ತ್ವರಿತ ನ್ಯಾಯದಾನ ರಾಜ್ಯಕ್ಕೆ 6ನೇ ಸ್ಥಾನ

ನ್ಯಾಯಿಕ ವರದಿ ಬಿಡುಗಡೆ: ಮಹಾರಾಷ್ಟ್ರ ಮುಂಚೂಣಿಯಲ್ಲಿ

Team Udayavani, Nov 10, 2019, 4:26 AM IST

ss-31

ಕಾನೂನು ಮತ್ತು ನ್ಯಾಯ ಸುವ್ಯವಸ್ಥೆ ಸಮಾಜದ ಪ್ರಮುಖ ಅಂಶ. ಇದು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದೀಗ 2019ನೇ ಸಾಲಿನ ಭಾರತದ ನ್ಯಾಯಿಕ ವರದಿ ಬಿಡುಗಡೆಯಾಗಿದ್ದು, ದೇಶದಲ್ಲಿ ತ್ವರಿತವಾಗಿ ನ್ಯಾಯದಾನವನ್ನು ನೀಡುವುದರಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಸಹಿತ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಪಟ್ಟ ಅಂಶಗಳನ್ನು ಸಮೀಕ್ಷೆ ತಿಳಿಸಿದೆ.

ಏನಿದು ವರದಿ?
ನ್ಯಾಯವನ್ನು ಕೇಳಿ ಪಡೆಯುವುದು ಸಾರ್ವಜನಿಕರ ಹಕ್ಕಾಗಿದ್ದು, ಸಮಾಜದ ಪ್ರಜೆಗಳ ಹಿತಾಸಕ್ತಿ ಕಾಯ್ದುಕೊಳ್ಳುವುದು ಆಯಾ ದೇಶ-ರಾಜ್ಯದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ರಾಜ್ಯಗಳ ನ್ಯಾಯಾಂಗ ವ್ಯವಸ್ಥೆ ಪರಿಣಾಮಕಾರಿ ಆಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಈ ಸಮೀಕ್ಷೆ ನಡೆಸಲಾಗಿದೆ.

ಇದೇ ಮೊದಲು
ನ್ಯಾಯಾಂಗ ವ್ಯವಸ್ಥೆಯಲ್ಲಿ ಆಗುವ ಬೆಳವಣಿಗೆಗೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ ಇಂಥ ವರದಿ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದಲ್ಲಿನ ಶಾಂತಿ ಮತ್ತು ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ಸಮೀಕ್ಷೆ ನೆರವಾಗಲಿದೆ.

ಟಾಟಾ ಟ್ರಸ್ಟ್‌ನ ನೆರವು
ಸರಕಾರ ನೀಡಿರುವ ಅಂಕಿ-ಅಂಶ, ಉದ್ದೇಶ ಮತ್ತು ವರದಿಗಳನ್ನಿಟ್ಟುಕೊಂಡು ಟಾಟಾ ಟ್ರಸ್ಟ್‌ ಈ ಒಂದು ಸಮೀಕ್ಷೆಯನ್ನು ಸಿದ್ಧಪಡಿಸಿದ್ದು, ಸೆಂಟರ್‌ ಫಾರ್‌ ಸೋಶಿಯಲ್‌ ಜಸ್ಟೀಸ್‌, ಕಾಮನ್‌ ಕಾಸ್‌, ಕಾಮನ್ವೆಲ್ತ… ಹ್ಯೂಮನ್‌ ರೈಟ್ಸ್‌ ಇನಿಶಿಯೇಟಿವ್‌, ಡಿಎಕೆಎಸ್‌, ಟಿಐಎಸ್‌ಎಸ್‌-ಪ್ರಯಾಸ್‌ ಮತ್ತು ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿ ಎಂಬ ಸಂಸ್ಥೆಗಳು ಇದಕ್ಕೆ ಸಾಥ್‌ ನೀಡಿವೆ.

ಮಾನದಂಡಗಳೇನು
ಪೊಲೀಸ್‌ – ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹೇಗಿದೆ?
ಕಾರಾಗೃಹಗಳು – ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ
ಹೊಂದಿರುವ ಬಗ್ಗೆ
ನ್ಯಾಯಾಂಗ – ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ಬಗ್ಗೆ
ಕಾನೂನು ಸಹಾಯ – ಅವಶ್ಯರಿಗೆ ಕಾನೂನು ಸಹಾಯ ಒದಗಿಸುವುದರಲ್ಲಿ ರಾಜ್ಯಗಳ ಕಾರ್ಯಕ್ಷಮತೆ.

28 ರಾಜ್ಯಗಳಲ್ಲಿ ಸಮೀಕ್ಷೆ
ದೇಶದ 28 ರಾಜ್ಯಗಳನ್ನು ಸಮೀಕ್ಷೆಗೆ ಒಳಪಡಿಸಿದ್ದು, ದೊಡ್ಡ ಹಾಗೂ ಮಧ್ಯಮ ವಿಭಾಗದಲ್ಲಿ 18 ರಾಜ್ಯಗಳಿದ್ದು, ಸಣ್ಣ ಪ್ರದೇಶಗಳ ಗುಂಪಿನಲ್ಲಿ 6 ರಾಜ್ಯಗಳಿವೆ.
ಮಹಾರಾಷ್ಟ್ರ ಮೊದಲು ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 28 ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನಗಳಿಸಿದ್ದು, 10 ಅಂಕಗಳಲ್ಲಿ 5.92 ಅಂಕಗಳಿಸಿದೆ.

