ಪೋರ್ಶೆ ಕೇಸು: ಬಾಲಾರೋಪಿಗೂ ಆಘಾತ ಆಗಿರಬಹುದು: ಹೈಕೋರ್ಟ್
Team Udayavani, Jun 22, 2024, 1:40 AM IST
ಮುಂಬಯಿ: ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದು ಅವರ ಕುಟುಂಬಕ್ಕೆ ಆಘಾತ ಉಂಟುಮಾಡಿದೆ ನಿಜ. ಅದೇ ರೀತಿ, ಅಪಘಾತವೆಸಗಿದ ಬಾಲಾರೋಪಿಗೆ ಕೂಡ ಆಘಾತವಾಗಿರಬಹುದು, ಅವನಿಗೂ ಸ್ವಲ್ಪ ಟೈಂ ಕೊಡಿ! ಹೀಗೆಂದು ಹೇಳಿದ್ದು ಬಾಂಬೆ ಹೈಕೋರ್ಟ್ನ ನ್ಯಾ| ಭಾರ್ತಿ ಡಾಂಗ್ರೆ ಮ¤ತು ಮುಂಜುಶಾ ದೇಶ ಪಾಂಡೆ ಅವರ ನ್ಯಾಯಪೀಠ. ಅಷ್ಟೇ ಅಲ್ಲ, ಬಾಲಾರೋಪಿಗೆ ಜಾಮೀನು ನೀಡಿ, ಬಳಿಕ ಅದನ್ನು ವಾಪಸ್ ಪಡೆದು ಆತನನ್ನು ವಶದಲ್ಲಿಟ್ಟುಕೊಳ್ಳುವುದು ಬಂಧನಕ್ಕೆ ಸಮಾನವಾಗುವುದಿಲ್ಲವೇ? ಆತನನ್ನು ವಶದಲ್ಲಿಟ್ಟು ಕೊಳ್ಳಲು ಪೊಲೀಸರು ಯಾವ ಕಾಯ್ದೆ, ವಿಧಿಯನ್ನು ಬಳಸಿದ್ದಾರೆ ಎಂದೂ ಪೊಲೀಸರನ್ನು ಪ್ರಶ್ನಿಸಿದೆ. ಮಗ ನನ್ನು ಬಿಡುಗಡೆ ಮಾಡಬೇಕೆಂದು ಆತನ ಪೋಷಕರು ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.