![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 22, 2022, 8:20 AM IST
ಹೊಸದಿಲ್ಲಿ: “ಭಾರತದಲ್ಲಿ ಇಸ್ಲಾಮಿಕ್ ಆಡಳಿ ತವನ್ನು ಜಾರಿ ಮಾಡುವ, ಮುಸ್ಲಿಮರನ್ನು ತೀವ್ರಗಾಮಿಗಳಾಗಿ ಬದಲಾಯಿಸುವ ಮತ್ತು ಮುಸ್ಲಿಮರು ಮತ್ತು ಇತರ ಸಮುದಾಯಗಳ ನಡುವಿನ ವಿಚಾರಗಳಿಗೆ ಕೋಮು ಬಣ್ಣ ನೀಡುವ ಹಿಡನ್ ಅಜೆಂಡಾವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಹೊಂದಿದೆ.’
ಹೀಗೆಂದು ದೇಶದ ವಿವಿಧ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿರುವುದಾಗಿ “ನ್ಯೂಸ್ 18′ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ವಿವಾದಿತ ಪಿಎಫ್ಐ ಸಂಘಟನೆ ಬಗ್ಗೆ ವಿವರ ನೀಡುವಂತೆ ಎಲ್ಲ ತನಿಖಾ, ಗುಪ್ತಚರ ಸಂಸ್ಥೆಗಳಿಗೆ ಕಳೆದ ತಿಂಗಳೇ ಕೇಂದ್ರ ಸರಕಾರ ಸೂಚಿಸಿತ್ತು. ಅದರಂತೆ, 2017ರಿಂದ 2022ರ ವರೆಗಿನ ವಿವಿಧ ಗುಪ್ತಚರ ವರದಿಗಳು, ಕೋರ್ಟ್ ತೀರ್ಪುಗಳು, ರಾಜ್ಯಗಳ ತನಿಖಾ ವರದಿಗಳನ್ನು ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿತ್ತು.
ಈ ವರದಿಯನ್ನು ಪಿಎಫ್ಐ ಸಿದ್ಧಾಂತ, ಜಾಗತಿಕ ಉಗ್ರ ಸಂಘಟನೆಗಳೊಂದಿಗೆ ನಂಟು, ತೀವ್ರಗಾಮಿ ಚಟುವಟಿಕೆಗಳು, ಹಣಕಾಸು, ಕೇಸುಗಳು ಸೇರಿದಂತೆ 11 ಭಾಗಗಳಾಗಿ ವಿಂಗಡಿಸಲಾಗಿದೆ. ಪಿಎಫ್ಐ ದೇಶ ವಿರೋಧಿ ಹಾಗೂ ಕೋಮು ಅಜೆಂಡಾವನ್ನು ಹೊಂದಿದ್ದು, ದೇಶಾದ್ಯಂತ ಹಿಂಸಾಚಾರ, ತೀವ್ರಗಾಮಿ ಚಟುವಟಿಕೆಗಳಲ್ಲಿ ಭಾಗಿ ಯಾಗಿದೆ. ಹಿಂದೂ ಸಂಘ ಟನೆಗಳ ಕಾರ್ಯಕರ್ತರ ಕೊಲೆಯಲ್ಲೂ ಇದರ ಸದಸ್ಯರು ಭಾಗಿಯಾಗಿದ್ದಾರೆ. ಪಿಎಫ್ಐ ನಿಷೇಧಿತ ಸಿಮಿ ಸಂಘಟನೆಯ ಮತ್ತೂಂದು ಮುಖ ಎಂದೂ ವರದಿಯಲ್ಲಿ ಉಲ್ಲೇಖೀಸಿರುವಾಗಿ “ನ್ಯೂಸ್ 18′ ವರದಿ ಹೇಳಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.