![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 20, 2022, 8:30 PM IST
ಚೆನ್ನೈ: “ತಮಿಳು ಒಂದು ರಾಷ್ಟ್ರೀಯ ಭಾಷೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ತಮಿಳುನಾಡು ಪ್ರವಾಸದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದ್ದಾರೆ. “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಮಿಳು ಕೂಡ ಒಂದು ರಾಷ್ಟ್ರೀಯ ಭಾಷೆ. ಶಿಕ್ಷಣ ಯಾವಾಗಲೂ ಮಾತೃಭಾಷೆಯಲ್ಲೇ ಸಿಗಬೇಕು. ಇದಕ್ಕೆ ಯಾರಿಂದಲೂ ತರ್ಕಬದ್ಧ ವಿರೋಧ ಕಾಣಿಸುತ್ತಿಲ್ಲ. ಇಂದು ಕೆಲವರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಅವರೂ ಮುಂದೆ ಹೊಸ ನೀತಿಯನ್ನು ಒಪ್ಪಿಕೊಳ್ಳಲಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.
ತಮಿಳುನಾಡು ಅತ್ಯುತ್ತಮ ಶಿಕ್ಷಣ ಪರಂಪರೆ ಹೊಂದಿದ್ದು, ಅದನ್ನು ಮುಂದುವರಿಸುತ್ತದೆ ಎನ್ನುವ ನಂಬಿಕೆ ನಮಗಿದೆ ಎಂದೂ ಅವರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.