ಗುಜರಾತ್ ನಲ್ಲಿ ಭೂಕಂಪವಾದಾಗ ಎರಡನೇ ದಿನವೇ ಬಂದೆ: ಪ್ರಧಾನಿ ಮೋದಿ

ವಿಶ್ವ ಮಟ್ಟದಲ್ಲಿ ಗುಜರಾತ್ ನ ಮಾನಹಾನಿ ಮಾಡುವ ಷಡ್ಯಂತ್ರಗಳನ್ನು ರೂಪಿಸಲಾಗಿತ್ತು...

Team Udayavani, Aug 28, 2022, 2:10 PM IST

thumb modi

ಭುಜ್ : ಗುಜರಾತ್ ನಲ್ಲಿ ಭೂಕಂಪ ಸಂಭವಿಸಿದಾಗ ನನಗೆ ನೆನಪಿದೆ, ನಾನು ಎರಡನೇ ದಿನವೇ ಇಲ್ಲಿಗೆ ತಲುಪಿದೆ. ಆಗ ನಾನು ಸಿಎಂ ಆಗಿರಲಿಲ್ಲ, ಕೇವಲ ಕಾರ್ಯಕರ್ತನಾಗಿದ್ದೆ. ನಾನು ಎಷ್ಟು ಜನರಿಗೆ ಸಹಾಯ ಮಾಡಬಲ್ಲೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ನಾನು ನಿಮ್ಮೆಲ್ಲರೊಂದಿಗೆ ಇರಲು ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಭುಜ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿ ಮಾತನಾಡಿದರು.

ಇಂದು ನಮ್ಮ ಕಛ್ ನಲ್ಲಿ ಏನಿಲ್ಲ. ನಗರ ನಿರ್ಮಾಣದಲ್ಲಿ ನಮ್ಮ ಪರಿಣತಿಯು ಧೋಲಾವಿರಾದಲ್ಲಿ ಪ್ರತಿಫಲಿಸುತ್ತದೆ.ಕಳೆದ ವರ್ಷವಷ್ಟೇ ಧೋಲಾವೀರಾಗೆ ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ನೀಡಲಾಗಿದೆ. ಧೋಲಾವೀರದ ಪ್ರತಿಯೊಂದು ಇಟ್ಟಿಗೆಯು ನಮ್ಮ ಪೂರ್ವಜರ ಕೌಶಲ್ಯ, ಜ್ಞಾನ ಮತ್ತು ವಿಜ್ಞಾನವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇಂದು ದೇಶದಲ್ಲಿ ನಡೆಯುತ್ತಿರುವ ಗ್ರೀನ್ ಹೌಸ್ ಅಭಿಯಾನದಲ್ಲಿ ಗುಜರಾತ್ ನ ಪಾತ್ರ ದೊಡ್ಡದಿದೆ. ಅದೇ ರೀತಿ ಗುಜರಾತ್ ವಿಶ್ವದ ಗ್ರೀನ್ ಹೌಸ್ ರಾಜಧಾನಿಯಾಗಿ ತನ್ನ ಛಾಪು ಮೂಡಿಸಿದಾಗ, ಕಚ್ ಅದರಲ್ಲಿ ದೊಡ್ಡ ಕೊಡುಗೆಯನ್ನು ಹೊಂದಿರುತ್ತದೆ ಎಂದರು.

ಗುಜರಾತ್‌ನಲ್ಲಿ ಒಂದರ ಹಿಂದೊಂದು ಬಿಕ್ಕಟ್ಟು ಬರುತ್ತಿದ್ದ ಕಾಲವೊಂದಿತ್ತು.ಗುಜರಾತ್ ಪ್ರಕೃತಿ ವಿಕೋಪವನ್ನು ಎದುರಿಸುತ್ತಿರುವಾಗ, ಪಿತೂರಿಗಳು ಪ್ರಾರಂಭವಾದವು. ಗುಜರಾತಿಗೆ ದೇಶ ಹಾಗೂ ವಿಶ್ವದಲ್ಲಿ ಮಾನಹಾನಿ ಮಾಡುವ ಉದ್ದೇಶದಿಂದ ಇಲ್ಲಿನ ಬಂಡವಾಳ ಹೂಡಿಕೆಯನ್ನು ತಡೆಯಲು ಒಂದರ ಹಿಂದೆ ಒಂದು ಷಡ್ಯಂತ್ರ ರೂಪಿಸಲಾಯಿತು ಎಂದು ಮನದಲ್ಲಿದ್ದ ನೋವು, ಆಕ್ರೋಶ ಹೊರ ಹಾಕಿದರು.

ಇಂತಹ ಪರಿಸ್ಥಿತಿಯಲ್ಲೂ ಒಂದೆಡೆ ಗುಜರಾತ್ ”ವಿಪತ್ತು ನಿರ್ವಹಣಾ ಕಾಯ್ದೆ”ಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ಈ ಕಾಯಿದೆಯ ಪ್ರೇರಣೆಯಿಂದ ಇಡೀ ದೇಶಕ್ಕೆ ಇದೇ ಕಾನೂನನ್ನು ರೂಪಿಸಲಾಯಿತು ಎಂದರು.

2001ರಲ್ಲಿ ಸಂಪೂರ್ಣ ನಾಶವಾದ ಕಚ್‌ನಲ್ಲಿ ಆಗಿರುವ ಕೆಲಸ ಊಹೆಗೂ ನಿಲುಕದ್ದು.ಕ್ರಾಂತಿಗುರು ಶ್ಯಾಮ್‌ಜಿ ಕೃಷ್ಣವರ್ಮ ವಿಶ್ವವಿದ್ಯಾನಿಲಯವನ್ನು 2003 ರಲ್ಲಿ ಕಚ್‌ನಲ್ಲಿ ರಚಿಸಲಾಯಿತು, ಆದರೆ 35 ಕ್ಕೂ ಹೆಚ್ಚು ಹೊಸ ಕಾಲೇಜುಗಳನ್ನು ಸಹ ಸ್ಥಾಪಿಸಲಾಗಿದೆ ಎಂದರು.

ಆ ಕಷ್ಟದ ದಿನಗಳಲ್ಲಿ ‘ವಿಪತ್ತನ್ನು ಅವಕಾಶವನ್ನಾಗಿ ಮಾಡಿಕೊಳ್ಳುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಹೇಳಿದ್ದೆ.ಇಂದು ನಾನು ಹೇಳುತ್ತೇನೆ, 2047 ರ ವೇಳೆಗೆ ಭಾರತವು ‘ಅಭಿವೃದ್ಧಿ ಹೊಂದಿದ ದೇಶ’ ಆಗಲಿದೆ ಎಂದರು.

2001 ರಲ್ಲಿ ಕಚ್ ಜಿಲ್ಲೆಯ ಭುಜ್ ನಲ್ಲಿ ಭಾರತದ 52 ನೇ ಗಣರಾಜ್ಯೋತ್ಸವದ ಜನವರಿ 26 ರಂದು ಬೆಳಗ್ಗೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ದುರಂತದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಮತ್ತು ಲಕ್ಷಾಂತರ ಜನರು ಗಾಯಗೊಂಡಿದ್ದರು. ಸುಮಾರು 3,40,000 ಕಟ್ಟಡಗಳು ನಾಶಗೊಂಡಿದ್ದವು.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-JSSS

TMC ರಾಜ್ಯಸಭಾ ಸದಸ್ಯತ್ವಕ್ಕೆ ಜವಾಹರ್‌ ಸರ್ಕಾರ್‌ ರಾಜೀನಾಮೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.