![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 1, 2021, 2:47 PM IST
ಮುಂಬೈ : 23 ವರ್ಷದ ಗೃಹಿಣಿಯೋರ್ವಳು ‘ಪಾನಿ ಪುರಿ’ ವಿಷಯವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಪ್ರತಿಕ್ಷಾ ಸರವಾಡೆ (ವ.23) ಪ್ರಾಣ ಕಳೆದುಕೊಂಡ ಮಹಿಳೆ.
2019 ರಲ್ಲಿ ಅಂಬೇಗಾಂವ್ ನಿವಾಸಿ ಗಹಿನಿನಾಥ್ ಜೊತೆ ಪ್ರತಿಕ್ಷಾ ಅವರ ವಿವಾಹ ನಡೆದಿತ್ತು. ದಾಂಪತ್ಯ ಜೀವನ ಚನ್ನಾಗಿ ನಡೆದಿತ್ತಾದರೂ ಆಗಾಗ ಸಣ್ಣಪುಟ್ಟ ಜಗಳವಾಗುತ್ತಿದ್ದವು. ಕಳೆದ ಶುಕ್ರವಾರವೂ ಈ ದಂಪತಿ ನಡುವೆ ಜಗಳ ನಡೆದಿದೆ. ಪರಸ್ಪರ ಕಿತ್ತಾಡಿಕೊಂಡ ಬಳಿಕ ವಿಷ ಸೇವಿಸಿ ಪ್ರತಿಕ್ಷಾ ಆತ್ಮಹತ್ಯೆ ಯತ್ನಿಸಿದ್ದಳು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಭಾನುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಕಾರಣವಾಯ್ತು ‘ಪಾನಿಪುರಿ’ :
ಇನ್ನು ಪ್ರತಿಕ್ಷಾ ಆತ್ಮಹತ್ಯೆ ಮಾಡಿಕೊಳ್ಳಲು ‘ಪಾನಿ ಪುರಿ’ ವಿಚಾರ ಕಾರಣ ಎನ್ನುವುದು ಪೊಲೀಸ್ ತನಿಖೆ ವೇಳೆ ಬೆಳೆಕಿಗೆ ಬಂದಿದೆ. ಜಗಳ ನಡೆದ ದಿನದಂದು ಈಕೆಗೆ ತಿಳಿಸದೆ ಪತಿ ಪಾನಿಪುರಿ ಪಾರ್ಸೆಲ್ ತಂದಿದ್ದ. ಮನೆಯಲ್ಲಿ ಅಡುಗೆ ಮಾಡಿದ್ದರೂ ಕೂಡ ಗಂಡ ತನಗೆ ಒಂದೂ ಮಾತು ಹೇಳದೆ ಪಾನಿ ಪುರಿ ತಂದಿದ್ದಕ್ಕೆ ಪ್ರತಿಕ್ಷಾ ಕೋಪಗೊಂಡು ಜಗಳ ಶುರುವಿಟ್ಟುಕೊಂಡಳು. ಅದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.