ಸೆಲ್ವಂಗೆ “ಮಾಡು ಇಲ್ಲವೇ ಮಡಿ’


Team Udayavani, Feb 17, 2017, 3:45 AM IST

PTI2_16_2017_000251B.jpg

ಚೆನ್ನೈ: ತಮಿಳುನಾಡಿನಲ್ಲಿ 10 ದಿನಗಳ ಕಾಲ ನಡೆದ ರಾಜಕೀಯ ನಾಟಕವು ಒಂದು ಹಂತಕ್ಕೆ ಅಂತ್ಯ ಕಂಡಿದೆ. ಆದರೆ, ಇದು ಜಯಲಲಿತಾರ ಆಪ್ತ ಹಾಗೂ ವಿಧೇಯ ಬಂಟನೆಂದೇ ಕರೆಸಿಕೊಂಡಿದ್ದ ಒ ಪನ್ನೀರ್‌ಸೆಲ್ವಂ ಅವರ ರಾಜಕೀಯ ಭವಿಷ್ಯವನ್ನೂ ಸಮಾಪ್ತಿಗೊಳಿಸಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ. 

ದಿಢೀರ್‌ ಬೆಳವಣಿಗೆಯೆಂಬಂತೆ, ಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡೆದ್ದರೂ ಸಾಕಷ್ಟು ಶಾಸಕರ ಬೆಂಬಲ ಸಿಗದ ಕಾರಣ ಸಿಎಂ ಆಗಬೇಕೆಂಬ ಅವರ ಕನಸು ಈಡೇರಲಿಲ್ಲ. 10-12 ಮಂದಿ ಶಾಸಕರಷ್ಟೇ ಅವರ ಬೆನ್ನಿಗೆ ನಿಂತಿದ್ದರಿಂದ, ಪನ್ನೀರ್‌ ಕೊನೆಗೂ ಸೋಲೊಪ್ಪಿಕೊಳ್ಳಬೇಕಾಯಿತು. ಒಟ್ಟಿನಲ್ಲಿ ಈ ಬೆಳವಣಿಗೆಯು ಪನ್ನೀರ್‌ಸೆಲ್ವಂರನ್ನು ರಾಜಕೀಯ ನೇಪಥ್ಯಕ್ಕೆ ಸರಿಯುವಂತೆ ಮಾಡಿದವೇ ಎಂಬ ಮಾತುಗಳು ಕೇಳಿಬರತೊಡಗಿವೆ.

ಆರಂಭದಲ್ಲಿ ಪನ್ನೀರ್‌ಸೆಲ್ವಂ ಅವರಿಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಹೇಳಲಾಗುತ್ತಿತ್ತು. ಕೇಂದ್ರದ ಬೆಂಬಲದಿಂದಲೇ ಅವರು ಶಶಿಕಲಾ ವಿರುದ್ಧ ಬಂಡೇಳಲು ಸಾಧ್ಯವಾಯಿತು ಎಂದೂ ಸುದ್ದಿಯಾದವು. ಬಿಜೆಪಿಗೆ ರಾಷ್ಟ್ರಪತಿ, ರಾಜ್ಯಸಭೆ ಚುನಾವಣೆ ವೇಳೆ ಎಐಎಡಿಎಂಕೆಯ ಬೆಂಬಲ ಅಗತ್ಯವಿದ್ದ ಕಾರಣ, ಸೆಲ್ವಂರನ್ನು ಶಶಿಕಲಾ ವಿರುದ್ಧ ಎತ್ತಿಕಟ್ಟುವುದು ಹಾಗೂ ರಾಜ್ಯ ರಾಜಕೀಯಕ್ಕೆ ಪ್ರವೇಶಿಸುವುದು ಬಿಜೆಪಿ ಉದ್ದೇಶವಾಗಿತ್ತು. ಆದರೆ, ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಬೀಳಿಸುವ ಬಿಜೆಪಿಯ ಯತ್ನ ಫ‌ಲಿಸಲಿಲ್ಲ. ಹೀಗಾಗಿ, ಇದೀಗ ಸೆಲ್ವಂರನ್ನು ಬಿಜೆಪಿ ಕೂಡ ದೂರ ಇಡುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಇದು ಹೌದೆಂದಾದರೆ, ಸೆಲ್ವಂ ರಾಜಕೀಯ ಭವಿಷ್ಯ ಖತಂ ಆದಂತೆಯೇ ಸರಿ. 

