Tamil Nadu: ರಾಜ್ಯಪಾಲದ ಜಾತ್ಯತೀತತೆ ಹೇಳಿಕೆಗೆ ಕಿಡಿ
Team Udayavani, Sep 25, 2024, 12:25 AM IST
ಚೆನ್ನೈ: “ಜಾತ್ಯತೀತತೆಯು ಐರೋಪ್ಯ ಪರಿಕಲ್ಪನೆಯಾಗಿದ್ದು, ಭಾರತಕ್ಕೆ ಅದರ ಅಗತ್ಯವಿಲ್ಲ’ ಎಂಬ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇಂತಹ ವ್ಯಕ್ತಿಯನ್ನು ಕೇಂದ್ರ ಸರಕಾರವು ಸಾಂವಿಧಾನಿಕ ಹುದ್ದೆಗೆ ನೇಮಿಸಿದ್ದು ಹೇಗೆಂದು ವಿಪಕ್ಷಗಳು ಪ್ರಶ್ನಿಸಿವೆ.
ರವಿ ಹೇಳಿಕೆಗೆ ಆಕ್ಷೇಪಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್, ಈ ವ್ಯಕ್ತಿ ಸಂವಿಧಾನದ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದಾರೆಂದು ನಾನು ಭಾವಿಸುತ್ತೇನೆ. ಮನುಸ್ಮತಿ ಜಾರಿಗೊಳಿಸುವ ಆರ್ಎಸ್ಎಸ್ ಮನಃಸ್ಥಿತಿಯನ್ನು ಬಿಂಬಿಸುವ ಇಂಥವರು ಮುಂದೊಂದು ದಿನ ಸಂವಿಧಾನವನ್ನೇ ವಿದೇಶಿ ಪರಿಕಲ್ಪನೆ ಎನ್ನಬಹುದು ಎಂದು ಟೀಕಿಸಿದ್ದಾರೆ.
“ಅಂಬೇಡ್ಕರ್ ದೇವಪ್ರಭುತ್ವ ಪರಿಕಲ್ಪನೆಯನ್ನು ತಿರಸ್ಕರಿಸಿದ್ದರು. ಜಾತ್ಯತೀತತೆ ಎಂದರೆ ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕಿಸುವುದಾಗಿದ್ದು, ಚುನಾವಣ ಉದ್ದೇಶಗಳಿಗಾಗಿ ದೇವರನ್ನು ಎಳೆದು ತರಬೇಡಿ’ ಎಂದು ಸಿಪಿಐ ನಾಯಕ ಡಿ.ರಾಜಾ ಹೇಳಿದ್ದಾರೆ.
ರಾಜ್ಯಪಾಲರ ಹೇಳಿಕೆ ಒಪ್ಪುವುದೇ ಆದರೆ ಒಕ್ಕೂಟ ವ್ಯವಸ್ಥೆಯೂ ಐರೋಪ್ಯ ವಲ್ಲವೇ? ಹಾಗೆಂದು ಅದನ್ನು ಕಿತ್ತೂಗೆ ಯಲಾಗುತ್ತದೆಯೇ ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.