![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 7, 2023, 11:20 AM IST
ಜಮ್ಮು: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಭೀತಿ ಹೆಚ್ಚಾಗುತ್ತಿದೆ. ಸಿಬ್ಬಂದಿಗಳಿಂದ ಹತರಾದರೂ, ಉಗ್ರರು ತಮ್ಮ ಚಾಳಿಯನ್ನು ಬಿಡುತ್ತಿಲ್ಲ. ಮನೆಯ ಸಾಕು ನಾಯೊಯೊಂದು ಭಯೋತ್ಪಾಕರ ದಾಳಿಯಿಂದ ರಕ್ಷಿಸಿಕೊಳ್ಳಲು ಮನೆಯವರನ್ನು ಎಚ್ಚರಿಸಿದ ಘಟನೆ ರಜೌರಿಯಲ್ಲಿ ನಡೆದಿದೆ.
ಮೈಕಲ್ ಎಂಬ ಸಾಕು ನಾಯಿ ಬಂದೂಕುಗಳನ್ನು ಹಿಡಿದುಕೊಂಡು ಬಂದ ಉಗ್ರರನ್ನು ನೋಡಿ, ಬೊಗಳಲು ಆರಂಭಿಸಿದೆ. ಹೀಗೆ ಬೊಗಳಿ ಮನೆಯವರು ಸುರಕ್ಷಿತವಾಗಿ ಇರುವಂತೆ ಮಾಡಿದೆ. ಮನೆಯವರು ನಾಯಿಯ ಧ್ವನಿ ಕೇಳಿ ಸುಮ್ಮನೆ ಅವಿತುಕೊಂಡು ಕುಳಿತಿದ್ದರು ಎಂದು ವರದಿ ತಿಳಿಸಿದೆ.
ಮೈಕಲ್ ಏನಾದರೂ ಅಪಾಯ ಆಗುವ ಮುನ್ಸೂಚನೆಯಿದ್ದರೆ ಮಾತ್ರ ಜೋರು ಧ್ವನಿಯಲ್ಲಿ ಬೊಗಳುತ್ತದೆ. ಮೈಕಲ್ ಬೊಗಳಿ ನೆರೆಹೊರೆಯವರನ್ನು ಎಚ್ಚರಿಸಿದ್ದು ಅವರೆಲ್ಲಾ ಒಳಗಿನಿಂದ ಬಾಗಲು ಮುಚ್ಚಿಕೊಂಡರು, ಉಗ್ರರು ಮನೆಯತ್ತ ಬಂದು ಗುಂಡು ಹಾರಿಸಿ ಬಳಿಕ ತೆರಳಿದ್ದಾರೆ. ಒಂದು ವೇಳೆ ಮೈಕಲ್ ಬೊಗಳಿ ನಮ್ಮನ್ನು ಎಚ್ಚರಿಸದಿದ್ದರೆ ನಾವು ಸಾಯುತ್ತಿದ್ದಿವಿ ಎಂದು ನಾಯಿಯನ್ನು ಸಾಕಿದ ಮಾಲಕಿ ನಿರ್ಮಲ್ ದೇವಿ ಮಾಧ್ಯಮಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಮೈಕಲ್ ಮೇಲೆ ಗುಂಡು ಹಾರಿಸಲು ಉಗ್ರರು ಯತ್ನಿಸಿದ್ದರು, ಮೈಕಲ್ ಗೆ ಏನು ಆಗದೇ ಪಾರಾಗಿತ್ತು. ಮೈಕಲ್ ಬೊಗಳಿ ಎಚ್ಚರಿಸಿದ್ದರಿಂದ ನಾವಿಂದು ಉಳಿದುಕೊಂಡಿದ್ದೇವೆ ಎನ್ನುತ್ತಾರೆ ನಿರ್ಮಲ್ ದೇವಿ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.