![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 9, 2021, 7:15 AM IST
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಅಧಿಕಾರ ಕಳೆದು ಕೊಂಡಿರುವ ಟಿಡಿಪಿಗೆ ತೆಲಂಗಾಣದಲ್ಲೂ ಹಿನ್ನಡೆಯಾಗಿದೆ. ತೆಲಂಗಾಣ ವಿಧಾನಸಭೆಯಲ್ಲಿ ಇದ್ದ ಇಬ್ಬರು ಟಿಡಿಪಿ ಶಾಸಕರು ಆಡಳಿತಾರೂಡ ತೆಲಂಗಾಣ ರಾಷ್ಟ್ರ ಸಮಿತಿಗೆ ಸೇರ್ಪಡೆಯಾಗಿದ್ದಾರೆ.
ಹೀಗಾಗಿ, ಅಲ್ಲಿನ ವಿಧಾನಸಭೆಯಲ್ಲಿ ಚಂದ್ರಬಾಬು ನಾಯ್ಡು ಅವರ ಪಕ್ಷದ ಒಬ್ಬರೇ ಒಬ್ಬ ಶಾಸಕರು ಇಲ್ಲದಂತಾಗಿದೆ. ಶಾಸಕರಾದ ಮೆಚ ನಾಗೇಶ್ವರ ರಾವ್ ಮತ್ತು ಸಾಂದ್ರ ವೆಂಕಟ ವೀರಯ್ಯ ಟಿಆರ್ಎಸ್ಗೆ ಸೇರಿದವರು. ಇದರಿಂದಾಗಿ 119 ಮಂದಿ ಸದಸ್ಯ ಬಲ ಇರುವ ವಿಧಾನಸಭೆಯಲ್ಲಿ ಟಿಆರ್ಎಸ್ ಬಲ 100ಕ್ಕೆ ಏರಿದೆ. 2018ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕವಲಕುಂಟ ಚಂದ್ರಶೇಖರ ರಾವ್ ನೇತೃತ್ವದ ಟಿಆರ್ಎಸ್ 88 ಸ್ಥಾನಗಳನ್ನು ಗೆದ್ದುಕೊಂಡು ಅಧಿಕಾರ ಉಳಿಸಿ ಕೊಂಡಿತ್ತು. ಇದಾದ ಬಳಿಕ ಕೆಲವೇ ಸಮಯದ ಬಳಿಕ ವಿಪಕ್ಷ ಕಾಂಗ್ರೆಸ್ನ 18 ಶಾಸಕರ ಪೈಕಿ 12 ಮಂದಿ ಆಡಳಿತ ಪಕ್ಷಕ್ಕೆ ಸೇರಿಕೊಂಡಿದ್ದರು.
ನಾಗಾರ್ಜುನ ಕ್ಷೇತ್ರದ ಕಾಂಗ್ರೆಸ್ ಶಾಸಕ ನೋಮುಲ ನರಸಿಂಹಯ್ಯ ಡಿಸೆಂಬರ್ನಲ್ಲಿ ಅಸುನೀ ಗಿದ್ದರು. ಹೀಗಾಗಿ ಸದ್ಯ ಆಡಳಿತ ಪಕ್ಷದ ಬಲ 99 ಆಗಿತ್ತು. ಆ ಸ್ಥಾನಕ್ಕೆ ಎ.17ರಂದು ಚುನಾವಣೆ ನಡೆಯಲಿದೆ. ಇದೀಗ ಇಬ್ಬರು ಶಾಸಕರು ಸೇರ್ಪಡೆಯಾಗಿರುವುದರಿಂದ ಮತ್ತೆ ಟಿಆರ್ಎಸ್ ಶಾಸಕರ ಸಂಖ್ಯೆ 100 ದಾಟಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.