Ratan Tata; ಶ*ವಪೆಟ್ಟಿಗೆ ಬಿಟ್ಟು ಕದಲದ ‘ಗೋವಾ’: ಒಡೆಯನ ಸಾವಿಗೆ ಶ್ವಾನದ ಕಂಬನಿ!

ರತನ್‌ ಟಾಟಾಗೆ ಗುಡ್‌ ಬೈ ಹೇಳಿದ ಅಚ್ಚುಮೆಚ್ಚಿನ ಸಾಕು ನಾಯಿ

Team Udayavani, Oct 11, 2024, 6:01 AM IST

1-dog-a

ರತನ್‌ ಟಾಟಾರನ್ನು ಕಡೆಯದಾಗಿ ಕಣ್ತುಂಬಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಗಣ್ಯರು, ಜನಸಾಮಾನ್ಯರು ಬಂದು ಕಂಬನಿ ಮಿಡಿಯುತ್ತಿರುವುದು ಒಂದೆಡೆಯಾದರೆ, ಯಾರನ್ನು ತಮ್ಮ ಕುಟುಂಬಸ್ಥರಂತೆ ರತನ್‌ ಕಂಡರೋ ಆ ಮೂಕ ಪ್ರಾಣಿಗಳು ಒಡೆಯನ ಸಾವಿನ ನೋವಿನಿಂದ ಮರುಗುತ್ತಿರುವುದು ಮತ್ತೂಂದೆಡೆ. ಹೌದು, ರತನ್‌ ಪ್ರೀತಿಯಿಂದ ಸಾಕಿ ಸಲುಹಿದ್ದ ಗೋವಾ ಎಂಬ ಶ್ವಾನ ತುತ್ತು ಅನ್ನವನ್ನೂ ತಿನ್ನದೇ, ರತನ್‌ ಅವರ ಶವಪೆಟ್ಟಿಗೆಯಿಂದ ಹಿಂದೆಯೂ ಸರಿಯದೇ ಒಡೆಯ ಎಚ್ಚರಗೊಳ್ಳಲೆಂದು ಕಾದು ಕುಳಿತಿತ್ತು. ಈ ದೃಶ್ಯ ಎಲ್ಲರ ಮನಕಲುಕಿದೆ.

ಗೋವಾ ರತನ್‌ ಅವರ ಅಚ್ಚುಮೆಚ್ಚಿನ ಶ್ವಾನ. ಒಮ್ಮೆ ರತನ್‌ ಟಾಟಾ ಗೋವಾ ಪ್ರವಾಸಕ್ಕೆಂದು ತೆರಳಿದ್ದಾಗ ಅವರ ಹಿಂದೆ ಬಾಲ ಅಲ್ಲಾಡಿಸುತ್ತಾ ಬೀದಿ ಶ್ವಾನವೊಂದು ಹಿಂಬಾಲಿಸಿತ್ತಂತೆ. ಅದರ ಪ್ರೀತಿಗೆ ಸೋತ ರತನ್‌ ಆ ಶ್ವಾನದ ಮೈದಡವಿ ಅದನ್ನು ಮುಂಬೈಗೆ ಕರೆತಂದು ಪೋಷಿಸಿ ತಮ್ಮ ಜತೆಯಲ್ಲೇ ಇರಿಸಿಕೊಂಡಿದ್ದರು. ಅದು ಗೋವಾದಲ್ಲಿ ಸಿಕ್ಕ ಕಾರಣ ಅದಕ್ಕೆ “ಗೋವಾ’ ಎಂದೇ ನಾಮಕರಣವನ್ನೂ ಮಾಡಿದ್ದರು. ಈಗ ಅದೇ ಗೋವಾ ತನ್ನ ಒಡೆಯ ಎದ್ದೇಳಲಿ, ತನ್ನ ಮೈದಡವಲಿ ಎಂದು ಶವಪೆಟ್ಟಿಗೆ ಬಳಿ ಬಾಲಾ ಅಲ್ಲಾಡಿಸುತ್ತಾ ನಿಂತಿದ್ದು ಮಾತ್ರ ಎಲ್ಲರ ಕಣ್ಣಲ್ಲಿ ಕಂಬನಿ ತುಂಬಿಸಿದೆ. ಬೀದಿ ಶ್ವಾನಗಳ ರಕ್ಷಣೆಗಾಗಿ ದುಡಿತ ಚೇತನಕ್ಕೆ ಗೋವಾ ನೀಡಿದ ಗೌರವ ನಿಜಕ್ಕೂ ದೊಡ್ಡದು.

