ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದ ರಕ್ಷಣಾ ಕ್ಷೇತ್ರ ಅತ್ಯಂತ ಬಲಿಷ್ಠ : ಪ್ರಧಾನಿ ಮೋದಿ

ಸರಳ ಉತ್ಪನ್ನಗಳಿಗೂ ವಿದೇಶಗಳ ಮೇಲೆ ಅವಲಂಬಿತ , ಆಮದುದಾರರಾಗಲು ಏನಾಯಿತು?

Team Udayavani, Jul 18, 2022, 6:47 PM IST

1-sdsdsad

ನವದೆಹಲಿ: 21 ನೇ ಶತಮಾನದ ಭಾರತಕ್ಕೆ ರಕ್ಷಣೆಯಲ್ಲಿ ‘ಆತ್ಮನಿರ್ಭರ್ತ’ ಬಹಳ ನಿರ್ಣಾಯಕವಾಗಿದೆ. ಮುಂದಿನ ವರ್ಷ ಆಗಸ್ಟ್ 15 ರೊಳಗೆ ನೌಕಾಪಡೆಗೆ 75 ಸ್ಥಳೀಯ ತಂತ್ರಜ್ಞಾನಗಳನ್ನು ರಚಿಸುವುದು ಮೊದಲ ಹೆಜ್ಜೆಯಾಗಿದ್ದು, ನಾವು 100ನೇ ವರ್ಷದ ಸ್ವಾತಂತ್ರ್ಯವನ್ನು ಆಚರಿಸುವ ವೇಳೆಗೆ ಭಾರತದ ರಕ್ಷಣೆಯನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವುದು ಗುರಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ನೌಕಾಪಡೆಯ ಸ್ವಾವಲಂಬನ್ ಸೆಮಿನಾರ್ ನಲ್ಲಿ ಮಾತನಾಡಿದ ಪ್ರಧಾನಿ, ಸರಳ ಉತ್ಪನ್ನಗಳಿಗೂ ವಿದೇಶಗಳ ಮೇಲೆ ಅವಲಂಬಿತರಾಗುವ ಅಭ್ಯಾಸವನ್ನು ನಾವು ಬೆಳೆಸಿಕೊಂಡಿದ್ದೇವೆ. ಮಾದಕ ವ್ಯಸನಿಗಳಂತೆ ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳಿಗೆ ವ್ಯಸನಿಯಾಗಿದ್ದೇವೆ ಎಂದರು.

ನಿಮ್ಮ ಸ್ವಂತ ಮಗುವಿಗೆ ನೀವು ಪ್ರೀತಿ ಮತ್ತು ಗೌರವವನ್ನು ನೀಡದಿದ್ದರೆ ಮತ್ತು ನಿಮ್ಮ ನೆರೆಹೊರೆಯವರಿಂದಲೂ ಅದನ್ನು ನಿರೀಕ್ಷಿಸಿದರೆ, ಅದನ್ನು ಮಾಡಬಹುದೇ? ನಮ್ಮ ಉತ್ಪನ್ನಗಳಿಗೆ ನಾವು ಬೆಲೆ ಕೊಡದಿದ್ದರೆ, ಪ್ರಪಂಚವು ನಮ್ಮಲ್ಲಿ ಹೂಡಿಕೆ ಮಾಡುವುದನ್ನು ನಾವು ಹೇಗೆ ನಿರೀಕ್ಷಿಸಬಹುದು? ನಮ್ಮ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್‌ನಲ್ಲಿ ನಾವು ವಿಶ್ವಾಸವನ್ನು ತೋರಿಸಿದಾಗ, ಜಗತ್ತು ಕೂಡ ಮುಂದೆ ಬಂದಿತು ಎಂದರು.

ಕಳೆದ 4-5 ವರ್ಷಗಳ ಅಲ್ಪಾವಧಿಯಲ್ಲಿ, ನಮ್ಮ ರಕ್ಷಣಾ ಆಮದುಗಳು ಸುಮಾರು 21% ರಷ್ಟು ಕಡಿಮೆಯಾಗಿದೆ.ನಾವು ರಕ್ಷಣಾ ಆಮದುದಾರರಾಗುವುದರಿಂದ ರಕ್ಷಣಾ ರಫ್ತುದಾರರಾಗುವತ್ತ ಸಾಗುತ್ತಿದ್ದೇವೆ ಎಂದರು.

ನಾವು ಭಾರತೀಯ ಆಟಿಕೆಗಳಲ್ಲಿ ಹೂಡಿಕೆ ಮಾಡಿದಾಗ, ಲೋಕಲ್ ಫಾರ್ ವೋಕಲ್ ಅನ್ನು ಪ್ರೋತ್ಸಾಹಿಸಲು ಇಡೀ ಭಾರತ ಒಗ್ಗೂಡಿದಾಗ, ಆಟಿಕೆ ಆಮದು 2 ವರ್ಷಗಳಲ್ಲಿ 70% ರಷ್ಟು ಕಡಿಮೆಯಾಗಿದೆ. ಮಕ್ಕಳು ಸಹ ಒಬ್ಬರಿಗೊಬ್ಬರು ಕರೆ ಮಾಡಿ, ನಿಮ್ಮ ಮನೆಯಲ್ಲಿ ವಿದೇಶಿ ಆಟಿಕೆ ಇಲ್ಲವಲ್ಲ ಎಂದು ಕೇಳುತ್ತಿದ್ದಾರೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತದ ರಕ್ಷಣಾ ಕ್ಷೇತ್ರ ಅತ್ಯಂತ ಬಲಿಷ್ಠವಾಗಿತ್ತು ಎಂಬುದು ಹಲವರಿಗೆ ತಿಳಿದಿಲ್ಲ. ನಾವು ವಿಶ್ವಕ್ಕೆ ಫಿರಂಗಿಗಳನ್ನು ರಫ್ತು ಮಾಡುವ 18 ಆರ್ಡಿನೆನ್ಸ್ ಫ್ಯಾಕ್ಟರಿಗಳನ್ನು ಹೊಂದಿದ್ದೇವೆ, ಎರಡನೇ ವಿಶ್ವ ಯುದ್ಧ ದ ಸಮಯದಲ್ಲಿ ನಾವು ಪ್ರಮುಖ ಪೂರೈಕೆದಾರರಾಗಿದ್ದೆವು. ಆದರೆ ನಂತರ ನಾವು ಅತಿದೊಡ್ಡ ಆಮದುದಾರರಾಗಲು ಏನಾಯಿತು? ಎಂದು ಪ್ರಶ್ನಿಸಿದರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.