![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 4, 2023, 1:48 PM IST
ಲಕ್ನೋ: “ರಾಹುಲ್ ಗಾಂಧಿಯ ಇಮೇಜ್ ಹಾಳುಮಾಡುವುದಕ್ಕೆ ಸರಕಾರ ಯಾವುದೇ ಕುತಂತ್ರ ರೂಪಿಸಿದರೂ ಅದು ವ್ಯರ್ಥ. ಆತ ಯಾವುದಕ್ಕೂ ಹಿಂಜರಿಯುವುದೂ ಇಲ್ಲ, ಎದೆಗುಂದುವುದೂ ಇಲ್ಲ. ರಾಹುಲ್ ಒಬ್ಬ ಯೋಧ’ ಎಂದು ಕಾಂಗ್ರೆಸ್ ನಾಯಕಿ, ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.
ಉತ್ತರ ಪ್ರದೇಶಕ್ಕೆ ಮಂಗಳವಾರ ಕಾಲಿಟ್ಟಿರುವ ಭಾರತ್ಜೋಡೋ ಯಾತ್ರೆಯಲ್ಲಿ ಭಾಗಿಯಾಗಿ, ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ಪ್ರಿಯಾಂಕಾ, ನನ್ನ ಅಣ್ಣನ ಬಗ್ಗೆ ನನಗೆ ಹೆಮ್ಮೆ ಇದೆ. ಸರಕಾರ ಆತನ ಇಮೇಜ್ ಹಾಳುಮಾಡಲು ಕೋಟ್ಯಂತರ ರೂ. ಗಳನ್ನು ಸುರಿಯುತ್ತಿದೆ. ಆತನ ಹಿಂದೆ ಏಜೆನ್ಸಿಗಳನ್ನು ಛೂ ಬಿಟ್ಟಿದೆ. ಆದರೆ ರಾಹುಲ್ ಯಾವುದಕ್ಕೂ ಹೆದರಿಲ್ಲ. ಆತ ಯೋಧನಂತೆ. ಅದಾನಿ, ಅಂಬಾನಿಯಂಥ ಶ್ರೀಮಂತರು ರಾಜಕಾರಣಿಗಳನ್ನು, ಮಾಧ್ಯಮಗಳನ್ನು ಖರೀದಿಸಿರಬಹುದು. ಆದರೆ ನನ್ನ ಅಣ್ಣನನ್ನು ಕೊಂಡುಕೊಳ್ಳಲಾಗಿಲ್ಲ . ಆತ ಸದಾ ಸತ್ಯದ ಮಾರ್ಗದಲ್ಲಿದ್ದಾನೆ ಎಂದಿದ್ದಾರೆ.
ರಾಹುಲ್ಗೆ ತೀವ್ರ ಗೊಂದಲ: “ರಾಹುಲ್ ಗಾಂಧಿ ಅವರು ಶಾಶ್ವತವಾಗಿ ಗೊಂದಲಕ್ಕೀಡಾಗಿದ್ದಾರೆ. ಚೀನ ಎದುರು ಭಾರತ ಶರಣಾಗಬೇಕು ಎಂದು ಅವರು
ಬಯಸುತ್ತಾರೆ,’ ಎಂದು ಬಿಜೆಪಿ ದೂರಿದೆ.
ಭಾರತ-ಚೀನ ಗಡಿ ವಿಷಯವಾಗಿ ರಾಹುಲ್ ಗಾಂಧಿ ಅವರ ಇತ್ತೀಚಿನ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, “ದೇಶ ಸುತ್ತುವುದರಿಂದಷ್ಟೇ ಭಾರತ ಏನೆಂದು ಅರ್ಥವಾಗುವುದಿಲ್ಲ. ಭಾರತೀಯತೆ ಏನು ಎಂಬುದನ್ನು ಮೊದಲು ಅರಿಯಬೇಕಾಗುತ್ತದೆ. ನಾಲ್ಕು ತಲೆಮಾರುಗಳಿಂದ (ಗಾಂಧಿ ಕುಟುಂಬ) ಭಾರತದ ಆವಿಷ್ಕಾರ ನಡೆಯುತ್ತಿದೆ,’ ಎಂದು ಟೀಕಿಸಿದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.