Kejriwal ವಿರುದ್ಧ ಎಫ್ ಐಆರ್ ದಾಖಲಿಸಬೇಕು: ಸ್ವಾತಿ ಮಲಿವಾಲ್ ಮಾಜಿ ಪತಿ
ನಾನು ಖಂಡಿತವಾಗಿಯೂ ಸಹಾಯ ಮಾಡುತ್ತೇನೆ.... ಸಂಜಯ್ ಸಿಂಗ್ ದೆಹಲಿ ಸಿಎಂ ಸಾಕಿದ ಗಿಳಿ
Team Udayavani, May 15, 2024, 2:23 PM IST
ಹೊಸದಿಲ್ಲಿ:ಎಎಪಿಯ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಮಾಜಿ ಪತಿ ನವೀನ್ ಜೈಹಿಂದ್ ಪ್ರತಿಕ್ರಿಯೆ ನೀಡಿದ್ದು, “ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕು ಏಕೆಂದರೆ ಅವರ ಮನೆಯಲ್ಲಿ ಘಟನೆ ನಡೆದಿದೆ. ಸಂಜಯ್ ಸಿಂಗ್ ಅರವಿಂದ್ ಕೇಜ್ರಿವಾಲ್ ಸಾಕಿದ ಗಿಳಿ. ಘಟನೆ ನಡೆಯುತ್ತದೆ ಎಂದು ಸಿಂಗ್ ಅವರಿಗೆ ತಿಳಿದಿತ್ತು, ಏನಾಯಿತು ಎಂದೂ ಅವರಿಗೆ ತಿಳಿದಿದೆ” ಎಂದು ಹೇಳಿದ್ದಾರೆ.
“ನೀವು ಆ ಸಿಎಂ ಭವನ ಎಂದು ಕರೆಯಿರಿ, ಅದು ನಿಜವಾಗಿಯೂ ಗಟಾರ. ಇದೊಂದು ಅಪಾಯಕಾರಿ ಘಟನೆ. ಇದೊಂದು ದೊಡ್ಡ ಹಗರಣ. ಸ್ವಾತಿ ಪ್ರಾಣಕ್ಕೆ ಅಪಾಯವಿದೆ, ಬೆದರಿಕೆ ಹಾಕಲಾಗಿದೆ, ಇಲ್ಲದಿದ್ದರೆ ಯಾರೂ ಹಾಗೆ ಪೊಲೀಸರಿಗೆ ಕರೆ ಮಾಡುವುದಿಲ್ಲ ಅಥವಾ ಪೊಲೀಸ್ ಠಾಣೆಯಿಂದ ಹಿಂತಿರುಗಿದ ಬಳಿಕ ಆಕೆಯನ್ನು ಇನ್ನಷ್ಟು ಮೌನಗೊಳಿಸಲಾಗುತ್ತಿದೆ” ಎಂದು ನವೀನ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
”ಇದು ನನ್ನ ವೈಯಕ್ತಿಕ ವಿಚಾರವಲ್ಲ. ಗೃಹ ಸಚಿವಾಲಯ, ದೆಹಲಿ ಪೋಲೀಸ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮೌನದ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ಆಕೆಯ ಜೀವಕ್ಕೆ ಬೆದರಿಕೆ ಇದ್ದು, ಕ್ರಮ ಕೈಗೊಳ್ಳಲೇಬೇಕು. ಸ್ವಾತಿ ಹೊರಗೆ ಬರಬೇಕು.ಅವಳು ಮೌನವಾಗಿರಲು ಸಾಧ್ಯವಿಲ್ಲ, ಆಕೆಯ ಮೇಲೆ ಯಾವ ಒತ್ತಡ ಹೇರಲಾಗಿದೆ ಎಂದು ನನಗೆ ತಿಳಿದಿಲ್ಲ.ದೆಹಲಿ ಪೊಲೀಸರು ಗಮನಹರಿಸಬೇಕು. ನನ್ನ ಸಹಾಯವನ್ನು ಕೇಳಿದರೆ, ನಾನು ಖಂಡಿತವಾಗಿಯೂ ಸಹಾಯ ಮಾಡುತ್ತೇನೆ. ಜನರೂ ಸಿದ್ಧರಾಗಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಅವರು ಮುಖ್ಯಮಂತ್ರಿಗಳ ನಿವಾಸದಲ್ಲೇ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
2020 ರಲ್ಲಿ ವಿಚ್ಛೇದನ
2012 ರಲ್ಲಿ ಸ್ವಾತಿ ಅವರನ್ನು ನವೀನ್ ಜೈಹಿಂದ್ ವಿವಾಹವಾಗಿದ್ದರು. ಇಬ್ಬರೂ ಜೈಹಿಂದ್ ಜನಲೋಕಪಾಲ್ ಮತ್ತು ಆರ್ ಟಿ ಐ ಚಳುವಳಿಯ ಆರಂಭಿಕ ದಿನಗಳಲ್ಲಿ ಭೇಟಿಯಾಗಿದ್ದರು. ಅಣ್ಣಾ ಹಜಾರೆ ಹೋರಾಟ ತಂಡದ ಪ್ರಮುಖ ಭಾಗವಾಗಿದ್ದರು. ನವೀನ್ ರೋಹ್ಟಕ್ ಲೋಕಸಭೆಗೆ ಆಪ್ ಅಭ್ಯರ್ಥಿಯಾಗಿದ್ದರು.ಫೆಬ್ರವರಿ 2020 ರಲ್ಲಿ ದಂಪತಿಗಳು ವಿಚ್ಛೇದನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.