲಂ 370 ಪುನರ್ ಜಾರಿ-ಕಾಂಗ್ರೆಸ್, ಎನ್ ಸಿ ನಿಲುವಿಗೆ ಪಾಕ್ ಬೆಂಬಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.