![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 27, 2023, 7:23 AM IST
ಹೊಸದಿಲ್ಲಿ: ಇತ್ತೀಚೆಗೆ ಅಮೆರಿಕದಲ್ಲಿ ಚೀನದ ಬೇಹು ಬಲೂನ್ಗಳನ್ನು ಹೊಡೆದುರುಳಿಸಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಸಂಘರ್ಷದ ಘಟನೆ ಎರಡೂ ದೇಶಗಳ ನಡುವೆ ಉದ್ಭವಿಸಿದೆ.
ಅಮೆರಿಕ ನೌಕಾಪಡೆಯ ಯುದ್ಧ ವಿಮಾನವೊಂದು ಶುಕ್ರವಾರ ದಕ್ಷಿಣ ಚೀನ ಸಮುದ್ರದ ಬಳಿ ಹಾರಾಡಿದೆ. ಚೀನ ಯುದ್ಧನೆಲೆಯಾಗಿರುವ ಪ್ಯಾರಾಸೆಲ್ ದ್ವೀಪದಿಂದ ಕೇವಲ 30 ಮೈಲು ಅಂತರದಲ್ಲಿ ಹಾರಾಟ ನಡೆಸಿದೆ. ಇದರಿಂದ ಒಮ್ಮೆಲೇ ಕೆರಳಿದ ಚೀನ ಸೇನೆ, ಕ್ಷಿಪಣಿಸಜ್ಜಿತ ಯುದ್ಧ ವಿಮಾನದೊಂದಿಗೆ ಆಗಸಕ್ಕೆ ಚಿಮ್ಮಿದೆ.
ಅಲ್ಲದೇ ಅಮೆರಿಕ ವಿಮಾನಕ್ಕೆ ಸಂದೇಶವನ್ನು ಕಳಿಸಿ, ನೀವೀಗ ಚೀನ ವಾಯು ಸರಹದ್ದಿಗೆ ಕೇವಲ 12 ನಾಟಿಕಲ್ ಮೈಲುಗಳು ಹತ್ತಿರದಲ್ಲಿದ್ದೀರಿ. ಇನ್ನೂ ಮುಂದುವರಿದರೆ ಎಲ್ಲ ಅಪಾಯಗಳ ಹೊಣೆಯನ್ನು ನೀವೇ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ. ತತ್ಕ್ಷಣ ಅಮೆರಿಕ ವಿಮಾನ, ನಾನು ಪಶ್ಚಿಮದ ಕಡೆಗೆ ಹೋಗುತ್ತಿದ್ದೇನೆ ಎಂದು ಸಂದೇಶ ಕಳಿಸಿತು. ಮುಂದಿನ 15 ನಿಮಿಷ ಚೀನ ವಿಮಾನ ಅಮೆರಿಕ ವಿಮಾವನ್ನು ಹಿಂಬಾಲಿಸಿ, ಅನಂತರ ಸ್ವಸ್ಥಾನಕ್ಕೆ ಮರಳಿತು.
ಕೆಲವೇ ನಿಮಿಷಗಳಲ್ಲಿ ಚೀನದ ಯುದ್ಧನೌಕೆ ಯೊಂದಿಗೂ ಇಂತಹದ್ದೇ ಪರಿಸ್ಥಿತಿ ಎದುರಾ ಯಿತು. ವಸ್ತುಸ್ಥಿತಿಯಲ್ಲಿ ಅಮೆರಿಕದ ಯುದ್ಧ ವಿಮಾ ನಗಳು ಅಂತಾರಾಷ್ಟ್ರೀಯ ಕಾನೂನಿಗೆ ಪೂರಕವಾಗಿ ಹೀಗೆ ಸಂಚಾರ ನಡೆಸುತ್ತವೆ. ಆದರೆ ಚೀನ ಮಾತ್ರ ದ.ಚೀನ ಸಮುದ್ರ ಪ್ರದೇಶವನ್ನು ಅಮೆರಿಕ ಪ್ರವೇಶಿಸಿದ್ದು ಅಪಾಯ, ಸಂಘರ್ಷದ ಸಂಕೇತ ಎಂದೇ ಭಾವಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.