![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 10, 2020, 10:15 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ದೇಶದೆಲ್ಲೆಡೆ ಕೋವಿಡ್ ವೈರಸ್ ಸಂಬಂಧಿತ ಲಾಕ್ ಡೌನ್ ಸ್ಥಿತಿಯಲ್ಲಿ ಎಲ್ಲಾ ವ್ಯವಹಾರ ಚಟುವಟಿಕೆಗಳೂ ಕುಂಠಿತಗೊಂಡಿರುವ ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಿಂದ ಶುಭ ಸುದ್ದಿಯೊಂದು ಸಿಕ್ಕಿದೆ.
ಈ ಬಾರಿಯ ಮುಂಗಾರು ಪೂರ್ವ ಭತ್ತದ ಬಿತ್ತನೆ ಪ್ರಾರಂಭಗೊಂಡಿದ್ದು ಒಟ್ಟಾರೆಯಾಗಿ 32.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿದೆ. ಕಳೆದ ಋತುವಿಗೆ ಹೋಲಿಸಿದಲ್ಲಿ ಇದು ಒಟ್ಟಾರೆಯಾಗಿ 27 ಪ್ರತಿಶತ ಅಧಿಕ.
ದೇಶದಲ್ಲಿ ಸುಮಾರು 70 ಪ್ರತಿಶತ ಮಳೆಯಾಗುವ ನೈಋತ್ಯ ಮಾರುತ ಪ್ರಾರಂಭಗೊಳ್ಳುವ ಅವಧಿಯಲ್ಲಿ ಈ ಬಿತ್ತನೆ ನಡೆಯುತ್ತದೆ. ದ್ವಿದಳ ಧಾನ್ಯಗಳು ಹಾಗೂ ಎಣ್ಣೆಕಾಳುಗಳನ್ನು ಹೊರತುಪಡಿಸಿದರೆ ದೇಶದ ಪ್ರಮುಖ ವಾಣಿಜ್ಯ ಬೆಳೆ ಭತ್ತವಾಗಿದೆ. ಶುಕ್ರವಾರದಿಂದ ಮೊದಲ್ಗೊಂಡು ದೇಶದ ಭತ್ತ ಬೆಳೆಯುವ ಪ್ರಮುಖ ಭಾಗಗಳಲ್ಲಿ ರೈತರು ಸುಮಾರು 32.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೀಜ ಬಿತ್ತನೆ ಮಾಡಿದ್ದಾರೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ.
ಪಶ್ವಿಮ ಬಂಗಾಲದಲ್ಲಿ 11.25 ಲಕ್ಷ ಹೆಕ್ಟೇರ್, ತೆಲಂಗಾಣದಲ್ಲಿ 7.5 ಲಕ್ಷ ಹೆಕ್ಟೇರ್, ಒಡಿಸ್ಸಾದಲ್ಲಿ 3.13 ಲಕ್ಷ ಹೆಕ್ಟೇರ್, ಅಸ್ಸಾಂನಲ್ಲಿ 2.73 ಲಕ್ಷ ಹೆಕ್ಟೇರ್, ಕರ್ನಾಟಕದಲ್ಲಿ 1.64 ಲಕ್ಷ ಹೆಕ್ಟೇರ್ ಮತ್ತು ಛತ್ತೀಸ್ ಗಢದಲ್ಲಿ 1.50 ಲಕ್ಷ ಹೆಕ್ಟೇರ್ ಗಳಲ್ಲಿ ಭತ್ತದ ಬಿತ್ತನೆಯಾಗಿರುವುದು ವರದಿಯಾಗಿದೆ.
ಇದರೊಂದಿಗೆ ತಮಿಳುನಾಡು (1.30 ಲಕ್ಷ ಹೆಕ್ಟೇರ್), ಬಿಹಾರ್ (1.22 ಲಕ್ಷ ಹೆಕ್ಟೇರ್), ಮಹಾರಾಷ್ಟ್ರ (0.65 ಲಕ್ಷ ಹೆಕ್ಟೇರ್), ಮಧ್ಯಪ್ರದೇಶ (0.59 ಲಕ್ಷ ಹೆಕ್ಟೇರ್), ಗುಜರಾತ್ (0.54 ಲಕ್ಷ ಹೆಕ್ಟೇರ್) ಮತ್ತು ಕೇರಳ (0.46 ಲಕ್ಷ ಹೆಕ್ಟೇರ್) ರಾಜ್ಯಗಳಲ್ಲೂ ಭತ್ತದ ಬಿತ್ತನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.