![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-415x258.jpg)
ಸ್ಟಾಲಿನ್ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ
Team Udayavani, May 27, 2022, 7:17 PM IST
![ಸ್ಟಾಲಿನ್ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ](https://www.udayavani.com/wp-content/uploads/2022/05/Annamalai-1-620x349.jpg)
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮಿಳುನಾಡು ಭೇಟಿ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ “ರಾಜಕೀಯ ನಾಟಕ’ವಾಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
“ವೇದಿಕೆಯಲ್ಲಿ ಸ್ಟಾಲಿನ್ ಆಡಿರುವ ಮಾತುಗಳು ಹೇಗೆ ರಾಜಕೀಯವಾಗಿ ನಾಟಕವಾಡಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ. ಕತ್ಛಥೀವು ದ್ವೀಪವನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡಿದ್ದು ಇಂದಿರಾಗಾಂಧಿ ಮತ್ತು ಡಿಎಂಕೆ ನಾಯಕ ಕರುಣಾನಿಧಿ. 1976ರಲ್ಲಿ ಒಪ್ಪಂದ ಉಲ್ಲಂಘಿಸಿ ಅದನ್ನು ಸಂಪೂರ್ಣವಾಗಿ ಲಂಕಾಗೆ ಕೊಟ್ಟುಬಿಟ್ಟರು. ಈಗ ಆ ದ್ವೀಪವನ್ನು ಮರಳಿ ಕೊಡಿಸಿ ಎಂದು ಮೋದಿಯವರನ್ನು ಕೇಳಲು ಸಿಎಂ ಸ್ಟಾಲಿನ್ಗೆ ಎಷ್ಟು ಧೈರ್ಯವಿರಬೇಕು? ನೀವು ನಮಗೆ ಪಾಠ ಕಲಿಸಬೇಕಾಗಿಲ್ಲ. ಕತ್ಛಥೀವುವನ್ನು ಹೇಗೆ ಮರಳಿ ಪಡೆಯಬೇಕು ಎಂಬುದು ನಮಗೆ ಗೊತ್ತು.
ಸ್ಟಾಲಿನ್ ಕುಟುಂಬವೊಂದನ್ನು ಬಿಟ್ಟು ಪ್ರತಿಯೊಬ್ಬ ತಮಿಳನಿಗೂ ಈ ದ್ವೀಪವನ್ನು ವಾಪಸ್ ಪಡೆಯುವ ಬಗ್ಗೆ ಮಾತನಾಡುವ ಅಧಿಕಾರವಿದೆ’ ಎಂದು ಅಣ್ಣಾಮಲೈ ಆಕ್ರೋಶಭರಿತರಾಗಿ ನುಡಿದಿದ್ದಾರೆ.
ಅಷ್ಟೇ ಅಲ್ಲ, ಜಿಎಸ್ಟಿ ಪ್ರಕ್ರಿಯೆಯ ಬಗ್ಗೆ ಮಾಹಿತಿಯೇ ಇಲ್ಲದ ಸ್ಟಾಲಿನ್ ಅವರು, ಜಿಎಸ್ಟಿ ಬಗ್ಗೆ ಮಾತಾಡುತ್ತಾರೆ. ಆ ಮೂಲಕ ತಮಿಳುನಾಡಿನ ಜನರ ಮರ್ಯಾದೆ ತೆಗೆಯುತ್ತಾರೆ. ಜಿಎಸ್ಟಿ ಬಾಕಿಯನ್ನು ಪಾವತಿಸಬೇಕಾದದ್ದು ಜಿಎಸ್ಟಿ ಮಂಡಳಿಯೇ ಹೊರತು ವಿತ್ತ ಸಚಿವರಲ್ಲ. ಇದಕ್ಕೂ ಸಚಿವರಿಗೂ ಸಂಬಂಧವೇ ಇಲ್ಲ ಎಂದೂ ಅಣ್ಣಾಮಲೈ ಹೇಳಿದ್ದಾರೆ.
ಜತೆಗೆ, ಸ್ಟಾಲಿನ್ ಅವರ ನಡವಳಿಕೆಯು ತಮಿಳುನಾಡಿವ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆ ಎಂದೂ ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-415x258.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![supreem](https://www.udayavani.com/wp-content/uploads/2024/07/supreem-150x94.jpg)
NEET-UG ಪರೀಕ್ಷೆ ರದ್ದುಗೊಳಿಸದಂತೆ ನಿರ್ದೇಶನ ನೀಡಿ: 50 ಕ್ಕೂ ಹೆಚ್ಚು ಅಭ್ಯರ್ಥಿಗಳ ಮನವಿ
![Up-Police](https://www.udayavani.com/wp-content/uploads/2024/07/Up-Police-150x90.jpg)
Uttara Pradesh: ಹಾಥರಸ್ ದುರಂತಕ್ಕೆ ಸಂಬಂಧಿಸಿ 6 ಮಂದಿ ಬಂಧನ
![1-hemanth-soren-CM](https://www.udayavani.com/wp-content/uploads/2024/07/1-hemanth-soren-CM-150x97.jpg)
Jharkhand; ಮತ್ತೆ ಸಿಎಂ ಆಗಿ ಹೇಮಂತ್ ಪ್ರಮಾಣವಚನ: ಶಿಬು ಸೊರೇನ್ ಭಾಗಿ
![Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ](https://www.udayavani.com/wp-content/uploads/2024/07/hyda-150x83.jpg)
Hyderabad; ಹತ್ತರ ಬಾಲಕಿಯ ಮೇಲೆ ಮುಗಿಬಿದ್ದ ಹತ್ತು ಮಂದಿ ದುರುಳರು; ಬಾಲಕಿ ಈಗ ಗರ್ಭಿಣಿ
![CCTV: ಪ್ರಯಾಣಿಕರೇ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…](https://www.udayavani.com/wp-content/uploads/2024/07/bus-2-150x84.jpg)
Video: ಪ್ರಯಾಣಿಕರೇ ಗಮನಿಸಿ… ಬಸ್ಸಿನ ಬಾಗಿಲ ಬಳಿ ನಿಲ್ಲುವಾಗ ಇರಲಿ ಎಚ್ಚರ, ತಪ್ಪಿದರೆ…
MUST WATCH
ಹೊಸ ಸೇರ್ಪಡೆ
![Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು](https://www.udayavani.com/wp-content/uploads/2024/07/kollur-150x93.jpg)
Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು
![Dengue-nagendra](https://www.udayavani.com/wp-content/uploads/2024/07/Dengue-nagendra-150x90.jpg)
Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!
![1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್](https://www.udayavani.com/wp-content/uploads/2024/07/world-cup-150x83.jpg)
1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್
![1-asdsad](https://www.udayavani.com/wp-content/uploads/2024/07/1-asdsad-150x100.jpg)
Police ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ಶಾಸಕ ಕಂದಕೂರ ರಾಜೀನಾಮೆ ಎಚ್ಚರಿಕೆ
![Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ](https://www.udayavani.com/wp-content/uploads/2024/07/sagara-1-150x85.jpg)
Sagara ಹಣ ಬಿಡುಗಡೆ ಮಾಡಿಸದೆ ಅವಧಿ ಪೂರೈಸಿದ ಹಾಲಪ್ಪ; ಬೇಳೂರು ವ್ಯಂಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.