![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Nov 9, 2019, 7:10 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚೆನ್ನೈ: ಶಬರಿಮಲೆ ಯಾತ್ರೆಗೆ ಸಜ್ಜಾಗಿರುವ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ಚೆನ್ನೈನಿಂದ ವಿಶೇಷ ರೈಲುಗಳನ್ನು ಪರಿಚಯಿಸಿದೆ. ಚೆನ್ನೈ- ತಿರುವನಂತಪುರಂ ಮತ್ತು ಚೆನ್ನೈ-ಕೊಲ್ಲಂ ನಡುವೆ ನವೆಂಬರ್ ಮಧ್ಯದಿಂದ ಡಿಸೆಂಬರ್ ಆರಂಭದವರೆಗೆ ಸಂಚರಿಸಲಿವೆ.
ದಕ್ಷಿಣ ರೈಲ್ವೆಯು ಚೆನ್ನೈ ಮತ್ತು ತಿರುವನಂತಪುರಂ ನಡುವೆ ಎರಡು ವಿಶೇಷ ರೈಲು ಓಡಿಸಲಿದೆ. ಈ ರೈಲುಗಳು ನ.21 ಮತ್ತು 28 ರಂದು ಸಂಜೆ 7 ಗಂಟೆಗೆ ಚೆನ್ನೈ ಸೆಂಟ್ರಲ್ನಿಂದ ಹೊರಡಲಿದ್ದು, ನ.22 ಮತ್ತು 29ರಂದು ಬೆಳಗ್ಗೆ 11.45ಕ್ಕೆ ತಿರುವನಂತಪುರ ತಲುಪಲಿವೆ. ವಿಶೇಷ ರೈಲುಗಳು ಅರಕ್ಕೋಣಂ, ಕಟ್ಪಾಡಿ, ಜೋಲಾರ್ಪೇಟ್, ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡ್ನಲ್ಲಿ ನಿಲುಗಡೆ ಮಾಡಲಿವೆ.
ಇನ್ನು ತಿರುವನಂತಪುರದಿಂದ ನ.20, 27ರಂದು ಮಧ್ಯಾಹ್ನ 3.45ಕ್ಕೆ ಹೊರಟು, ಕ್ರಮವಾಗಿ 21, 28ರಂದು ಬೆ.9.45ಕ್ಕೆ ಚೆನ್ನೈಸೆಂಟ್ರಲ್ ತಲುಪಲಿವೆ.
ಮೂರು ರೈಲು: ಚೆನ್ನೈ ಮತ್ತು ಕೊಲ್ಲಂ ನಡುವೆ 3 ವಿಶೇಷ ರೈಲು ಸಂಚರಿಸಲಿವೆ. ನ.15, 22 ಮತ್ತು 29ರಂದು ರಾತ್ರಿ 8.30ಕ್ಕೆ ಚೆನ್ನೈ ಸೆಂಟ್ರಲ್ನಿಂದ ಹೊರಟು, ಕ್ರಮವಾಗಿ 16, 23, 30ರಂದು ಮ. 12 ಗಂಟೆಗೆ ಕೊಲ್ಲಂ ತಲುಪಲಿವೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.