![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 7, 2020, 5:52 PM IST
ಮುಂಬೈ: ಈತ ಮಾರಾಟ ಮಾಡುತ್ತಿದ್ದ ಪಾನಿಪೂರಿಗೆ ಜನರು ಮುಗಿಬೀಳುತ್ತಿದ್ದರು. ಜನರು ಗುಂಪು, ಗುಂಪು ಸೇರಿ ಪಾನಿಪೂರಿಗಾಗಿ ಕಾಯುತ್ತಿದ್ದರು. ಬೀದಿ ಬದಿಯ ಬಾಯಿಯಲ್ಲಿ ನೀರುಣಿಸುವ ಪುಟ್ಟ ಸುದ್ದಿ ಕೂಡಾ ಈಗ ವೈರಲ್ ಆಗುತ್ತದೆ. ಆದರೆ ಪಾನಿಪೂರಿಯಿಂದ ಜನಪ್ರಿಯನಾಗಿದ್ದ ವ್ಯಕ್ತಿಯ ಅಸಲಿ ಬಣ್ಣ ತಿಳಿಯುತ್ತಿದ್ದಂತೆಯೇ ಆತನ ತಳ್ಳುಗಾಡಿಯನ್ನು ಪುಡಿಗೈದ ಘಟನೆ ಕೊಲ್ಹಾಪುರದಲ್ಲಿ ನಡೆದಿದೆ.
ನಿಜಕ್ಕೂ ನಡೆದಿದ್ದೇನು?
ಪಾನಿಪುರಿಯಿಂದಾಗಿ ಈ ವ್ಯಕ್ತಿ ತುಂಬಾ ಜನಪ್ರಿಯನಾಗಿದ್ದ. ಈ ಪಾನಿಪೂರಿ ಅಂಗಡಿ ಕೊಲ್ಹಾಪುರದ ರಂಕಾಲಾ ಲೇಕ್ ಸಮೀಪ ಇದ್ದು, ಈ ತಳ್ಳುವ ಗಾಡಿಗೆ “ಮುಂಬೈ ಕೆ ಸ್ಪೆಷಲ್ ಪಾನಿಪೂರಿ ವಾಲಾ” ಎಂದು ಹೆಸರಿಡಲಾಗಿತ್ತು!
ಈ ಸ್ಥಳ ಯಾವಾಗಲೂ ಜನರು ಸರದಿ ಸಾಲಿನಲ್ಲಿ ನಿಂತಿರುತ್ತಿದ್ದರು. ಅದಕ್ಕೆ ಕಾರಣ ರುಚಿಯಾದ ಪಾನಿಪೂರಿ ತಯಾರಿಸಿ ಕೊಡುತ್ತಿದ್ದ ಎಂಬುದು.! ಆದರೆ ಈತ ಟಾಯ್ಲೆಟ್ ನೀರನ್ನು ತೆಗೆದು ಕ್ಯಾನ್ ಗೆ ತುಂಬಿಸಿ ಅದನ್ನು ಪಾನಿಪೂರಿಗೆ ಮಿಶ್ರಣ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದೇ ತಡ, ಪಾನಿಪೂರಿವಾಲಾನ ಅಸಲಿ ಬಣ್ಣ ಬಯಲಾಗಿಬಿಟ್ಟಿತ್ತು.
ಇದನ್ನೂ ಓದಿ:ಠಾಣೆಯಲ್ಲಿ ಸತ್ಯ ಪರೀಕ್ಷೆ! ಹಸುವಿನ ನಿಜವಾದ ಮಾಲೀಕರು ಯಾರು, ಪೊಲೀಸರಿಗೆ ಗೊಂದಲ
ವಿಷಯ ತಿಳಿದು, ದಿನಂಪ್ರತಿ ಬಂದು ಬಾಯಿಚಪ್ಪರಿಸಿಕೊಂಡು ತಿಂದವರಿಗೆ ಸಿಟ್ಟು ನೆತ್ತಿಗೇರಿದ ಪರಿಣಾಮ ಗುಂಪಾಗಿ ಬಂದು, ಆತನ ಪಾನಿಪೂರಿ ಗಾಡಿಯನ್ನು ಒಡೆದು ಧ್ವಂಸ ಮಾಡಿ ರಸ್ತೆಗೆ ಎಸೆದು, ಪಾನಿಪೂರಿವಾಲಾನಿಗೆ ಹಿಗ್ಗಾಮುಗ್ಗಾ ಹೊಡೆದಿರುವುದಾಗಿ ವರದಿ ತಿಳಿಸಿದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.