![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 19, 2019, 9:13 AM IST
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಅಂಗರಕ್ಷಕ ‘ಶೇರಾ’ ಶುಕ್ರವಾರ ಶಿವಸೇನಾ ಪಕ್ಷಕ್ಕೆ ಸೇರಿದರು.
ಶುಕ್ರವಾರ ಮುಂಬೈಯ ಠಾಕ್ರೆ ನಿವಾಸ ಮಾತೋಶ್ರೀಯಲ್ಲಿ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮತ್ತು ಯುವ ಸೇನಾ ಮುಖಂಡ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಶೇರಾ ತಮ್ಮ ರಾಜಕೀಯ ಜೀವನ ಆರಂಭಿಸಿದರು.
ಶಿವಸೇನಾ ಅಧಿಕೃತ ಟ್ವಿಟರ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ಶಿವಸೇನಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮತ್ತೊಮ್ಮೆ ಗದ್ದುಗೆಗೇರಲು ಪ್ರಯತ್ನ ನಡೆಸುತ್ತಿದೆ.
ಯಾರು ಈ ಶೇರಾ?
ಸೂಪರ್ ಸ್ಟಾರ್ ಸಲ್ಲು ನಂಬಿಕಸ್ಥ ಬಾಡಿಗಾರ್ಡ್ ಶೇರಾ ನಿಜವಾದ ಹೆಸರು ಗುರ್ಮೀತ್ ಸಿಂಗ್. ಸಲ್ಲು ಜೊತೆ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಶೇರಾ, ಸಲ್ಮಾನ್ ಖಾನ್ ನ ನಂಬಿಕಸ್ಥ.
ಮುಂಬೈನ ಅಂಧೇರಿಯ ಸಿಖ್ ಕುಟುಂಬದ ಗುರ್ಮೀತ್ ಸಿಂಗ್ ತಂದೆ ಆಟೋಮೊಬೈಲ್ ವರ್ಕ್ ಶಾಪ್ ನಡೆಸುತ್ತಿದ್ದರು. ತನ್ನ ದೇಹವನ್ನು ಹುರಿಗೊಳಿಸಿದ್ದ ಗುರ್ಮೀತ್ ಮಿಸ್ಟರ್ ಮುಂಬೈ, ಮಿಸ್ಟರ್ ಮಹಾರಾಷ್ಟ್ರ ಮುಂತಾದ ಸ್ಪರ್ಧೆಗಳಲ್ಲಿ ಮಿಂಚಿದ್ದರು.
ಸೆಕ್ಯುರಿಟಿ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿದ ಗುರ್ಮೀತ್ 1995ರಲ್ಲಿ ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಸೇರಿದರು. ಸಲ್ಮಾನ್ ಸಹೋದರ ಸೊಹೈಲ್ ಖಾನ್ ಭೇಟಿಯಾಗಿ ”ನೀನು ನನ್ನ ಸಹೋದರನ ಜೊತೆ ಎಂದಿಗೂ ಇರುತ್ತೀಯ” ಎಂದು ಕೇಳಿದಾಗ ಗುರ್ಮೀತ್ ಹೌದು ಎಂದಿದ್ದರಂತೆ. ಹೀಗೆ ಸಲ್ಮಾನ್ ಜೊತೆ ಸೇರಿದ ಗುರ್ಮೀತ್ ‘’ಶೇರಾ’’ ಎಂದೇ ಪ್ರಸಿದ್ದಿಯಾಗಿದ್ದಾರೆ.
2011ರಲ್ಲಿ ತೆರೆಕಂಡಿದ್ದ ಬಾಡಿಗಾರ್ಡ್ ಸಿನಿಮಾವನ್ನು ಸಲ್ಮಾನ್ ಶೇರಾಗೆ ಅರ್ಪಿಸಿದ್ದರು. ಶೇರಾ ಮಗ ಟೈಗರ್ ನನ್ನು ಬಾಲಿವುಡ್ ಗೆ ಪರಿಚಯಿಸಲು ಸಲ್ಮಾನ್ ಸಿದ್ದರಾಗಿದ್ದಾರೆ ಎಂಬ ಮಾಹಿತಿಯೂ ಬಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.
ಎಷ್ಟು ಗೊತ್ತಾ ಸಂಬಳ
20ಕ್ಕೂ ಹೆಚ್ಚು ವರ್ಷಗಳಿಂದ ಸಲ್ಮಾನ್ ಖಾನ್ ಜೊತರೆಗಿರುವ ಶೇರಾ ಸಂಬಳ ಇಷ್ಟು ಇದೆ ಎಂಬ ಕುತೂಹಲ ಹಲವರಿಗಿದೆ. ಸಲ್ಮಾನ್ ತನ್ನ ಬಾಡಿಗಾರ್ಡ್ ಶೇರಾಗೆ ತಿಂಗಳಿಗೆ 15 ಲಕ್ಷ ವೇತನ ನೀಡುತ್ತಾರೆ ಎಂಬ ಮಾತುಗಳಿವೆ.
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.