ಭಾವುಕ ವಿದಾಯ ನೀಡಿದ ಅತೀ ಕಿರಿಯ ಗೆಳೆಯ ಶಂತನು ನಾಯ್ಡು


ರತನ್‌ ಟಾಟಾ ಕಚೇರಿಯ ಜನರಲ್‌ ಮ್ಯಾನೇಜರ್‌ ಎನ್ನುವುದ ಕ್ಕಿಂತಲೂ ಅವರ ವಿಶ್ವಾಸಾರ್ಹ ಗೆಳೆಯರಾಗಿದ್ದ ಶಂತನು ನಾಯ್ಡು ತಮ್ಮ ಒಡೆಯನನ್ನು ಬೆಳಕು ನೀಡುವ ಲೈಟ್‌ ಹೌಸ್‌ಗೆ ಹೋಲಿಸಿ ಲಿಂಕ್ಡ್ಇನ್‌ನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿ ಕೊಂಡಿದ್ದಾರೆ. “ಈ ಸ್ನೇಹ ಕಳೆದುಕೊಂಡ ಬಳಿಕ ನನ್ನೊ ಳಗೆ ದೊಡ್ಡ ಕಂದಕ ಸೃಷ್ಟಿಯಾ ಗಿದೆ. ಈ ಕಂದಕ  ಮುಚ್ಚಲು ಪ್ರಯತ್ನಿ ಸುತ್ತಾ ನನ್ನ ಉಳಿದ ಜೀವನ ಕಳೆಯುತ್ತೇನೆ. ಪ್ರೀತಿಗೆ ಪಾವ ತಿ ಸ ಬೇಕಾದ ಬೆಲೆ ದುಃಖವಾಗಿದೆ. ಗುಡ್‌ ಬೈ, ನನ್ನ ಪ್ರೀತಿಯ ಲೈಟ್‌ ಹೌಸ್‌’ ಎಂದು ಅವರು ನುಡಿ ನಮನ ಸಲ್ಲಿಸಿದ್ದಾರೆ. ಬಳಿಕ ಟಾಟಾ ಅವರ ಅಂತಿಮ ಯಾತ್ರೆಯೊಂದಿಗೆ ಶಂತನು ತಮ್ಮ ಯೆಜ್ಡಿ ಬೈಕ್‌ನೊಂದಿಗೆ ಸಾಗಿ ಗೌರವ ಸಲ್ಲಿಸಿದರು. 2021ರಲ್ಲಿ ಟಾಟಾ ಅವರು ತಮ್ಮ ಕಿರಿಯ ಸ್ನೇಹಿತ ಶಂತನು ಅವರೊಂದಿಗೆ ಸರಳ ಹುಟ್ಟುಹಬ್ಬ ಆಚರಿಸಿದ ವೀಡಿಯೋ ವೈರಲ್‌ ಆಗಿತ್ತು.

 

ಟಾಪ್ ನ್ಯೂಸ್

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

1-tata-bg

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

1-rana

India; ವನ್ಯಜೀವಿಗಳ ಸಂಖ್ಯೆ 50 ವರ್ಷದಲ್ಲಿ 73% ಕುಸಿತ!

1-horoscope

Daily Horoscope: ಜೀವನೋತ್ಸಾಹ ಉಳಿಸಿಕೊಳ್ಳಲು ಶ್ರಮ, ವ್ಯಾಪಾರಿಗಳಿಗೆ ಪೈಪೋಟಿಯಿಂದ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rana

India; ವನ್ಯಜೀವಿಗಳ ಸಂಖ್ಯೆ 50 ವರ್ಷದಲ್ಲಿ 73% ಕುಸಿತ!

akhilesh

SP-Congress ಮೈತ್ರಿ ಸ್ಥಿರ, ಒಕ್ಕೂಟದಲ್ಲಿ ಬಿರುಕಿಲ್ಲ: ಅಖೀಲೇಶ್‌

rahul gandhi

Haryana ಸೋಲಿಗೆ ನಿಮ್ಮ ಸ್ವಾರ್ಥ ಕಾರಣ: ರಾಹುಲ್‌ ಗಾಂಧಿ ಗರಂ?

1-hari

Haryana; ಶೇ.96ರಷ್ಟು ಶಾಸಕರು ಕೋಟ್ಯಧಿಪತಿಗಳು: ಎಡಿಆರ್‌ ವರದಿ ಮಾಹಿತಿ

Kerala High Court: ಧಾರ್ಮಿಕ ನಂಬಿಕೆಗಿಂತ ಸಂವಿಧಾನ ಮಿಗಿಲು

Kerala High Court: ಧಾರ್ಮಿಕ ನಂಬಿಕೆಗಿಂತ ಸಂವಿಧಾನ ಮಿಗಿಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

1-tata-bg

‘Welcome’: ರತನ್ ಟಾಟಾರಿಗೆ ಒಂದೇ ಒಂದು ಮೆಸೇಜ್ ಮೂಲಕ ಗುಜರಾತ್ ಗೆ ನ್ಯಾನೋ ತಂದಿದ್ದ ಮೋದಿ!

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

Illegal; ಗಣಿಗಾರಿಕೆ ತನಿಖೆ ವಿಸ್ತರಣೆ: ಈ ವರೆಗೆ 29 ಸಾವಿರ ಕೋಟಿ ರೂ. ಮರಳಿ ವಸೂಲಿ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

State Govt: ವಿನಯ್‌ ಕುಲಕರ್ಣಿ ಅತ್ಯಾ*ಚಾರ ಪ್ರಕರಣ ಸಿಐಡಿಗೆ

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Navratri special: ಇಷ್ಟಪಟ್ಟಿದ್ದನ್ನು ಬಿಟ್ಟು ಕೊಡುವುದೂ ಜೀವನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.