ಮಗಳು ಸೆ*ಕ್ಸ್‌ ರ್‍ಯಾಕೆಟ್‌ ನಲ್ಲಿದ್ದಾಳೆಂದು ಸ್ಕ್ಯಾಮ್ ಕರೆ;‌ ಆತಂಕದಿಂದ ಅಸುನೀಗಿದ ತಾಯಿ!


Team Udayavani, Oct 4, 2024, 11:20 AM IST

Scam call that her daughter is in sx racket; mother passed away hearing that

ಆಗ್ರಾ: ಟೆಲಿಫೋನ್‌ ನಲ್ಲಿನ ವಂಚನೆಗಳು (Cyber Scam) ಹಲವಾರು ಜನರು ಆರ್ಥಿಕ ನಷ್ಟವನ್ನು ಅನುಭವಿಸಲು ಕಾರಣವಾಗಿವೆ, ಆದರೆ ಅಂತಹ ಒಂದು ಪ್ರಯತ್ನದ ವಂಚನೆಯ ಕಾರಣದಿಂದ ಮಹಿಳೆಯೊಬ್ಬರು ಜೀವ ಕಳೆದುಕೊಂಡ ಘಟನೆ ವರದಿಯಾಗಿದೆ.

ಕಳೆದ ಸೋಮವಾರ (ಸೆ.30) ಆಗ್ರಾದ (Agra) ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಮಾಲ್ತಿ ವರ್ಮಾ (58) ಅವರು ವಾಟ್ಸಾಪ್ ಕರೆಯೊಂದನ್ನು ಸ್ವೀಕರಿಸಿದ್ದಾರೆ. ಕರೆ ಮಾಡಿದಾತನ ವಾಟ್ಸಾಪ್‌ ಡಿಪಿಐಲ್ಲಿ ಪೊಲೀಸ್ ಅಧಿಕಾರಿಯ ಫೋಟೋ ಇತ್ತು. ತನ್ನ ಕಾಲೇಜಿಗೆ ಹೋಗುತ್ತಿರುವ ಮಗಳು ಸೆ*ಕ್ಸ್ ರ್‍ಯಾಕೆಟ್‌ ನಲ್ಲಿ ಸಿಕ್ಕಿಬಿದ್ದಿದ್ದಾಳೆ ಎಂದು ಕರೆ ಮಾಡಿದ ವ್ಯಕ್ತಿ ಶಿಕ್ಷಕಿಗೆ ಹೇಳಿದ್ದಾನೆ.

ವರ್ಮಾ ಅವರ ಮಗ ದೀಪಾಂಶು ಮಾತನಾಡಿ, ಮಧ್ಯಾಹ್ನದ ವೇಳೆಗೆ ಕರೆ ಬಂದಿದ್ದು, ಮಗಳು ಸುರಕ್ಷಿತವಾಗಿ ಮನೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು 1 ಲಕ್ಷ ರೂ. ನಿರ್ದಿಷ್ಟ ಖಾತೆಗೆ ಜಮಾ ಮಾಡುವಂತೆ ಆ ವ್ಯಕ್ತಿ ಕೇಳಿದ್ದಾನೆ ಮತ್ತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದ.

ತಮ್ಮ ಮಗಳು ಸೆಕ್ಸ್ ರ್‍ಯಾಕೆಟ್ ಸಂಬಂಧಿತ ಪ್ರಕರಣದಲ್ಲಿ ಸಿಲುಕಿದ್ದು, ಸಮಾಜಕ್ಕೆ ತಿಳಿದರೆ ಕುಟುಂಬದ ಮರ್ಯಾದೆ ಹೋಗುತ್ತದೆ, ಆದ ಕಾರಣ ತಾನು ಕರೆ ಮಾಡುತ್ತಿದ್ದೇನೆ ಎಂದು ಆ ವ್ಯಕ್ತಿ ಎಂಎಸ್ ವರ್ಮಾಗೆ ತಿಳಿಸಿದ್ದಾನೆ.

“ನನ್ನ ತಾಯಿ ಆಗ್ರಾದ ಅಚ್ನೇರಾದಲ್ಲಿರುವ ಸರ್ಕಾರಿ ಬಾಲಕಿಯರ ಜೂನಿಯರ್ ಹೈಸ್ಕೂಲ್‌ ನಲ್ಲಿ ಪಾಠ ಮಾಡುತ್ತಿದ್ದರು. ಆ ವ್ಯಕ್ತಿಯಿಂದ ಕರೆ ಬಂದ ನಂತರ ಅವರು ಗಾಬರಿಗೊಂಡು ನನಗೆ ಕರೆ ಮಾಡಿದರು ಮತ್ತು ಅವರು ಕರೆ ಸ್ವೀಕರಿಸಿದ ಸಂಖ್ಯೆಯನ್ನು ನಾನು ಕೇಳಿದೆ. ನಾನು ಸಂಖ್ಯೆಯನ್ನು ಪರಿಶೀಲಿಸಿದಾಗ , ಇದು +92 ಹೊಂದಿದೆ. ತಾಯಿ ಆತಂಕದಿಂದ ಅಸ್ವಸ್ಥಳಾಗಿದ್ದಳು” ಎಂದು ದೀಪಾಂಶು ಹೇಳಿದರು.

