![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 5, 2018, 12:57 PM IST
ಹೊಸದಿಲ್ಲಿ: ದೇಶದಲ್ಲಿನ ಎಂಟು ರಾಜ್ಯಗಳು ಅಂಗನವಾಡಿಯಲ್ಲಿ ಮಕ್ಕಳ ಪೌಷ್ಟಿಕಾಂಶ ಮೇಲ್ವಿಚಾರಣೆ ಮಾಡುವುದಕ್ಕಾಗಿ 2 ಲಕ್ಷ ಸ್ಮಾರ್ಟ್ಫೋನ್ಗಳು ಹಾಗೂ ಟ್ಯಾಬ್ಲೆಟ್ಗಳನ್ನು ಖರೀದಿಸಿವೆ. ಪೋಷಣ ಅಭಿಯಾನ್ ಅಡಿಯಲ್ಲಿ ಈ ಖರೀದಿ ಮಾಡಲಾಗಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ, ಅನಿಮಿಯಾ ಹಾಗೂ ಕಡಿಮೆ ತೂಕ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಪೋಷಣ ಅಭಿಯಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳಲ್ಲಿ ಇರುವ ಅಪ್ಲಿಕೇಶನ್ನಲ್ಲಿ ಮಾಹಿತಿ ಭರ್ತಿ ಮಾಡಲಾಗುತ್ತದೆ. ಈ ಮೂಲಕ ಪ್ರತಿ ಗ್ರಾಮದ ಪೌಷ್ಠಿಕಾಂಶದ ಪ್ರೊಫೈಲ್ ಅನ್ನು ಪಡೆಯಲಾಗುತ್ತದೆ. ಪ್ರತಿ ಗ್ರಾಮದ ವರದಿಯೂ ಈ ಅಪ್ಲಿಕೇಶನ್ನಲ್ಲಿ ಲಭ್ಯವಾಗುತ್ತದೆ. ದೇಶಾದ್ಯಂತ ಎಲ್ಲ ಅಂಗನವಾಡಿಗಳಿಗೆ ಒಟ್ಟು 11 ಲಕ್ಷ ಸ್ಮಾರ್ಟ್ಫೋನ್ಗಳು ಅಗತ್ಯವಿವೆ. ಆಂಧ್ರಪ್ರದೇಶ, ಬಿಹಾರ, ಛತ್ತೀಸ್ಗಡ, ಜಾರ್ಖಂಡ್, ಮಧ್ಯಪ್ರದೇಶ, ಪುದುಶೆÏàರಿ, ರಾಜಸ್ಥಾನ, ಉತ್ತರ ಪ್ರದೇಶ, ಕೇಂದ್ರಾಡಳಿತ ಪ್ರದೇಶವಾಗಿರುವ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ.
ಎಲ್ಲ ಕಡೆಯೂ ಇಂಟರ್ನೆಟ್ ಸೌಲಭ್ಯ ಇಲ್ಲದ್ದರಿಂದ, ಇದು ಆಫ್ಲೈನ್ನಲ್ಲೂ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಸೌಲಭ್ಯ ಕಡಿಮೆ ಇರುವಲ್ಲಿಯೂ ಈ ಅಪ್ಲಿಕೇಶನ್ ಬಳಸಿ ಮಾಹಿತಿ ಭರ್ತಿ ಮಾಡಬಹುದಾಗಿದೆ. ಅಂಗನವಾಡಿ ಯಲ್ಲಿ ದಾಖಲಿಸಿದ ಮಾಹಿತಿಯನ್ನು ಮೇಲ್ವಿಚಾರಕರಿಗೆ ಹಸ್ತಾಂತರಿಸಲಾಗುತ್ತದೆ. ಅವರು ಅದನ್ನು ಡೇಟಾಬೇಸ್ ಸರ್ವರ್ಗೆ ಭರ್ತಿ ಮಾಡುತ್ತಾರೆ. ದತ್ತಾಂಶವನ್ನು ಸಚಿವಾ ಲಯದ ಮಟ್ಟವೂ ಸೇರಿದಂತೆ ಸಂಬಂಧಿತರು ನೋಡಬಹುದಾಗಿದೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.