![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 21, 2021, 10:29 AM IST
ನವ ದೆಹಲಿ : ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ (ಫೆ. 21) ದಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ.
ಸ್ಥಳೀಯ ಪೊಲೀಸರಿಂದ ಕಿರುಕುಳಕ್ಕೊಳಗಾದ ಬೋಟ್ ಮೆನ್ (ದೋಣಿ ನಡೆಸುವವರು) ಅವರಿಗೆ ಬೆಂಬಲಿಸಲು ಪ್ರಿಯಾಂಕ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಓದಿ : ಬಹು ಭಾಷಾ ನಟಿ ಪೊನಾಂ ಬಾಜ್ವಾ ಹಾಟ್ ಫೋಟೋಸ್
ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರು ಇತ್ತೀಚೆಗೆ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಯ ಸಂಗಮವಾದ ಮೌನಿ ಅಮಾವಾಸ್ಯೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದರು. ಅಲ್ಲಿ ಪೂಜೆಯನ್ನು ಸಲ್ಲಿಸಿದ ನಂತರ ಮತ್ತು ನಂತರ ಅವರು ಸುಜಿತ್ ನಿಷಾದ್ ದೋಣಿಯಲ್ಲಿ ಪ್ರಯಾಣಿಸಿದರು.
ಆ ವೀಡಿಯೋವನ್ನು ಪ್ರಿಯಾಂಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
लहरों से डर कर नौका पार नहीं होती
कोशिश करने वालों की हार नहीं होती– सोहन लाल द्विवेदी
A special thanks to our boatman Sujeet Nishad for the joyful ride pic.twitter.com/xrU5kVzxPP
— Priyanka Gandhi Vadra (@priyankagandhi) February 13, 2021
ನಿಶಾದ್ ಸಮುದಾಯಕ್ಕೆ ಸೇರಿದ ದೋಣಿ ವಿಹಾರಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುಜಿತ್ ಆ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ತಿಳಿಸಿದ್ದರು.ನಮ್ಮ ಸಮುದಾಯದವರ ಮೇಲೆ ಲೋಕಲ್ ಪೊಲೀಸರಿಂದ ನಮಗೆ ಸಮಸ್ಯೆಯಾಗುತ್ತಿದೆ. ನಾವು ನಿಮ್ಮ ಸಹಾಯವನ್ನು ಬಯಸುತ್ತೇವೆ ಎಂದು ಪ್ರಿಯಾಂಕ ಅವರನ್ನು ಸುಜೀತ್ ಕೇಳಿಕೊಂಡಿದ್ದರು. ಹಾಗಾಗಿ ಇಂದು ಪ್ರಿಯಾಂಕ ಪ್ರಯಾಗ್ ರಾಜ್ ಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
ಪಕ್ಷ ಬಿಡುಗಡೆ ಮಾಡಿದ ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ, ಪ್ರಿಯಾಂಕಾ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರಯಾಗ್ ರಾಜ್ ತಲುಪಲಿದ್ದು, ಮೀನುಗಾರ ಸಮುದಾಯದ ಸದಸ್ಯರನ್ನು ಭೇಟಿ ಮಾಡಲು ಜಿಲ್ಲೆಯ ಟ್ರಾನ್ಸ್-ಯಮುನಾ ಪ್ರದೇಶದ ಬನ್ಸ್ವಾರ್ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.
ಹಿಂದುಳಿದ ನಿಷಾದ್ ಸಮುದಾಯಕ್ಕೆ ಸೇರಿದ ಕೆಲವು ದೋಣಿಗಳು ಪೊಲೀಸರಿಂದ ಹಾಗೂ ಆಡಳಿತದ ಅಧಿಕಾರಿಗಳಿಂದ ಹಾನಿಗೊಳಗಾಗಿವೆ ಎಂದು ಸುಜಿತ್ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ ಸರ್ಕಾರವು 24 ಜೂನ್ 2019 ರಂದು ರಾಜ್ಯಾದ್ಯಂತ ಮರಳು ಗಣಿಗಾರಿಕೆಯಲ್ಲಿ ದೋಣಿಗಳ ಬಳಕೆಯನ್ನು ನಿಷೇಧಿಸಿತ್ತು. ಈ ಕಾರಣದಿಂದಾಗಿ ಇದ್ದಕ್ಕಿದ್ದಂತೆ ನಿಷಾದ್ ಸಮುದಾಯದ ಲಕ್ಷಾಂತರ ಜನರು ನಿರುದ್ಯೋಗಿಗಳಾದರು. ಅವರಲ್ಲಿ ಹಲವರು ಉತ್ತರಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಈ ಉದ್ಯೋಗವನ್ನೇ ಅವಲಂಬಿಸಿದ್ದಾರೆ. 2013 ರಲ್ಲಿ, ಎನ್ ಜಿ ಟಿ ಯಂತ್ರಗಳನ್ನು ಬಳಸಿ ನದಿಗಳಿಂದ ಮರಳು ಹೊರತೆಗೆಯುವುದನ್ನು ನಿಷೇಧಿಸಿತ್ತು, ಆದರೆ ಗಣಿಗಾರಿಕೆ ಕಂಪನಿಗಳು ಅದನ್ನು ಪೋಕ್ ಲ್ಯಾಂಡ್ ಯಂತ್ರಗಳೊಂದಿಗೆ ಹೊರತೆಗೆಯುವುದನ್ನು ಮುಂದುವರೆಸಿದವು ಎಂದು ಎ ಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಓದಿ : ಹಾಸನ: ಟಾಟಾಸುಮೋ ಗೆ ಕ್ವಾಲಿಸ್ ಡಿಕ್ಕಿ; ಸ್ಥಳದಲ್ಲೇ ನಾಲ್ವರು ಸಾವು, 13 ಮಂದಿಗೆ ಗಂಭೀರ ಗಾಯ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.