“ನಾನು ಆಕೆಯನ್ನು ಸಮಾಧಾನಪಡಿಸಿದೆ. ನಾನು ನನ್ನ ಸಹೋದರಿಯೊಂದಿಗೆ ಮಾತನಾಡಿದೆ, ಆಕೆ ಕಾಲೇಜಿನಲ್ಲಿ ಕ್ಷೇಮವಾಗಿದ್ದಳು. ಆದರೆ ನನ್ನ ತಾಯಿಯ ಆರೋಗ್ಯವು ಹದಗೆಡುತ್ತಲೇ ಇತ್ತು. ಶಾಲೆಯಿಂದ ಹಿಂತಿರುಗಿದಾಗ, ಸ್ವಲ್ಪ ನೋವು ಅನುಭವಿಸುತ್ತಿದ್ದಾಳೆ ಎಂದು ಹೇಳಿದರು. ಆದರೆ ಪರಿಸ್ಥಿತಿ ಹದಗೆಟ್ಟು ಆಕೆ ಅಸುನೀಗಿದರು”ಎಂದು ಪುತ್ರ ಹೇಳಿದರು.

ಕುಟುಂಬದವರು ಗುರುವಾರ ದೂರು ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಯಾಂಕ್ ತಿವಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Koppala: ಆದಷ್ಟು ಬೇಗ ಆರ್ಥಿಕ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

Koppala: ಆದಷ್ಟು ಬೇಗ ಆರ್ಥಿಕ- ಜಾತಿ ಗಣತಿ ವರದಿ ಜಾರಿಯಾಗಲಿ: ಬಸವರಾಜ ರಾಯರಡ್ಡಿ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

Delhi: ಬೃಹತ್ ಡ್ರಗ್ಸ್ ಜಾಲ-17 ವರ್ಷ ಬ್ರಿಟನ್‌ ನಲ್ಲಿದ್ದ ವ್ಯಕ್ತಿ ಪಂಜಾಬ್‌ ನಲ್ಲಿ ಬಂಧನ!

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

FIR: ಚನ್ನಪಟ್ಟಣ ಉಪಚುನಾವಣೆ ಖರ್ಚಿಗೆ ‘ಎಚ್‌ ಡಿಕೆ’ 50 ಕೋಟಿ ರೂ ಬೇಡಿಕೆ; ಉದ್ಯಮಿ ದೂರು

2-bng

Anekal: ನಗರದಲ್ಲಿ ಮತ್ತೆ ಮೂವರು ಪಾಕ್‌ ಪ್ರಜೆಗಳ ಬಂಧನ

1-munirathna

DNA Test: ಮುನಿರತ್ನಗೆ ಡಿಎನ್‌ಎ ಟೆಸ್ಟ್‌: ಎಸ್‌ಐಟಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tirupati Laddu case:ಇದು ಕೋಟ್ಯಂತರ ಭಕ್ತರ ನಂಬಿಕೆ ವಿಷಯ- SIT ತನಿಖೆಗೆ ಸುಪ್ರೀಂ ಆದೇಶ

Tirupati Laddu case:ಇದು ಕೋಟ್ಯಂತರ ಭಕ್ತರ ನಂಬಿಕೆ ವಿಷಯ- SIT ತನಿಖೆಗೆ ಸುಪ್ರೀಂ ಆದೇಶ

GST

GST;ನವೆಂಬರ್‌ನಿಂದ ಔಷಧ, ಆರೋಗ್ಯ ವಿಮೆ ಅಗ್ಗ?

1-treee

Google ಜತೆ ಬೆಂಗಳೂರಿನ ಕ್ಲೀನ್‌ಮ್ಯಾಕ್ಸ್‌ ಸಹಯೋಗ: ಪವನ ವಿದ್ಯುತ್‌ ಉತ್ಪಾದನೆ

train-track

Railway; 5 ವರ್ಷದಲ್ಲಿ 200 ರೈಲು ಅಪಘಾ*ತಗಳು, 351 ಮಂದಿ ಸಾ*ವು: ವರದಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

Supreme Court: ಜೈಲುಗಳಲ್ಲಿ ಜಾತಿ ತಾರತಮ್ಯ ನಿಲ್ಲಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Manipal Hospital has set a new Guinness World Record by performing 3,319 CPRs in just 24 hours!

24 ಗಂಟೆಗಳಲ್ಲಿ 3,319 ಸಿಪಿಆರ್; ಗಿನ್ನೆಸ್ ವಿಶ್ವ ದಾಖಲೆ ಬರೆದ ಮಣಿಪಾಲ್‌ ಆಸ್ಪತ್ರೆ

5

Anandapura ಗ್ರಾಮ ಪಂಚಾಯತ್ ಗಳ ಸೇವೆ ಸಂಪೂರ್ಣ ಬಂದ್

4(1)

Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

7-bng

Bengaluru ನಗರದಲ್ಲಿ ಸಂಭ್ರಮದ ನವರಾತ್ರಿ, ವಿಶೇಷ ಪೂಜೆ

3

Bantwala ಬೈಪಾಸ್‌ ಜಂಕ್ಷನ್‌ ಅವ್ಯವಸ್ಥೆ; ಹೆಚ್ಚುತ್ತಿರುವ ಅಪಘಾತ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.