![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 15, 2022, 3:06 PM IST
ಮುಂಬಯಿ : ದೆಹಲಿಯಲ್ಲಿ ಸಂಚಲನ ಮೂಡಿಸಿದ ಶ್ರದ್ದಾ ಹತ್ಯೆ ಪ್ರಕರಣ ಹಿಂದೆ ಒಂದರ ಹಿಂದೆ ಒಂದರಂತೆ ಭಯಾನಕ ವಿಚಾರಗಳು ಬೆಳಕಿಗೆ ಬರುತ್ತಿವೆ.
ಇದೆಲ್ಲದರ ನಡುವೆ ತನ್ನ ಮಗಳನ್ನು ಕಳೆದುಕೊಂಡ ತಂದೆ ದುಖ್ಖದ ಮಡುವಿನಲ್ಲಿ ಮರುಗುತಿದ್ದಾರೆ, ಶ್ರದ್ದಾ ಹಾಗೂ ಅಫ್ತಾಬ್ ಅಮೀನ್ ಪೂನಾವಾಲ ಪ್ರೀತಿಸುವ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಶ್ರದ್ದಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು, ಆದರೆ ಶ್ರದ್ದಾ ಪೋಷಕರ ಮಾತನ್ನು ಕೇಳುವ ಹಂತದಲ್ಲಿ ಇರಲಿಲ್ಲ ಯಾಕೆಂದರೆ ಆಕೆಯೂ ಅಫ್ತಾಬ್ ನನ್ನ ಮನಸಾರೆ ಇಷ್ಟಪಡುತ್ತಿದ್ದಳು.
ಪೋಷಕರ ವಿರೋಧದ ನಡುವೆಯೂ ಮುಂಬಯಿಯಲ್ಲಿದ್ದ ಜೋಡಿ ಪೋಷಕರ ಕಣ್ಣು ತಪ್ಪಿಸಿ ದೆಹಲಿಗೆ ಓಡಿಹೋಗಿದ್ದರು, ಆದರೆ ಈ ವಿಚಾರ ಮಾತ್ರ ಮನೆಯವರಿಗೆ ಗೊತ್ತೇ ಇರಲಿಲ್ಲ ಮನೆಯವರೊಂದಿಗೆ ಫೋನ್ ಕರೆಗಳನ್ನು ಮಾತ್ರ ಮಾಡುತ್ತಿದ್ದ ಶ್ರದ್ದಾ ಮನೆಯವರಿಗೆ ತಾನು ದೆಹಲಿಗೆ ಬಂದಿರುವ ವಿಚಾರವನ್ನು ಮುಚ್ಚಿಟ್ಟಿದ್ದರು.
ಆದರೆ ವಿಧಿಯಾಟ ಬೇರೆಯೇ ಆಗಿತ್ತು ನೋಡಿ ಮುಂಬೈನಿಂದ ದೆಹಲಿಗೆ ತೆರಳಿ ಅಲ್ಲಿ ಫ್ಲ್ಯಾಟ್ ವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿ, ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಅಫ್ತಾಫ್ ಶ್ರದ್ಧಾಳನ್ನು ಕೊಚ್ಚಿ ಕೊಲೆಗೈದ ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು 18 ದಿನಗಳ ಕಾಲ ಒಂದೊಂದು ಭಾಗವನ್ನು ಬೇರೆ, ಬೇರೆ ಸ್ಥಳಗಳಲ್ಲಿ ಎಸೆದು ಬಂದಿದ್ದ. ಈ ನಡುವೆ ಬೇರೆ ಯುವತಿಯನ್ನು ತಾನು ಇದ್ದ ಫ್ಲಾಟ್ ಗೆ ಕರೆದುಕೊಂಡು ಬರುತ್ತಿದ್ದನಂತೆ. ಕೊನೆಗೂ ಶ್ರದ್ದಾ ಹತ್ಯೆಯಾಗಿರುವ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಗಳ ಹತ್ಯೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶ್ರದ್ಧಾಳ ತಂದೆ ಅಂದು ನನ್ನ ಮಾತು ಕೇಳಿ ಶ್ರದ್ದಾ ಅಫ್ತಾಬ್ ನ ಪ್ರೀತಿಯ ಜಾಲದಿಂದ ಹೊರಬರುತಿದ್ದರೆ ಇಷ್ಟು ಹೊತ್ತಿಗೆ ನನ್ನ ಮಗಳು ಒಳ್ಳೆಯ ಜೀವನ ನಡೆಸುತ್ತಿದ್ದಳು ಎಂದು ಕಣ್ಣೀರು ಹಾಕಿದ್ದಾರೆ. ಇಬ್ಬರ ಪ್ರೀತಿಯ ವಿಚಾರ ಗೊತ್ತಾಗುತ್ತಿದಂತೆ ಮಗಳನ್ನು ಆ ವಿಚಾರದಲ್ಲಿ ದೂರ ಇರು, ಇದಕ್ಕೆ ನಮ್ಮ ಒಪ್ಪಿಗೆ ಇಲ್ಲವೆಂದು ಅವತ್ತೇ ಹೇಳಿದ್ದೆವು ಆದರೆ ಮಗಳು ಮಾತ್ರ ನಮ್ಮ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದೆ ತನ್ನ ಜೀವವನ್ನೇ ತೆಗೆದುಕೊಂಡಿದ್ದಾಳೆ, ಎಂದು ಮಮ್ಮಲ ಮರುಗಿದ್ದಾರೆ, ನನ್ನ ಮಗಳನ್ನು ಹತ್ಯೆ ಮಾಡಿದ ಪಾಪಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಾಂತಾರ ಸಿನಿಮಾ ಪ್ರಭಾವ!…ಪಂಜುರ್ಲಿ ದೈವದ ವೇಷದಲ್ಲಿ ಕಾರ್ಯಕ್ರಮಕ್ಕೆ ಬಂದ ತಹಸೀಲ್ದಾರ್
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.