ಸೆಲ್ವಂ ಘರ್‌ವಾಪ್ಸಿ?: ಇಂತಹ ಸಂದರ್ಭದಲ್ಲಿ ಸೆಲ್ವಂಗಿರುವ ಏಕೈಕ ದಾರಿಯೆಂದರೆ, ಘರ್‌ ವಾಪ್ಸಿ. ಹೌದು. ಮತ್ತೆ ಎಐಎಡಿಎಂಕೆಯ ವಿಧೇಯ ನಾಯಕನಾಗಿ ಮುಂದುವರಿದರೆ ಸೆಲ್ವಂಗೆ ರಾಜಕೀಯದಲ್ಲಿ ಮುಂದುವರಿಯುವ ಅವಕಾಶ ದೊರೆಯಬಹುದು. ಪನ್ನೀರ್‌ಸೆಲ್ವಂ ಘರ್‌ವಾಪ್ಸಿ ಆಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತದೆ ಪಕ್ಷದ ಮೂಲಗಳು. ಸೆಲ್ವಂ ಅವರೊಂದಿಗೆ ಹಿಂಬಾಗಿಲ ಮಾತುಕತೆ ನಡೆಯುತ್ತಿದ್ದು, ಒಗ್ಗಟ್ಟು ಕಾಯ್ದುಕೊಳ್ಳಲು ಯತ್ನಿಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸಂಧಾನ ಮಾತುಕತೆಯ ನೇತೃತ್ವವನ್ನು ಶಶಿಕಲಾ ಸಂಬಂಧಿ ದಿನಕರನ್‌ ವಹಿಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಭುತ್ವದ ಗಾಳಿ?: ಒಂದು ಕಾಲದಲ್ಲಿ “ಅಮ್ಮ’ನ ರಾಜ್ಯಭಾರವಿದ್ದಾಗ ತಮಿಳುನಾಡಲ್ಲಿ ಏನು ನಡೆದರೂ, ಎಂಥ ವಿದ್ಯಮಾನಗಳಾದರೂ ಯಾರೂ ತುಟಿಪಿಟಿಕ್ಕೆನ್ನುತ್ತಿರಲಿಲ್ಲ.ಆದರೆ, ಇದೀಗ ನೆರೆರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಪ್ರಜಾಪ್ರಭುತ್ವದ ಗಾಳಿ ಬೀಸುತ್ತಿರುವುದು ಗೋಚರಿಸುತ್ತಿದೆ. ಜಯಾ ನಿರ್ಗಮನದ ಬಳಿಕ ಒಬ್ಬೊಬ್ಬರಾಗಿಯೇ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಇತ್ತೀಚೆಗಿನ ಬೆಳವಣಿಗೆಗಳಿಗೆ ಕಮಲ್‌ ಹಾಸನ್‌, ಪ್ರಕಾಶ್‌ ರೈ, ಆರ್ಯ, ಎಸ್‌ ವೈ ಶೇಖರ್‌, ಮನ್ಸೂರ್‌ ಅಲಿ ಖಾನ್‌ ಪ್ರತಿಕ್ರಿಯೆಯೇ ನಿದರ್ಶನ.

ಸ್ಮಾರಕಕ್ಕೆ ಹೈ ಅಡ್ಡಿ: ಜಯಾ ಅವರ ಪೋಯೆಸ್‌ ಗಾರ್ಡನ್‌ ನಿವಾಸವನ್ನು ಸ್ಮಾರಕವನ್ನಾಗಿ ಬದಲಾಯಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ಜತೆಗೆ, ಶಶಿಕಲಾ ಅವರು ಶಾಸಕರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನೂ ತಳ್ಳಿಹಾಕಿದೆ.

