![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 13, 2019, 4:28 PM IST
ಗುರುದಾಸ್ಪುರ : ಪಂಜಾಬ್ ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಬಾಲಿವುಡ್ ನಟ ಸನ್ನಿ ದೇವಲ್ ಅವರಿಂದು ಸರಣಿ ವಾಹನ ಅಪಘಾತದಲ್ಲಿ ಸಿಲುಕಿಯೂ ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶ ಪಾರಾದರೆಂದು ಪೊಲೀಸರು ತಿಳಿಸಿದ್ದಾರೆ. ದೇವಲ್ ಮಾತ್ರವಲ್ಲದೆ ಯಾರೊಬ್ಬರೂ ಈ ಸರಣಿ ಅವಘಡದಲ್ಲಿ ಗಾಯಗೊಳ್ಳಲಿಲ್ಲ ಎನ್ನುವುದು ಇನ್ನೊಂದ ವಿಶೇಷ.
ಸೋಹಾಲ್ ಗ್ರಾಮದಲ್ಲಿನ ಗುರುದ್ವಾರದ ಸಮೀಪ ಸಾಗುತ್ತಿದ್ದಂತೆಯೇ ಸನ್ನಿ ದೇವಲ್ ಅವರ ಕಾರಿನ ಒಂದು ಟೈರ್ ಸ್ಫೋಟಗೊಂಡಿತು. ಪರಿಣಾಮವಾಗಿ ಅವರ ಮೂರು ಕಾರು ಮತ್ತು ಗ್ರಾಮಸ್ಥರೊಬ್ಬರ ಒಂದು ಕಾರು ಸೇರಿದಂತೆ ಒಟ್ಟು ನಾಲ್ಕು ಕಾರುಗಳು ಹಾನಿಗೊಂಡವು. ಸುದೈವದಿಂದ ಸನ್ನಿ ದೇವಲ್ ಅವರಿಗೆ ಯಾವುದೇ ಗಾಯಗಳಾಗಲಿಲ್ಲ.
ದೇವಲ್ ಅವರು ಫತೇಗಢ ಶೂರಿಯಾನ್ ನಲ್ಲಿ ಚುನವಾಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಗಾಯಗಳಿಲ್ಲದ ಪಾರಾದ ಅವರು ಅನಂತರ ತಮ್ಮ ಪ್ರಯಾಣ ಮುಂದುವರಿಸಿದರು ಎಂದು ಗುರುದಾಸ್ಪುರ ಡಿವೈಎಸ್ಪಿ ಮಂಜಿತ್ ಸಿಂಗ್ ಹೇಳಿದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.