ಸಮುದ್ರಯಾನಕ್ಕೆ ಭಾರತ ಸಜ್ಜು; ಸಮುದ್ರದ 6 ಸಾವಿರ ಅಡಿ ಆಳಕ್ಕೆ ತೆರಳಲಿದ್ದಾರೆ ವಿಜ್ಞಾನಿಗಳು


Team Udayavani, Aug 7, 2022, 7:30 AM IST

ಸಮುದ್ರಯಾನಕ್ಕೆ ಭಾರತ ಸಜ್ಜು; ಸಮುದ್ರದ 6 ಸಾವಿರ ಅಡಿ ಆಳಕ್ಕೆ ತೆರಳಲಿದ್ದಾರೆ ವಿಜ್ಞಾನಿಗಳು

ನವದೆಹಲಿ: ಬ್ರಹ್ಮಾಂಡದಾಚೆಗಿನ ರಹಸ್ಯವನ್ನು ತಿಳಿಯಲು “ಗಗನಯಾನ’, ಆಳ ಸಮುದ್ರದ ನಿಗೂಢ ಜಗತ್ತನ್ನು ಆವಿಷ್ಕರಿಸಲು “ಸಮುದ್ರಯಾನ’!

ಹೌದು, ಆಳ ಸಮುದ್ರದ ಶೇ.95ರಷ್ಟು ಭಾಗವನ್ನು ಇನ್ನೂ ಯಾರೂ ಅನ್ವೇಷಣೆ ಮಾಡಿಲ್ಲ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಭಾರತವು ಸದ್ಯದಲ್ಲೇ “ಸಮುದ್ರಯಾನ’ ಯೋಜನೆಯ ಮೂಲಕ ತಜ್ಞರ ತಂಡವೊಂದನ್ನು ಆಳ ಸಮುದ್ರಕ್ಕೆ ಕಳುಹಿಸಿಕೊಡಲಿದೆ. ಮಾನವಸಹಿತ ಜಲಾಂತರ್ಗಾಮಿ ನೌಕೆ “ಮತ್ಸ್ಯ 6000’ದ ಮೂಲಕ ಮೂವರು ತಜ್ಞರು ಕಡಲಾಳಕ್ಕೆ ತೆರಳಿ ಹಲವು ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.

ಮತ್ಸ್ಯ 6000 ಮೂಲಕ ಪಯಣ
ಮಾನವಸಹಿತ ಜಲಾಂತರ್ಗಾಮಿ ನೌಕೆಯ ಹೆಸರೇ “ಮತ್ಸ್ಯ 6000′. ಇಸ್ರೋ, ಐಐಟಿಎಂ, ಡಿಆರ್‌ಡಿಒ ಸೇರಿದಂತೆ ಹಲವು ಸಂಸ್ಥೆಗಳ ಸಹಾಯದಿಂದ ದೇಶೀಯವಾಗಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ.

ಇದು ಸಂಶೋಧನೆಗೆ ಹೇಗೆ ಸಹಾಯಮಾಡುತ್ತದೆ?
ಈ ನೌಕೆಯಲ್ಲಿ ಪ್ರಯಾಣಿಸುವ ವಿಜ್ಞಾನಿಗಳು ಈವರೆಗೆ ಅನ್ವೇಷಣೆ ಮಾಡದಂಥ ಆಳ-ಸಮುದ್ರವನ್ನು ಅವಲೋಕಿಸಿ, ಅದರ ಕುರಿತು ಅಧ್ಯಯನ ನಡೆಸಲಿದ್ದಾರೆ. ಒಂದು ಸಾವಿರದಿಂದ 5500 ಮೀಟರ್‌ ಆಳದಲ್ಲಿರುವ ಪಾಲಿಮೆಟಾಲಿಕ್‌ ಮ್ಯಾಂಗನೀಸ್‌ ನೊಡ್ನೂಲ್‌ಗ‌ಳು, ಗ್ಯಾಸ್‌ ಹೈಡ್ರೇಟ್‌ಗಳು, ಹೈಡ್ರೋ ಥರ್ಮಲ್‌ ಸಲ್ಫೈಡ್ ಗಳು ಮತ್ತು ಕೊಬಾಲ್ಟ್ ಕ್ರಸ್ಟ್‌ಗಳು ಮುಂತಾದ ಸಂಪನ್ಮೂಲಗಳ ಅಧ್ಯಯನವನ್ನೂ ಕೈಗೊಳ್ಳಲಿದ್ದಾರೆ.

