![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 19, 2022, 7:00 AM IST
ಚೆನ್ನೈ: ಪ್ರಸಿದ್ಧ ಐಟಿ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್(ಟಿಸಿಎಸ್)ನಲ್ಲಿ ಕೆಲಸದಿಂದ ತೆಗೆದುಹಾಕಲಾಗಿದ್ದ ಇಂಜಿನಿಯರ್ ಒಬ್ಬರು ಬರೋಬ್ಬರಿ 7 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ ಇದೀಗ ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ತಮಿಳುನಾಡಿನ ತಿರುಮಲೈ ಸೆಲ್ವನ್ 2015ರವರೆಗೆ ಒಟ್ಟು 8 ವರ್ಷಗಳ ಕಾಲ ಟಿಸಿಎಸ್ನಲ್ಲಿ ಕೆಲಸ ಮಾಡಿದ್ದರು. ಉತ್ತಮವಾಗಿ ಕೆಲಸ ಮಾಡಿಕೊಂಡು ಬಂದಿದ್ದ ಅವರಿಗೆ ಮ್ಯಾನೇಜರ್ ಹುದ್ದೆಯೂ ಸಿಕ್ಕಿತ್ತು. ಆದರೆ 2015ರಲ್ಲಿ ಸಂಸ್ಥೆಯು, “ಕೆಲಸ ಸರಿಯಾಗಿ ಮಾಡುತ್ತಿಲ್ಲ’ ಎನ್ನುವ ಕಾರಣ ಕೊಟ್ಟು ತಿರುಮಲೈ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು.
ಈ ವಿಚಾರವಾಗಿ ತಿರುಮಲೈ ಐಟಿ ಉದ್ಯೋಗಿಗಳ ಫೋರಂನೊಂದಿಗೆ ಸೇರಿಕೊಂಡು ಚೆನ್ನೈನ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬರೋಬ್ಬರಿ 7 ವರ್ಷಗಳ ಕಾಲ ವಿಚಾರಣೆ ನಡೆಸಿರುವ ನ್ಯಾಯಾಲಯ ಈ ತಿಂಗಳು ತೀರ್ಪು ನೀಡಿದೆ.
“ತಿರುಮಲೈ ಮಾಮೂಲಿ ಕೆಲಸಗಾರನಾಗಿರಲಿಲ್ಲ. ಕೌಶಲ್ಯ ಇದ್ದಿದ್ದರಿಂದಾಗಿಯೇ ಮ್ಯಾನೇಜರ್ ಹುದ್ದೆವರೆಗೆ ತಲುಪಿದ್ದರು ಹಾಗಾಗಿ ಅವರನ್ನು ವಾಪಸು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕಳೆದ 7 ವರ್ಷಗಳ ಸಂಬಳವನ್ನೂ ಅವರಿಗೆ ಕೊಡಬೇಕು’ ಎಂದು ಟಿಸಿಎಸ್ಗೆ ನ್ಯಾಯಾಲಯ ಆದೇಶಿಸಿದೆ.
ಕಳೆದ 7 ವರ್ಷಗಳಿಂದ ಪಟ್ಟ ಕಟ್ಟ ಅಷ್ಟಿಷ್ಟಲ್ಲ. 150ಕ್ಕೂ ಹೆಚ್ಚು ಬಾರಿ ಕೋರ್ಟ್ಗೆ ಸುತ್ತಿದ್ದೇನೆ. ಹೆಂಡತಿಯ ಹಣದಲ್ಲಿ ಜೀವನ ನಡೆಸಿದ್ದೇನೆ. ಈಗ ಗೆದ್ದ ಖುಷಿಯಿದೆ.
– ತಿರುಮಲೈ ಸೆಲ್ವನ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.