![Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ](https://www.udayavani.com/wp-content/uploads/2025/02/puttur-1-415x260.jpg)
![Puttur Temple: ತೆಂಗಿನ ಮರ ತೆರವು ವೇಳೆ ಕಾರ್ಮಿಕನಿಗೆ ಗಾಯ](https://www.udayavani.com/wp-content/uploads/2025/02/puttur-1-415x260.jpg)
Team Udayavani, Sep 1, 2021, 6:46 AM IST
ಹೊಸದಿಲ್ಲಿ: ಸುಪ್ರೀಂ ಕೋರ್ಟ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೂವರು ಮಹಿಳಾ ನ್ಯಾಯ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮಂದಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಪದೋನ್ನತಿ ಪಡೆದ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಇದರೊಂದಿಗೆ ಒಟ್ಟು 34 ನ್ಯಾಯಮೂರ್ತಿಗಳ ಹುದ್ದೆಗಳ ಪೈಕಿ 33 ಭರ್ತಿಯಾದಂತಾಗಿದೆ.
ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ| ಅಭಯ ಶ್ರೀನಿವಾಸ್ ಓಕಾ, ಕರ್ನಾಟಕ ಹೈಕೋರ್ಟ್ನ ನ್ಯಾ| ಬಿ.ವಿ.ನಾಗರತ್ನ, ನ್ಯಾ| ವಿಕ್ರಮ್ ನಾಥ್, ನ್ಯಾ| ಜಿತೇಂದ್ರ ಕುಮಾರ್ ಮಹೇಶ್ವರಿ, ನ್ಯಾ|ಹಿಮಾ ಕೋಹ್ಲಿ, ನ್ಯಾ| ಸಿ.ಟಿ.ರವಿ ಕುಮಾರ್, ನ್ಯಾ| ಎಂ.ಎಂ.ಸುಂದರೇಶ್, ನ್ಯಾ| ಬೇಲಾ ಎಂ.ತ್ರಿವೇದಿ, ವಕೀಲರ ವಿಭಾಗದಿಂದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯ ಮೂರ್ತಿಗಳು. ನೂತನ ನ್ಯಾಯಮೂರ್ತಿಗಳ ಪೈಕಿ ನ್ಯಾ| ವಿಕ್ರಮ್ ನಾಥ್, ನ್ಯಾ| ಬಿ.ವಿ.ನಾಗರತ್ನ, ನ್ಯಾ| ಪಿ.ಎಸ್.ನರಸಿಂಹ ಸೇವಾ ಜ್ಯೇಷ್ಠತೆ ಆಧಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ. ಈ ಪೈಕಿ ನ್ಯಾ| ಬಿ.ವಿ.ನಾಗರತ್ನ ಅವರು 2027ರಲ್ಲಿ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ.
Maha Kumbh; ಮೋದಿ ನೇತೃತ್ವದಲ್ಲಿ ಮೊದಲ ಬಾರಿಗೆ ದೇಶದ ನಂಬಿಕೆಗೆ ಗೌರವ ಸಿಕ್ಕಿದೆ: ಯೋಗಿ
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್ ಪತ್ರಿಕೆ
ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ
Earthquake: ಪ್ರಬಲ ಭೂಕಂಪ: ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ದೆಹಲಿ ಜನ.. 4.0ತೀವ್ರತೆ ದಾಖಲು
You seem to have an Ad Blocker on.
To continue reading, please turn it off or whitelist Udayavani.