ಫೇಸ್ ಬುಕ್ಕಲ್ಲಿ ದಾಂಪತ್ಯ ಬಟಾಬಯಲು:ಪತ್ನಿ ಕೊಂದ ಟೆಕ್ಕಿ ಆತ್ಮಹತ್ಯೆ
Team Udayavani, Jan 20, 2017, 3:29 PM IST
ಪುಣೆ : ತಮ್ಮ ದಾಂಪತ್ಯ ಬದುಕಿನ ಖಾಸಗಿ ವಿಷಯಗಳನ್ನು ಸಾಮಾಜಿಕ ಜಾಲ ತಾಣಕ್ಕೆ ಹಾಕುವ ಖಯಾಲಿ ಹೊಂದಿದ್ದ ಪತ್ನಿಯ ಮೇಲೆ ವಿಪರೀತ ಗರಂ ಆದ ಪತಿರಾಯ, ಪುಣೆಯ ಟೆಕ್ಕಿ, ಪತ್ನಿಯನ್ನು ಕುತ್ತಿಗೆ ಬಿಗಿದು ಕೊಂದು ಬಳಿಕ ತಾನೂ ನೇಣಿಗೆ ಶರಣಾದ ಘಟನೆ ನಡೆದಿದೆ.
ಪತ್ನಿ ಸೋನಾಲಿಗೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಖಾಸಗಿ ಬದುಕಿನ ಹಲವಾರು ವಿಚಾರಗಳನ್ನು ಪೋಸ್ಟ್ ಮಾಡಿ ಎಲ್ಲವನ್ನೂ ಬಟಾಬಯಲು ಮಾಡುವ ಹುಚ್ಚು ವಿಪರೀತವಾಗಿತ್ತು. ಇದರಿಂದ ವೃತ್ತಿಯಲ್ಲಿ ಟೆಕ್ಕಿಯಾಗಿರುವ ಪತಿ, 34ರ ಹರೆಯದ ರಾಕೇಶ್ ಗಣಗುರ್ಡೆಗೆ ವಿಪರೀತ ಕೋಪ ಬಂದಿತ್ತು. ಈ ಕೋಪವೇ ಪತ್ನಿಯ ಕೊಲೆ ಮತ್ತು ಸ್ವಂತದ ಆತ್ಮಹತ್ಯೆಗೆ ಹೇತುವಾಯಿತು.
28ರ ಹರೆಯದ ಸೋನಾಲಿಯನ್ನು ನಾಲ್ಕು ವರ್ಷಗಳ ಹಿಂದೆ ರಾಕೇಶ್ ಮದುವೆಯಾಗಿದ್ದ. ಈ ದಂಪತಿಗೆ ಮಕ್ಕಳಾಗಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ದಾಂಪತ್ಯ ಬದುಕಿನ ಎಲ್ಲ ಖಾಸಗಿ ವಿಚಾರಗಳನ್ನು ಪೋಸ್ಟ್ ಮಾಡುವ ಸೋನಾಲಿಯ ಖಯಾಲಿಯಿಂದ ರಾಕೇಶ್ ಕ್ರುದ್ಧಗೊಂಡಿದ್ದ. ಈ ಬಗ್ಗೆ ದಿನನಿತ್ಯವೂ ದಂಪತಿಯಲ್ಲಿ ಜಗಳ ಉಂಟಾಗುತ್ತಿತ್ತು.
ರಾಕೇಶ್ ಬರೆದಿಟ್ಟಿದ್ದ ಡೆತ್ ನೋಟ್ನಲ್ಲಿ ಪತ್ನಿ ಸೊನಾಲಿಯ ಬಗ್ಗೆ ಆತ ತುಂಬಾ ಅಸಂತೃಪ್ತನಾಗಿದ್ದುದು ವ್ಯಕ್ತವಾಗಿದೆ. ದಾಂಪತ್ಯದ ಬಗೆಗಿನ ಖಾಸಗಿ ವಿಚಾರಗಳನ್ನು ತನ್ನ ಸ್ನೇಹಿತೆಯರಲ್ಲಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುವ ಖಯಾಲಿ ಆಕೆಗೆ ವಿಪರೀತವಿತ್ತು. ಇದರಿಂದ ರಾಕೇಶ್ ಸಿಟ್ಟಿಗೆದಿದ್ದ.
ಸೊನಾಲಿಯ ಸಹೋದರ ಬುಧವಾರ ರಾತ್ರಿ ರಾಕೇಶ್ನ ಮನೆಗೆ ಭೇಟಿಕೊಟ್ಟಾಗಲೇ ಅವರಿಬ್ಬರ ಶವಗಳನ್ನು ಮನೆಯಲ್ಲಿ ಕಂಡು ಹೈರಾಣಾಗಿದ್ದ. ನಾಶಿಕ್ನಿಂದ ಸೊನಾಲಿಯ ತಾಯಿ ಹಲವಾರು ಬಾರಿ ಮಗಳಿಗೆ ಫೋನ್ ಮಾಡಿದ್ದಳು. ಆದರೆ ಈ ಕಡೆಯಿಂದ ಮಗಳ ಉತ್ತರವಿಲ್ಲದೆ ಕಂಗಾಲಾಗಿದ್ದಳು. ಆದ್ದರಿಂದ ಆಕೆ ತನ್ನ ಪುತ್ರರಿಗೆ ಫೋನ್ ಮಾಡಿ, ಅವರ ಸಹೋದರಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಕೋರಿದ್ದಳು.
ರಾಕೇಶ್ – ಸೋನಾಲಿ ವಾಸ್ತವ್ಯದ ಅಪಾರ್ಟ್ಮೆಂಟ್ ಒಳಗಡೆಯಿಂದ ಲಾಕ್ ಆಗಿತ್ತು. ಒಡನೆಯೇ ಸೋನಾಲಿಯ ಸಹೋದರ ಪೊಲೀಸರನ್ನು ಕರೆಸಿಕೊಂಡಿದ್ದ. ಬಾಗಿ ಲು ಒಡೆದು ಒಳಗೆ ಹೋದಾಗ ಅಲ್ಲಿ ರಾಕೇಶ್ – ಸೋನಾಲಿಯ ಶವಗಳು ಕಂಡುಬಂದವು.
ವಿಜ್ಞಾನ ಹಾಗೂ ಎಂಬಿಎ ಪದವೀಧರನಾಗಿರುವ ರಾಕೇಶ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ. ಪತ್ನಿ ಸೋನಾಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದು ಕೆಲವು ತಿಂಗಳ ಹಿಂದೆಯೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.