ಹೆದ್ದಾರಿಗಾಗಿ ತನ್ನ ಮನೆಯನ್ನೇ 500 ಅಡಿ ದೂರ ಶಿಫ್ಟ್ ಮಾಡಿದ ರೈತ!
Team Udayavani, Aug 21, 2022, 7:30 AM IST
ಚಂಡೀಗಢ: ಮರಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಪಂಜಾಬ್ನಲ್ಲಿ ಹೆದ್ದಾರಿಗೆ ಜಾಗ ಮಾಡಿಕೊಡುವ ಸಲುವಾಗಿ ರೈತರೊಬ್ಬರು ತಮ್ಮ ಕನಸಿನ ಮನೆಯನ್ನೇ 500 ಅಡಿಗಳಷ್ಟು ಹಿಂದಕ್ಕೆ ಸರಿಸಲಾರಂಭಿಸಿದ್ದಾರೆ!
ಸಂಗ್ರೂರಿನ ರೋಶನ್ವಾಲಾ ಗ್ರಾಮದ ಸುಖ್ವಿಂದರ್ ಸಿಂಗ್ ಸುಖಿ ಬರೋಬ್ಬರಿ 1.5 ಕೋಟಿ ರೂ. ಖರ್ಚು ಮಾಡಿ ಎರಡು ವರ್ಷಗಳಲ್ಲಿ ಒಂದು ಸುಂದರ ಮನೆ ಕಟ್ಟಿದ್ದಾರೆ. ತಮ್ಮದೇ ಹೊಲದಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಕೊಂಡಿರುವ ಅವರ ಮನೆಯನ್ನು ಇದೀಗ ಕೆಡವುವ ಪರಿಸ್ಥಿತಿ ಎದುರಾಗಿದೆ. ಅವರ ಮನೆ ಎದುರಲ್ಲೇ ದೆಹಲಿ-ಅಮೃತಸರ-ಕರ್ತಾ ಎಕ್ಸ್ಪ್ರೆಸ್ವೇ ಆಗುತ್ತಿದ್ದು, ಅದಕ್ಕಾಗಿ ಸುಖ್ವಿಂದರ್ ಜಾಗ ಬಿಟ್ಟುಕೊಡಬೇಕಿದೆ. ಅದಕ್ಕೆ ಪರಿಹಾರವಾಗಿ ಸರ್ಕಾರ ಹಣವನ್ನೂ ಕೊಟ್ಟಿದೆ.
ಆದರೆ ದೊಡ್ಡ ಕನಸಿನೊಂದಿಗೆ ಕಟ್ಟಿರುವ ಮನೆಯನ್ನು ಕೆಡವಲಿಚ್ಛಿಸದ ಸುಖ್ವಿಂದರ್ ಆ ಮನೆಯನ್ನೇ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ. ಪರಿಣತರ ಸಹಾಯ ಪಡೆದು, ಮನೆಯನ್ನು ಅಡಿಪಾಯದೊಂದಿಗೆ ಮೇಲಕ್ಕೆತ್ತಿ ಅದಕ್ಕೆ ಚಕ್ರ ರೂಪದ ಉಪಕರಣ ಜೋಡಿಸಿ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಮನೆಯಿದ್ದ ಸ್ಥಳದಿಂದ ಈಗಾಗಲೇ 250 ಅಡಿ ಹಿಂದಕ್ಕೆ ಸ್ಥಳಾಂತರಿಸಲಾಗಿದ್ದು, ಒಟ್ಟು 500 ಅಡಿ ಹಿಂದಕ್ಕೆ ಸರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದಿದ್ದಾರೆ ಸುಖ್ವಿಂದರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.