
ಪಿಎಂಸಿ ಬ್ಯಾಂಕ್ ವಿತ್ಡ್ರಾವಲ್ ಮಿತಿ 50 ಸಾವಿರಕ್ಕೆ ಏರಿಕೆ
50 ಸಾವಿರ ರೂ.ಗಳಿಗೇರಿಸಿ ಆರ್ಬಿಐ ಆದೇಶ
Team Udayavani, Nov 5, 2019, 7:09 PM IST

ಮುಂಬಯಿ: ಬ್ಯಾಂಕಿಂಗ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ. ಆಪರೇಟಿವ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದ್ದು, ಅದನ್ನೀಗ ತುಸು ಸಡಿಲಗೊಳಿಸಿದೆ.
ಆರ್ಬಿಐ ಕ್ರಮದ ಅಂಗವಾಗಿ ಇನ್ನು ಗ್ರಾಹಕರು 50 ಸಾವಿರ ರೂ.ವರೆಗೆ ಹಣ ವಿತ್ಡ್ರಾವಲ್ ಮಾಡಿಕೊಳ್ಳಬಹುದು.
ಅವ್ಯವಹಾರದ ವಾಸನೆ ಬಡಿದ ಹಿನ್ನೆಲೆಯಲ್ಲಿ ಆರ್ಬಿಐ ಬ್ಯಾಂಕಿನ ಆಡಳಿತವನ್ನು ನೇರ ತನ್ನ ನಿರ್ದೇಶನದಡಿಗೆ ತೆಗೆದುಕೊಂಡಿತ್ತು. ಜತೆಗೆ ಗ್ರಾಹಕರಿಗೆ ವಿತ್ಡ್ರಾವಲ್ ಮಿತಿಗಳನ್ನು ಹೇರಲಾಗಿತ್ತು. ಬಳಿಕ ಅದನ್ನು ತುಸು ಸಡಿಲಿಸುತ್ತ ಬಂದಿದ್ದು, ಅ.14ರಂದು ಈ ಮಿತಿಯನ್ನು 40 ಸಾವಿರ ರೂ.ಗಳಿಗೆ ಏರಿಸಿತ್ತು.
ಸದ್ಯ 50 ಸಾವಿರ ರೂ. ವಿತ್ಡ್ರಾವಲ್ ಮಿತಿ ಏರಿಸಿದ್ದರಿಂದ ಶೇ.78ರಷ್ಟು ಮಂದಿ ಗ್ರಾಹಕರು ತಮ್ಮ ಸಂಪೂರ್ಣ ಹಣವನ್ನು ಖಾತೆಯಿಂದ ಪಡೆದುಕೊಳ್ಳಬಹುದಾಗಿದೆ ಎಂದು ಆರ್ಬಿಐ ಹೇಳಿದೆ. ಇದರೊಂದಿಗೆ ಹೊಸ ಠೇವಣಿ ಇಡಲು ಇರುವ ನಿರ್ಬಂಧ ಹಾಗೆಯೇ ಮುಂದುವರಿದಿದೆ. ಈ ಮೊದಲು ಕಡಿಮೆ ವಿತ್ಡ್ರಾವಲ್ ಮಿತಿ ಇಟ್ಟಿದ್ದಕ್ಕಾಗಿ ಗ್ರಾಹಕರಿಂದ ತೀವ್ರ ಆಕ್ಷೇಪ ಕೇಳಿಬಂದಿತ್ತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
MUST WATCH
ಹೊಸ ಸೇರ್ಪಡೆ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.