ಎಐಎಡಿಎಂಕೆ ಹೋಳಾಗುತ್ತಾ?
ಹೊಸ ಬಣಕ್ಕೆ ಕನಿಷ್ಠ ಮೂರನೇ ಎರಡರಷ್ಟು ಶಾಸಕರ ಬೆಂಬಲವಿದ್ದರಷ್ಟೇ ಪಕ್ಷದಿಂದ ಹೊರಗೆ ಬರಬಹುದು ಎಂದು ಚುನಾಯಿತ ಶಾಸಕರ ಕಾನೂನು ಹೇಳುತ್ತದೆ. ಪನ್ನೀರ್‌ಸೆಲ್ವಂ ವಿಚಾರಕ್ಕೆ ಬಂದರೆ, ಅವರು ಎಐಎಡಿಎಂಕೆಯನ್ನು ಒಡೆದು ಹೊರಬರಬೇಕೆಂದರೆ, ಕನಿಷ್ಠ 100 ಶಾಸಕರ ಬೆಂಬಲವಾದರೂ ಬೇಕು. ಆದರೆ, ಅವರ ಬಳಿ ಇರುವುದು 12ರಷ್ಟು ಶಾಸಕರಷ್ಟೆ. ಹೀಗಾಗಿ, ಎಐಎಡಿಎಂಕೆ ಹೋಳಾಗುವ ಸಾಧ್ಯತೆ ಇಲ್ಲ. ಇನ್ನು ಪನ್ನೀರ್‌ಸೆಲ್ವಂರನ್ನು ಪಕ್ಷದಿಂದ ವಜಾ ಮಾಡಿದ್ದರೂ, ಅವರು ಪಕ್ಷದ ನಿಯಂತ್ರಣದಲ್ಲೇ ಇರುತ್ತಾರೆ. ಒಂದು ವೇಳೆ, ಅವರು ಬೇರೆ ಪಕ್ಷಕ್ಕೆ ಸೇರಿದರೆ ಅಥವಾ ಪಕ್ಷದ ವಿಪ್‌ ಉಲ್ಲಂ ಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್‌ಗಿರುತ್ತದೆ. ವಿಧಾನಸಭೆ ಬಹುಮತ ಸಾಬೀತಿನ ವೇಳೆ ಪಳನಿಸ್ವಾಮಿಗೆ ಬೆಂಬಲ ಸೂಚಿಸಬೇಕು ಎಂಬ ಎಐಎಡಿಎಂಕೆಯ ವಿಪ್‌ ಅನ್ನು ಸೆಲ್ವಂ ಮತ್ತು ಅವರ ಬಣ ಉಲ್ಲಂ ಸಿದ್ದೇ ಆದಲ್ಲಿ, ಅವರನ್ನು ಅಸೆಂಬ್ಲಿಯಿಂದಲೇ ಉಚ್ಚಾಟನೆ ಮಾಡಬಹುದಾಗಿದೆ. ಹೀಗಾಗಿ, ಅವರು ಹೊಸ ಹೈಕಮಾಂಡ್‌ನ‌ ಸೂಚನೆ ಪಾಲಿಸಲೇಬೇಕಾಗುತ್ತದೆ.

ರಜನಿ ಮೂಲಕ ಎಂಟ್ರಿ ಕೊಡುತ್ತಾ ಬಿಜೆಪಿ?
ಪನ್ನೀರ್‌ಸೆಲ್ವಂ ಅವರು ಶಶಿಕಲಾ ಬಣದಿಂದ ಬೇರ್ಪಟ್ಟು, ಬಂಡಾಯದ ರಣಕಹಳೆ ಮೊಳಗಿಸಿದ್ದರ ಹಿಂದೆ ಬಿಜೆಪಿಯ ಬೆಂಬಲವಿತ್ತು ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಬಿಜೆಪಿಯು ಇದೀಗ ನಟ ರಜನಿಕಾಂತ್‌ ಮೂಲಕ ರಾಜ್ಯದಲ್ಲಿ ನೆಲೆಯೂರಲು ಯತ್ನಿಸುತ್ತಿದೆೆ. ಹೊಸ ಪಕ್ಷ ಸ್ಥಾಪಿಸುವಂತೆ ಬಿಜೆಪಿಯು ರಜನಿಕಾಂತ್‌ರ ಮನವೊಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರಶ್ನಿಸಿದಾಗ, ಅದನ್ನು ನಿರಾಕರಿಸದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, “ಏನೇನಾಗುತ್ತೆ ಎಂಬುದನ್ನು ಕಾದು ನೋಡಿ’ ಎಂದಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.