![BY-Vijayendra](https://www.udayavani.com/wp-content/uploads/2024/12/BY-Vijayendra-1-415x249.jpg)
ಹಾಲು ಮಾರಾಟದಿಂದ ಸಿಎಂ ಹುದ್ದೆಯವರೆಗೆ.. ಸುಖ್ವಿಂದರ್ ಸಿಂಗ್ ಸುಖು ಎಂಬ ಫೈರ್ ಬ್ರ್ಯಾಂಡ್
Team Udayavani, Dec 11, 2022, 9:32 AM IST
![sukhwinder singh sukhu](https://www.udayavani.com/wp-content/uploads/2022/12/sukgu-620x342.jpg)
ಶಿಮ್ಲಾ: ನಲವತ್ತು ವರ್ಷಗಳಿಂದಲೂ ಪಕ್ಷಕ್ಕೆ ನಿಷ್ಠರಾಗಿ ದುಡಿಯುತ್ತಾ, ಕಾಂಗ್ರೆಸ್ ನ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸುಖ್ವಿಂದರ್ ಸಿಂಗ್ ಸುಖು(58) ಈಗ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
2003ರಿಂದಲೂ ಅವರು ನದೌನ್ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿರುವ ಅವರು, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಟೀಕಾಕಾರನೆಂದೇ ಗುರುತಿಸಿಕೊಂಡವರು.
ಸಿಎಂ ಹುದ್ದೆಯ ಪೈಪೋಟಿಯಲ್ಲಿದ್ದ ಪ್ರತಿಭಾ ಸಿಂಗ್ ಹಾಗೂ ಮುಕೇಶ್ ಅಗ್ನಿಹೋತ್ರಿ ಅವರು ದಿವಂಗತ “ರಾಜಾ’ ವೀರಭದ್ರ ಸಿಂಗ್ ಅವರ ನೆರಳಲ್ಲೇ ರಾಜಕೀಯಕ್ಕೆ ಪ್ರವೇಶ ಪಡೆದವರು. ಆದರೆ, ಸುಖ್ವಿಂದರ್ ಅವರು ಸ್ವಸಾಮರ್ಥ್ಯ ದಿಂದಲೇ ಬೆಳೆದವರು. ಒಂದು ಕಾಲದಲ್ಲಿ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸುಖು, ಎನ್ಎಸ್ಯುಐಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ನಾಯಕನಾಗಿ, ನಂತರ ಪಾಲಿಕೆ ಚುನಾವಣೆಯಲ್ಲಿ ಗೆದ್ದು, ರಾಜ್ಯ ರಾಜಕೀಯ ಪ್ರವೇಶಿಸಿದ ಅವರು, ಹಿಮಾಚಲದಲ್ಲಿ ಪಕ್ಷದ ಎಲ್ಲ ಹಂತಗಳಲ್ಲೂ ಅನುಭವ ಗಳಿಸುತ್ತಾ ಬಂದವರು.
ಇದನ್ನೂ ಓದಿ:ಸೋತ ಪೋರ್ಚುಗಲ್..; ಕಣ್ಣೀರಿಡುತ್ತಲೇ ಮೈದಾನ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ
ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅವರಿಗೆ “ಫೈರ್ಬ್ರ್ಯಾಂಡ್’ ಎಂಬ ಹೆಸರಿತ್ತು. ಪಕ್ಷದ ಕಾರ್ಯಕರ್ತರ ಮೇಲಿನ ಹಿಡಿತ, ಸ್ಥಳೀಯರೊಂದಿಗಿನ ಅವರ ಆತ್ಮೀಯ ನಂಟಿನಿಂದಾಗಿಯೇ ಹಮೀರ್ಪುರದ 5 ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಏಕೆಂದರೆ, ಇದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಪ್ರಭಾವವಿರುವ ಬಿಜೆಪಿಯ ಭದ್ರಕೋಟೆ. ಹೀಗಿದ್ದರೂ, ತಮ್ಮ ಸಂಘಟನಾ ಸಾಮರ್ಥ್ಯದಿಂದಾಗಿ ಸುಖು ಅವರು ಎಲ್ಲ “ಅಲೆ’ಗಳನ್ನೂ ದಾಟಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಿಎಂ ಸ್ಥಾನಕ್ಕೆ ಸುಖ್ರನ್ನು ಆಯ್ಕೆ ಮಾಡುವ ಮೂಲಕ ಬೇರುಮಟ್ಟದ ಕಾರ್ಯಕರ್ತರಿಗೂ ಉನ್ನತ ಹುದ್ದೆ ನೀಡಲಾಗುತ್ತದೆ ಎಂಬ ಸಂದೇಶವನ್ನು ರಾಹುಲ್ ಗಾಂಧಿ ರವಾನಿಸಿದ್ದಾರೆ.
ಟಾಪ್ ನ್ಯೂಸ್
![BY-Vijayendra](https://www.udayavani.com/wp-content/uploads/2024/12/BY-Vijayendra-1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-deee](https://www.udayavani.com/wp-content/uploads/2024/12/1-deee-2-150x86.jpg)
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
![1-vasu](https://www.udayavani.com/wp-content/uploads/2024/12/1-vasu-150x97.jpg)
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
![Kuwait-PM](https://www.udayavani.com/wp-content/uploads/2024/12/Kuwait-PM-150x90.jpg)
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
![police crime](https://www.udayavani.com/wp-content/uploads/2024/12/police-crime-1-150x92.jpg)
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
![mohan bhagwat](https://www.udayavani.com/wp-content/uploads/2024/12/mohan-bhagwat-150x90.jpg)
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.