ರಾಜ್ಯಕ್ಕೆ 6ನೇ ಸ್ಥಾನ
ನಾಲ್ಕು ಮಾನದಂಡಗಳಲ್ಲಿ ಮಧ್ಯಮ ಪ್ರದರ್ಶನ ನೀಡಿರುವ ಕರ್ನಾಟಕ ನ್ಯಾಯೋಚಿತವಾಗಿ ಮತ್ತು ತ್ವರಿತವಾಗಿ ನ್ಯಾಯವನ್ನು ನೀಡುವುದರಲ್ಲಿ 5.11 ಅಂಕಗಳಿಸುವ ಮೂಲಕ 6ನೇ ಸ್ಥಾನವನ್ನು ಪಡೆದುಕೊಂಡಿದೆ.

ರಾಜ್ಯದ ಒಟ್ಟು ಸ್ಥಿತಿ
ಪೊಲೀಸ್‌: ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿ ರಾಜ್ಯ 5.81 ಅಂಕಗಳಿಸಿದ್ದು, 6ನೇ ಸ್ಥಾನದಲ್ಲಿದೆ.
ಕಾರಾಗೃಹಗಳು : ಜೈಲಿನಲ್ಲಿನ ಜನಸಂದಣಿ ಮತ್ತು ಸಮರ್ಪಕ ಮಾನವ ಸಂಪನ್ಮೂಲ ಮಾನದಂಡದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 6.31 ಅಂಕವನ್ನು ಗಳಿಸಿದೆ.
ನ್ಯಾಯಾಂಗ: ನ್ಯಾಯಾಧೀಶರ ಲಭ್ಯತೆ, ಪ್ರಕರಣಗಳ ನಿರ್ಣಯ ದದಲ್ಲಿ 16ನೇ ಸ್ಥಾನದಲ್ಲಿರುವ ರಾಜ್ಯ ಕೇವಲ 3,76 ಅಂಕ ಗಳಿಸಿದೆ. ಕಾನೂನು ಸಹಾಯ: ಅವಶ್ಯರಿಗೆ ಕಾನೂನು ಸಹಾಯ ಒದಗಿಸು ವುದರಲ್ಲಿ 7ನೇ ಸ್ಥಾನದಲ್ಲಿರುವ ಕರ್ನಾಟಕ 5.22 ಅಂಕಗಳನ್ನು ಪಡೆದಿದೆ.

67.7 ಶೇ. ವಿಚಾರಣಾಧೀನ ಕೈದಿಗಳು
2016 ರ ಅಂಕಿ-ಅಂಶದ ಪ್ರಕಾರ ಭಾರತದ ಜೈಲಿನಲ್ಲಿ ಶೇ.67.7 ರಷ್ಟು ವಿಚಾರಣಾಧೀನ ಕೈದಿಗಳಿದ್ದಾರೆ.

2.8 ಕೋಟಿ ಪ್ರಕರಣಗಳು ಬಾಕಿ
ದೇಶದ ಅಧೀನ ನ್ಯಾಯಾಲಯಗಳಲ್ಲಿ 2.8 ಕೋಟಿ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಮುಂದಿನ 5 ವರ್ಷಗಳು ಕಳೆದರೂ ಇದರ ಪ್ರಮಾಣದಲ್ಲಿ ಶೇ.24ರಷ್ಟು ಬಾಕಿ ಉಳಿಯಲಿದೆ.

621 ಅಧಿಕಾರಿಗಳು
ದೇಶದ ಒಟ್ಟು 1,412 ಕಾರಾಗೃಹಗಳಿಗೆ ಕೇವಲ 621 ಜೈಲು ಅಧಿಕಾರಿಗಳಿದ್ದಾರೆ.

68 ನೇ ಸ್ಥಾನ
ಕಾನೂನು ನಿಯಮ ಸೂಚ್ಯಂಕದಲ್ಲಿ ವಿಶ್ವದ 126 ದೇಶಗಳ ಪೈಕಿ ಭಾರತ 68ನೇ ಸ್ಥಾನದಲ್ಲಿದೆ.

59 ನೇ ಸ್ಥಾನ
ಹಿಂಸಾಕೃತ್ಯದಿಂದ ಆರ್ಥಿಕ ಪರಿಣಾಮದ ಕುರಿತ ಸೂಚ್ಯಂಕದಲ್ಲಿ ವಿಶ್ವದ 163 ದೇಶಗಳ ಪೈಕಿ ಭಾರತ 59ನೇ ಸ್ಥಾನ ಪಡೆದುಕೊಂಡಿದೆ.

ಟಾಪ್ ನ್ಯೂಸ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Mother-in-law gives HIV injection to daughter-in-law for not giving much dowry

ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್‌ ನೀಡಿದ ಅತ್ತೆ ಮಾವ

Valentine’s Day: Young woman orders 100 pizzas for old boyfriend: But there’s a twist

Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್‌ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.