Miya Muslims ಹೇಳಿಕೆ; ಅಸ್ಸಾಂ ಸಿಎಂ ಹಿಮಂತ ವಿರುದ್ಧ ಸಿಬಲ್ ಆಕ್ರೋಶ
Team Udayavani, Aug 28, 2024, 12:02 PM IST
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ‘ಮಿಯಾ ಮುಸ್ಲಿಮರು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ’ ಎಂಬ ಹೇಳಿಕೆ ಶುದ್ಧ ಕೋಮು ವಿಷ, ಇಂತಹ ಹೇಳಿಕೆಗೆ ಮೌನ ಉತ್ತರವಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ಆಕ್ರೋಶ ಹೊರ ಹಾಕಿದ್ದಾರೆ.
ನಾಗಾಂವ್ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ವಿಪಕ್ಷಗಳು ಮಂಡಿಸಿದ ಮುಂದೂಡಿಕೆ ನಿರ್ಣಯಗಳ ಅಂಗೀಕಾರದ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮ ‘ಮಿಯಾ ಮುಸ್ಲಿಮರು ಅಸ್ಸಾಂ ಅನ್ನು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ” ಎಂದು ಕಿಡಿ ಕಾರಿದ್ದರು.
ಹೇಳಿಕೆ ಕುರಿತು X ನಲ್ಲಿ ಪ್ರತಿಕ್ರಿಯಿಸಿದ ಸಿಬಲ್ “ಹಿಮಂತ ಹೇಳಿಕೆ ಶುದ್ಧ ಕೋಮು ವಿಷ. ಇದಕ್ಕೆ ಮೌನ ಉತ್ತರವಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಿಯಾ’ ಎಂಬ ಪದವನ್ನು ಬೆಂಗಾಲಿ ಮಾತನಾಡುವ ಮುಸ್ಲಿಮರಿಗೆ ಅವಹೇಳನಕಾರಿ ಪದವಾಗಿ ಬಳಸಲಾಗುತ್ತಿತ್ತು.ಬಂಗಾಳಿ ಮಾತನಾಡದ ಜನರು ಸಾಮಾನ್ಯವಾಗಿ ಅವರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಗುರುತಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಿಯಾ ಪದವನ್ನು ಪ್ರತಿಭಟನೆಯ ಸೂಚಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh ಕ್ಯಾತೆ: ದುರ್ಗಾ ಪೂಜೆಗೆ ಹಿಲ್ಸಾ ಮೀನಿಲ್ಲ!
Missile;ದಿನದಲ್ಲಿ 2 ಸೀಮಿತ ವ್ಯಾಪ್ತಿ ಪ್ರಯೋಗ ಯಶಸ್ವಿ:ಏನಿದು ಸೀಮಿತ ವ್ಯಾಪ್ತಿಯ ಕ್ಷಿಪಣಿ?
Adani Group 2,610 ಕೋ.ರೂ. ವಶ; ತನಿಖೆ ಸುಪ್ರೀಂ ವಹಿಸಲಿ: ಕಾಂಗ್ರೆಸ್
PM Modi ಹುಟ್ಟುಹಬ್ಬಕ್ಕೆ ದರ್ಗಾದಲ್ಲಿ 4,000 ಕೆ.ಜಿ. ಖಾದ್ಯ
PM Modi ಯಿಂದ ಪಶ್ಚಿಮ ಬಂಗಾಲಕ್ಕೆ ಸ್ವಾತಂತ್ರ್ಯ ಘೋಷಿಸಿ: ಬಾಂಗ್ಲಾ ಉಗ್ರ
MUST WATCH
ಹೊಸ ಸೇರ್ಪಡೆ
Udupi: ಕರ್ತವ್ಯಲೋಪ: 80 ಪೊಲೀಸ್ ಸಿಬಂದಿ ಅಮಾನತು; ಎಸ್ಪಿ ಕಟ್ಟುನಿಟ್ಟಿನ ಕ್ರಮ
Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Officers Meeting: ವಸತಿ ಯೋಜನೆ ಫಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ
Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.