ವಿಸ್ಪರರ್ಸ್ನ ಬೊಮ್ಮನ್, ಬೆಲ್ಲಿಗೆ ಸನ್ಮಾನ
ತ.ನಾ. ಮುಖ್ಯಮಂತ್ರಿಯಿಂದ ತಲಾ 1 ಲಕ್ಷ ರೂ. ಚೆಕ್
Team Udayavani, Mar 16, 2023, 7:35 AM IST
ಚೆನ್ನೈ:ತಮಿಳುನಾಡಿನ ಮುದುಮಲೈ ಅರಣ್ಯದಲ್ಲಿ ಚಿತ್ರೀಕರಿಸಲಾಗಿದ್ದ ಕಿರುಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದು ಈಗ ಹಳೆಯ ಸುದ್ದಿ.
ಎಲಿಫೆಂಟ್ ವಿಸ್ಪರರ್ಸ್ನ ನೈಜ ಹೀರೋಗಳಾದ ಬೊಮ್ಮನ್ ಮತ್ತು ಬೆಲ್ಲಿ ದಂಪತಿಯನ್ನು ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಮ್ಮ ಕಾರ್ಯಾಲಯಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದಾರೆ. ಮಾತ್ರವಲ್ಲ ತಲಾ 1 ಲಕ್ಷ ರೂ.ಗಳ ಚೆಕ್ ಕೂಡ ನೀಡಿದ್ದಾರೆ.
ಜತೆಗೆ, ರಾಜ್ಯದ ಆನೆ ಶಿಬಿರಗಳಲ್ಲಿ ಕೆಲಸ ಮಾಡುತ್ತಿರುವ 91 ಮಂದಿಗೂ ತಲಾ 1 ಲಕ್ಷ ರೂ.ಗಳನ್ನು ನೀಡಿದ್ದಾರೆ. ಈ ಚಿತ್ರದಿಂದ ತಮಿಳುನಾಡಿನ ಅರಣ್ಯಗಳಲ್ಲಿ ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಕಟ್ಟುನಾಯಕನ್ ಬುಡಕಟ್ಟು ಜನಾಂಗಕ್ಕೆ ಸೇರಿದ ಬೊಮ್ಮನ್ ಮತ್ತು ಬೆಲ್ಲಿ ದಂಪತಿಗೆ ರಘು ಎಂಬ ಅನಾಥ ಮರಿಯಾನೆಯೊಂದಿಗೆ ಇರುವ ಒಡನಾಟದ ಕಥೆಯನ್ನು ಈ ಕಿರುಚಿತ್ರ ಹೇಳುತ್ತದೆ.
ನೃತ್ಯ ಮಾಡಿಲ್ಲವೇಕೆ?:
ಆಸ್ಕರ್ ಅಕಾಡೆಮಿ ಪ್ರಶಸ್ತಿಯ ವೇದಿಕೆಯಲ್ಲಿ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಜೂ.ಎನ್ಟಿಆರ್ ಮತ್ತು ರಾಮ್ಚರಣ್ ಹೆಜ್ಜೆ ಹಾಕಲಿಲ್ಲವೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಹಾಡಿಗೆ ಡಾನ್ಸ್ ಮಾಡುವಂತೆ ಮೊದಲಿಗೆ ಇಬ್ಬರು ನಟರನ್ನೂ ಕೇಳಿಕೊಳ್ಳಲಾಗಿತ್ತು. ಆದರೆ, ನೃತ್ಯದ ರಿಹರ್ಸಲ್ಗೆ ಸಮಯದ ಅಭಾವವಿದ್ದ ಕಾರಣ ಜೂ.ಎನ್ಟಿಆರ್ ಮತ್ತು ರಾಮ್ಚರಣ ಹಿಂದೇಟು ಹಾಕಿದ್ದರು ಎಂದು ಪ್ರೊಡ್ನೂಸರ್ ರಾಜ್ಕಪೂರ್ ಹೇಳಿದ್ದಾರೆ.
ನಾಟು -ನಾಟು ಹುಡುಕಾಟ ಶೇ.1105 ಹೆಚ್ಚಳ
ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡಿನ ಮುಡಿಗೆ ಆಸ್ಕರ್ ಗರಿ ಏರುತ್ತಿದ್ದಂತೆ ವಿಶ್ವಾದ್ಯಂತ ಹಾಡಿನ ಹುಡುಕಾಟವೂ ಹೆಚ್ಚಾಗಿತ್ತು. ಗೂಗಲ್ನಲ್ಲಿ ನಾಟುಗಾಗಿ ಹುಡುಕಾಟ ನಡೆಸಿದ ಪ್ರಮಾಣ ಶೇ.1,105ರಷ್ಟು ಹೆಚ್ಚಾಗಿತ್ತು ಎಂದು ವರದಿಯೊಂದು ತಿಳಿಸಿದೆ. ಜಪಾನೀಸ್ ಆನ್ಲೈನ್ ಕ್ಯಾಸಿನೋ ಗೈಡ್ 6ತಕರಕುಜಿ ಗೂಗಲ್ ಟ್ರೆಂಡ್ ಡೇಟಾವನ್ನು ಕಲೆಹಾಕಿದೆ. ಅದರಂತೆ, ಆಸ್ಕರ್ ಪ್ರಶಸ್ತಿ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಜಗತ್ತಿನಾದ್ಯಂತ ಗೂಗಲ್ನಲ್ಲಿ ಜನರು ಈ ಹಾಡಿಗಾಗಿ ಹುಟುಕಾಟ ನಡೆಸಿದ್ದಾರೆ. ಇದು ಸಾಮಾನ್ಯ ಹುಡುಕಾಟ ಪ್ರಮಾಣಕ್ಕಿಂತ 10 ಪಟ್ಟು ಹೆಚ್ಚು ಎನ್ನಲಾಗಿದೆ. ಈ ಹಾಡು ಟಿಕ್ಟಾಕ್ನಲ್ಲೂ ಭಾರೀ ಸದ್ದುಮಾಡಿದ್ದು, 52.6 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
NDA CMs Meet: ರಾಷ್ಟ್ರದ ಅಭಿವೃದ್ಧಿಗೆ ಎನ್ಡಿಎ ಬದ್ಧ: ಪ್ರಧಾನಿ ಮೋದಿ
Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್!
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.