ಈ ಕಾರಣದಿಂದ ಬುರ್ಖಾ ಧರಿಸಿಕೊಂಡು ರಸ್ತೆಯಲ್ಲಿ ತಿರುಗಿದ ದೇವಸ್ಥಾನದ ಆರ್ಚಕ: ಮುಂದೆ ಆದದ್ದು..
Team Udayavani, Oct 9, 2022, 3:06 PM IST
ತಿರುವನಂತಪುರಂ: ದೇವಸ್ಥಾನದ ಆರ್ಚಕನೊಬ್ಬ ಬುರ್ಖಾ ಧರಿಸಿಕೊಂಡು ರಸ್ತೆ ಬದಿಯಲ್ಲಿ ತಿರುಗಿ ಜನರ ಕೈಗೆ ಸಿಕ್ಕಿಬಿದ್ದ ವಿಲಕ್ಷಣ ಘಟನೆ ಕೇರಳದ ಕೊಯಿಲಾಂಡಿಯಲ್ಲಿ ನಡೆದಿದೆ.
ಜಿಷ್ಣು ನಂಬೂದಿರಿ (27) ಮೆಪ್ಪಯೂರ್ ಹತ್ತಿರದ ದೇವಸ್ಥಾನದಲ್ಲಿ ಆರ್ಚಕರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಬುರ್ಖಾ ಹಾಕಿಕೊಂಡು ರಸ್ತೆಯಲ್ಲಿ ತಿರುಗುತ್ತಿದ್ದಾಗ, ಸಂಶಯಗೊಂಡ ಸ್ಥಳೀಯರು ಕೊಯಿಲಾಂಡಿ ಜಂಕ್ಷನ್ ಬಳಿ ತಡೆದು ವಿಚಾರಿಸಿದಾಗ, ಬುರ್ಖಾದೊಳಗಿರುವುದು ಪುರುಷ ಎಂದು ಗೊತ್ತಾಗಿದೆ.
ಸ್ಥಳೀಯರ ಬಳಿ ತನಗೆ ಚಿಕನ್ ಫಾಕ್ಸ್ ಇದೆ ಆ ಕಾರಣದಿಂದ ಬುರ್ಖಾ ಹಾಕಿಕೊಂಡು ತಿರುಗಾಡುತ್ತಿದ್ದೇನೆ ಎಂದಿದ್ದಾರೆ. ಸ್ಥಳೀಯರು ಬುರ್ಖಾ ಹಾಕಿಕೊಂಡು ಸಂಶಯದಿಂದ ಅಲೆದಾಡುತ್ತಿರುವ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆದರೆ ಪೊಲೀಸರಿಗೆ ಆರ್ಚಕನಲ್ಲಿ ಚಿಕನ್ ಫಾಕ್ಸ್ ನ ಯಾವುದೇ ಪ್ರಾಥಮಿಕ ಲಕ್ಷಣ ಕಂಡು ಬಂದಿಲ್ಲ ಎಂದು ಪಿಟಿಐ ವರದಿ ತಿಳಿಸಿದೆ.
ವ್ಯಕ್ತಿಯ ಬಗ್ಗೆ ವಿಚಾರಿಸಿ, ಆತನ ವಿಳಾಸವೆಲ್ಲ ಪರಿಶೀಲಿಸಿದ ಬಳಿಕ, ಠಾಣೆಗೆ ಆತನ ಸಂಬಂಧಿಕರು ಬಂದ ನಂತರ ವಿಚಾರಣೆ ನಡೆಸಿ ಬಿಟ್ಟಿದ್ದೇವೆ. ಆತ ಯಾವುದೇ ಅಪರಾಧವೆಸಗಿಲ್ಲ, ಈ ಕಾರಣದಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.