ಉದ್ದೇಶವೇನು?
– ಸಮುದ್ರದಾಳದ ಜೀವಿಗಳು, ಜೀವವೈವಿಧ್ಯದ ಬಗ್ಗೆ ತಿಳಿಯುವುದು
– ಆಳ ಸಮುದ್ರ ಗಣಿಗಾರಿಕೆ, ಖನಿಜಾಂಶಗಳು ಸೇರಿದಂತೆ ಸಮುದ್ರದಾಳದಲ್ಲಿರುವ ಸಂಪನ್ಮೂಲಗಳ ಶೋಧನೆ
– ಸಮುದ್ರದಡಿಯಲ್ಲಿ ಕಳೆದುಹೋದ ವಸ್ತುಗಳ ಪತ್ತೆ
– ನೀರಿನಡಿಯಲ್ಲಿರುವ ಸಲಕರಣೆಗಳ ರಿಪೇರಿ ಮತ್ತು ನಿರ್ವಹಣೆ
– ಆಳ-ಸಮುದ್ರ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ

ಸಮುದ್ರಯಾನ
ಯೋಜನೆಯ ಅಂದಾಜು ವೆಚ್ಚ – 4,077 ಕೋಟಿ ರೂ.
ಯೋಜನೆಯ ಕಾಲಾವಧಿ – 5 ವರ್ಷಗಳು
ಸಮುದ್ರದ ಎಷ್ಟು ಆಳಕ್ಕೆ ವಿಜ್ಞಾನಿಗಳ ಸಂಚಾರ?- 6,000 ಮೀಟರ್‌
ಈವರೆಗೆ ಎಷ್ಟು ದೇಶಗಳು ಮಾನವಸಹಿತ ಜಲಾಂತರ್ಗಾಮಿಗಳನ್ನು ಕಳುಹಿಸಿದೆ?- 5

ಜಲಾಂತರ್ಗಾಮಿಯ ವೈಶಿಷ್ಟ್ಯ
ಎಷ್ಟು ಆಳಕ್ಕೆ ಸಂಚರಿಸಬಲ್ಲದು?- 6 ಕಿ.ಮೀ.
ಸಿಬ್ಬಂದಿ ಸಾಮರ್ಥ್ಯ – 3 (1 ಪೈಲಟ್‌, 2 ವಿಜ್ಞಾನಿಗಳು)
ಒಳಗಿರುವ ಸ್ಥಳಾವಕಾಶ- 5 ಕ್ಯೂಬಿಕ್‌ ಮೀಟರ್‌
ಎಷ್ಟು ಹೊತ್ತು ನೀರಿನಡಿ ಇರಬಲ್ಲದು?- 6-8 ಗಂಟೆಗಳು

ಟಾಪ್ ನ್ಯೂಸ್

7

BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

1-sulya

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Israel ವೈಮಾನಿಕ ದಾಳಿಗೆ 500 ಲೆಬನಾನ್‌ ಜನರು ಮೃತ್ಯು, ಹೆಜ್ಬುಲ್ಲಾ ಪ್ರತೀಕಾರದ ದಾಳಿ

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Samarjit Lankesh: ʼಗೌರಿʼ ಬಳಿಕ ಇಂದ್ರಜಿತ್‌ ಪುತ್ರನಿಗೆ ಬಾಲಿವುಡ್‌ನಿಂದ‌ ಬಿಗ್‌ ಆಫರ್

Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ

Yadgiri: ಸಿಡಿಲು ಬಡಿದು ನಾಲ್ವರು ಮೃತಪಟ್ಟ ಪ್ರಕರಣ… ಸಚಿವ ಶರಣಬಸಪ್ಪ ದರ್ಶನಾಪುರ ಸಾಂತ್ವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಆರೋಪ

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

nitin-gadkari

4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ

Vimana 2

Pune ವಿಮಾನ ನಿಲ್ದಾಣ ಇನ್ನು “ಸಂತ ತುಕಾರಾಮ್‌ ಏರ್‌ಪೋರ್ಟ್‌’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7

BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

1-sulya

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲಿಗೆ ಹೋದ ರೈಲ್ವೆ ಸಿಬ್ಬಂದಿಗಳು

ಇಲಾಖೆಯಿಂದ ಸನ್ಮಾನ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿ ಜೈಲು ಪಾಲಾದ ರೈಲ್ವೆ ಸಿಬ್ಬಂದಿಗಳು

1(5)

Puttur :ಸಾಲು ಮರದ ತಿಮ್ಮಕ್ಕ ಪಾರ್ಕ್‌ ಸಾಲು ಸಾಲು ಸಮಸ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.